ಬುಧವಾರ, ಡಿಸೆಂಬರ್ 21, 2011

ಬಣ್ಣ ಕಳೆದುಕೊಳ್ಳುತ್ತಿರುವ ಕೊಂಡಮಾಮರ ಸಾಂಸ್ಕೃತಿಕ ಬದುಕು

           ಆದಿಮ ಕಾಲದಲ್ಲಿ ಕಾಡುವಾಸಿಯಾದ ಮಾನವನು, ಹೊಟ್ಟೆ ಹೊರೆಯಲು ಪ್ರಾಣಿ ಪಕ್ಷಿಗಳನ್ನು ಬೇಟೆಯಾದುತ್ತಿದ್ದ. ಗಡ್ಡೆಗೆಣಸುಗಳನ್ನು ತಿಂದು ಬದುಕುತ್ತಿದ್ದ. ಚಳಿ ಗಾಳಿ ಮಳೆಯಿಂದ ರಕ್ಷಣೆ ಪಡೆಯಲು ಮರ-ಪೊಟರೆಗಳನ್ನು ಆಶ್ರಯಿಸಿದ್ದ. ಆಹಾರಾನ್ವೇಷಣೆಯು ಇವರನ್ನು ನಿಶ್ಚಿತ ಸ್ಥಳದಲ್ಲಿ ನೆಲನಿಲ್ಲದಂತೆ ಅಲೆಮಾರಿ ಬದುಕು ಇವರದಾಗಿಸಿತ್ತು. ಕಾಲಕ್ರಮೇಣ ವ್ಯವಸಾಯ ಮತ್ತು ಪಶುಪಾಲನೆ ರೂಢಿಗೆ ಬಂದು ಒಂದೆಡೆ ನೆಲೆನಿಂತರು. ಗಂಡು ಹೆಣ್ಣಿನ ಸಹಜೀವನಕ್ಕೆ ವಸತಿಯ ಅಗತ್ಯತೆಯನ್ನು ಅರಿತು ಗುಹಾವಾಸಕ್ಕೆ ತೊಡಗಿದರು-ಹೀಗೆ ಆರಂಭಗೊಂಡ ಸಾಮಾಜಿಕ ಜೀವನ, ಸಾಂಸ್ಕೃತಿಕ ಉಜ್ವಲತೆಗೆ, ಭವ್ಯ ನಾಗರಿಕತೆಗೆ ನಾಂದಿಯಾಯಿತು. ಆಧುನಿಕ ಸಂಸ್ಕೃತಿಯವರಿಗೆ ಮುಂದುವರಿಯಿತು. ಆದರೆ ಕೆಲವು ಮಾನವ ಕುಲಗಳು, ತಮ್ಮ ಆದಿಮ ಬದುಕಿಗೆ ಅಂಟಿಕೊಂಡು ಹಳೆಯ ಸಾಂಸ್ಕೃತಿಕ ಪಳಿಯುಳಿಕೆಗಳ ಪ್ರತೀಕಗಳಾದವು. ಅಲೆಮಾರಿ ಜೀವನವನ್ನು ಅಪ್ಪಿಕೊಂಡು ವಿಶಿಷ್ಟ ಬದುಕಿನೊಂದಿಗೆ ಸಾಂಸ್ಕೃತಿಕ ವೈಶಿಷ್ಟ್ಯವನ್ನು ಕಾಯ್ದುಕೊಂಡು ನಾಗರಿಕ ಸಮಾಜದಿಂದ ದೂರ ಉಳಿದವು. ಆದರೆ ಯಾವ ಸಂಸ್ಕೃತಿಯೂ ಪರಿವರ್ತನಾಶೀಲ ಗುಣದಿಂದ ವಿಮುಖವಾಗುವುದಿಲ್ಲ. ಕಾಲಗತಿಯಲ್ಲಿ ಸಾಂಸ್ಕೃತಿಕ ಸಂಕ್ರಮಣದ ಸ್ಥಿತಿಗೆ ಒಳಪಡಲೇಬೇಕಾಗುತ್ತದೆ. ಹೀಗೆ ಒಳಪಟ್ಟ ಕೊಂಡಮಾಮರ ಸಾಂಸ್ಕೃತಿಕ ಬದುಕಿನ ಮೇಲೊಂದು ನೋಟ.
                                                       
                    ಪೂವರ್ೇತಿಹಾಸ ಹಿನ್ನಲೆಯಿಲ್ಲದ ಜನಾಂಗವಿಲ್ಲ. ಅದು ಅವರಿಗೆ ಪ್ರಾಚೀನ ಪರಂಪರೆಯನ್ನು, ಪೌರಾಣಿಕ ಮತ್ತು ಚಾರಿತ್ರಿಕ ಹಿನ್ನಲೆಯನ್ನು ಒದಗಿಸುವಲ್ಲಿ ಸಹಕಾರಿಯಾಗಿರುತ್ತದೆ. ಅವು ಐತಿಹ್ಯಗಳಾಗಿಯೋ, ಕಾಲ್ಪನಿಕ ಕಥೆಗಳಾಗಿಯೋ, ಹಾಡುಗಬ್ಬಗಳಾಗಿಯೋ ಅಥವಾ ಪ್ರಾದೇಶಿಕ ನಂಬಿಕೆಗಳಾಗಿಯೋ ಲಭ್ಯವಾಗುತ್ತವೆ. ಇವು ನಿಖರವಾದ ದಾಖಲೆಗಳಲ್ಲದಿದ್ದರೂ ಸಾಂಸ್ಕೃತಿಕ ಅಧ್ಯಯನಕ್ಕೆ ಆನುಷಂಗಿಕ ಮಾಹಿತಿಗಳಾಗಬಲ್ಲವು. ಆದರೆ ಅವುಗಳನ್ನು ಅಭಿವ್ಯಕ್ತಿಸುವ, ಲಭ್ಯ ಮಾಹಿತಿಗಳನ್ನು ಸಂರಕ್ಷಿಸಿಡುವ ಪ್ರಜ್ಞಾವಂತಿಕೆ ಈ ಜನಾಂಗದಲ್ಲಿದ್ದ ಹಾಗೆ ಕಾಣುವುದಿಲ್ಲ. ಬಹುಶಃ ತಮ್ಮ ಸಾಂಸ್ಕೃತಿಕ ಬದುಕಿನ ರಹಸ್ಯವನ್ನು ಕಾಯ್ದುಕೊಳ್ಳುವ ಅಥವಾ ಅನ್ಯ ಸಂಸ್ಕ್ರತಿಯೊಂದಿಗೆ ಸಮವಾಗಿ ನಿಲ್ಲಲಾರದ ಕೀಳಿರಿಮೆಯ ಭಾವನೆಯೂ ಇದರ ಹಿಂದೆ ಇರುವ ಹಾಗಿದೆ. ಒಟ್ಟಾರೆ ಅನಕ್ಷರಸ್ಥ ಅಮಾಯಕ ಜನರಾದ ಇವರಿಂದ ಮಾಹಿತಿಗಳನ್ನು ಸಂಗ್ರಹಿಸುವುದು ತ್ರಾಸದಾಯಕವೆಂದೆ ಹೇಳಬೇಕಾಗುತ್ತದೆ. ಆದರೂ ಹಲವಾರು ಮೂಲಗಳಿಂದ ಸಂಗ್ರಹಿಸಿದ ಇವರ ಪುರಾತನ ಬದುಕಿನ ಚಿತ್ರಣ ಇಂತಿದೆ-
              1 . ರಾಮಾಯಣದ ಕಾಲದಲ್ಲಿ ಈ ಜನಾಂಗ ಅಸ್ತಿತ್ವದಲ್ಲಿತ್ತು ಎಂಬ ಪ್ರತೀತಿಯಿದೆ. ಶ್ರೀರಾಮನು ಲಕ್ಷ್ಮಣ ಸಮೇತನಾಗಿ ದಕ್ಷಿಣಪಥದಲ್ಲಿ ಸಂಚರಿಸುವಾಗ ಇವರ ಲಿಂಗಪೂಜೆಯನ್ನು, ಶೂರತನವನ್ನು ಮೆಚ್ಚಿ, ತನ್ನ ವಂಶಜರೆಂದು, ಒಕ್ಕಲೆಂದು ಹೇಳಿದನು. ತನ್ನ ಕೀತರ್ಿಯನ್ನು ಹೆಚ್ಚಿಸುವಂತೆ ಇವರ ಮೂಲ ಪುರುಷನಿಗೆ ವಚನವಿತ್ತಿದ್ದನೆಂದು_ಇವರ ಅನೇಕ ಹಾಡುಗಬ್ಬಗಳಿಂದ ತಿಳಿದು ಬರುತ್ತದೆ.
             2. ಕೊಂಡಮಾಮರ ಮೂಲ ಪುರುಷರು ಕಾಡುವಾಸಿಗಳಾಗಿದ್ದರು. 'ಶ್ರೀಜಂಗಾಲು'ಎಂದು ಹಿಂದೆ ಇವರನ್ನು ಕರೆಯುತ್ತಿದ್ದರು. ವಿವಸ್ತ್ರರಾಗಿ ಅಲೆಯುತ್ತಾ ಬಿಲ್ಲು-ಬಾಣ,ಬತ್ತಳಿಕೆಗಳನ್ನು ಧರಿಸಿ, ಬೇಟೆಯಲ್ಲೇ ಬದುಕನ್ನು ಸಾಗಿಸುತ್ತಿದ್ದರು. ಒಮ್ಮೆ ಆದಿದೇವನಾದ ಶ್ರೀಶೈಲ ಮಲ್ಲಿಕಾಜರ್ುನನು ನಾರದನ ರೂಪದಲ್ಲಿ ವೇಷ ಮರೆಸಿ, ಇವರ ವಂಶಜರನ್ನು ಕಾಣಲು ಬಂದನು. ವಿವಸ್ತ್ರರಾದ ಇವರನ್ನು ಕಂಡು ಮರಗಿದನು. ನನ್ನ ಭಕ್ತರಾದ ಇವರನ್ನು ಹೀಗೆಯೇ ಬಿಟ್ಟರೇ ಉಳಿಗಾಲವಿಲ್ಲವೆಂದು ತಿಳಿದು, ಏಕನಾದವನ್ನು ನೀಡಿ, ಮುಂದೆ ನನ್ನನ್ನು ತಪ್ಪದೆ ಧ್ಯಾನಿಸಬೇಕೆಂದು ಅಪ್ಪಣೆಯನ್ನು ನೀಡಿದನೆಂದು-ಅವರ ಹಿರಿಯರ ಅಭಿಮತವಾಗಿದೆ. ಹೀಗೆ ಅವರಿಗೆ ಏಕನಾದವೂ ಅನುಚಾನವಾಗಿ ಬಂದಿತೆಂದು ಹೇಳುತ್ತಾರೆ.
             3. ಕೊಂಡಮಾಮರ ವಂಶದ ಮೂಲಗುರು ಶ್ರೀಶೈಲದವರು. ಆದರೆ ಒಮ್ಮೆ ಭದ್ರಾಚಲಕ್ಕೆ ಭೇಟಿ ನೀಡಿ ರಾಮದಾಸನ ದರ್ಶನ ಪಡೆದುದರಿಂದ ಶ್ರೀರಾಮಭಕ್ತರಾದರೆಂದು ಹಿರಿಯರು ಹೇಳುತ್ತಾರೆ. ಅಂದಿನಿಂದ ಕ್ಷೌರ ಮಾಡಿಸದೆ, ಶ್ರೀರಾಮನ ಹೆಸರಿನಲ್ಲಿ ಮುಡಿಗಟ್ಟಿ ಧ್ಯಾನ ಮಾಡುತ್ತಾ ಭವಿಷ್ಯಕಾರ ವೃತ್ತಿಯನ್ನು ಹಿಡಿದರು. ಅದಕ್ಕೆ ತಮ್ಮ ಕುಲದವರನ್ನು 'ರಾಮಕ್ಷತ್ರಿಯ'ರು ಎಂದು ಕರೆಯುವರೆಂದು ಹೇಳುತ್ತಾರೆ.
               ಈ ಮೇಲೆ ಪ್ರಸ್ತಾಪಗೊಂಡ ಮೂರು ಮಾಹಿತಿಗಳು, ಕೆಲವು ವಿಶಿಷ್ಟಾಂಶಗಳ ಚಚರ್ೆಗೆ ಗ್ರಾಸವಾಗುತ್ತವೆ. ಇವರು ಮೂಲತಃ ದ್ರಾವಿಡ ಸಂಸ್ಕೃತಿಯವರೂ ಕಾಡುವಾಸಿಗಳೂ ಹಾಗೂ ಮೂಲದಲ್ಲಿ ಶಿವನಿಷ್ಠರು ಎಂಬುದು ಸ್ಪಷ್ಟವಾಗುತ್ತದೆ. ಅಲ್ಲದೆ ಕಾಲಾನಂತರದಲ್ಲಿ ವೈಷ್ಣವ ನಿಷ್ಠೆಗೆ ಪರಿವರ್ತನೆಗೊಂಡವರೆಂದು ಹೇಳಬಹುದಾಗಿದೆ. ಅಂದರೆ ವಚನನಿಷ್ಠೆಯನ್ನು ಮೀರದ ಸತ್ಯವಂತರಾಗಿದ್ದರು. ಇಂದಿಗೂ ಈ ಅಪೂರ್ವ ಗುಣವನ್ನು ಇವರಲ್ಲಿ ಕಾಣಬಹುದಾಗಿದೆ. ಕಾಡಿನ ಹಂತದ ಅವರ ಬರ್ಬರ ಬದುಕು ಹಾಗೂ ತನ್ನ ಒಕ್ಕಲುಗಳಾಗಿ ಪರಿವತರ್ಿಸುವಲ್ಲಿ ದೇವರುಗಳ ಪ್ರವೇಶ ಮತ್ತು ನಿಷ್ಠರಾಗಿ ತಮ್ಮ ಸಾಂಸ್ಕೃತಿಕ ಬದುಕಿನಲ್ಲಿ ಸಂಭವಿಸಿದ ಸಂಕ್ರಮಣಗಳೂ ವೇಷಭೂಷಣಗಳೂ ಅವರ ಸಾಂಸ್ಕೃತಿಕ ಸ್ಥಿತ್ಯಂತರದ ಕುರುಹುಗಳಾಗಿವೆ ಎಂದರೆ ತಪ್ಪಾಗಲಾರದು. ಅಲ್ಲದೆ ಅವರು ಶೈವ ಮತ್ತು ವೈಷ್ಣವ ಸಂಪ್ರದಾಯಕ್ಕೆ ತೋರುವ ನಿಷ್ಠೆಯೂ ಅವರು ಧರಿಸುವ ರುದ್ರಾಕ್ಷಿ, ನಾಮ, ಏಕನಾದ, ಮುಡುಗಟ್ಟು ಮುಂತಾದ ಉಡುಗೆ-ತೊಡುಗೆಗಳು, ಅವರ ದೈವಿಕ ಹಾಗೂ ಕುಲಾಚಾರದಲ್ಲಿನ ತತ್ತ್ವ ನಿಷ್ಠೆಗಳನ್ನು ತೋರಿಸುತ್ತವೆ. ಆದರೆ ಪ್ರಸ್ತುತ ಈ ಸಾಂಸ್ಕೃತಿಕ ಕಲಾಸಿರಿ ಕಾಲದಂಚಿಗೆ ಸರಿಯಲ್ಪಡುತ್ತಿರುವುದು ಆಧುನಿಕತೆಯ ವಿಪಯರ್ಾಸವೆಂದೆ ಹೇಳಬೇಕಾಗುತ್ತದೆ.
                    ಕೊಂಡಮಾಮರು ಕನರ್ಾಟಕ, ಆಂಧ್ರ ಮತ್ತು ಭಾರತದ ಗಡಿಯಾಚೆಗೂ ಜನಪ್ರಿಯತೆಯನ್ನು ಪಡೆದ ಭವಿಷ್ಯಕಾರರಾಗಿದ್ದಾರೆ. ಇವರನ್ನು ಪ್ರಾದೇಶಿಕ ಹಿನ್ನಲೆಯಲ್ಲಿ ಹಲವಾರು ನಾಮದೇಯಗಳಿಂದ ಕರೆಯುತ್ತಾರೆ. ಬೈರಾಗಿ, ಜಂಗಮುಲು, ಶಾಸ್ತ್ರೀಕರು, ರಾಮಕೊಂಡಲು, ಕೊಂಡಮಾಮ, ಕೊಂಡರಾಜು-ಮುಂತಾದ ಹೆಸರುಗಳಿವೆ. ಆದರೆ ತಮ್ಮ ಶಾಸ್ತ್ರದ ಆದಿಪುರುಷನಾದ ಶ್ರೀರಾಮನನ್ನು ಹಾಗೂ ತಮ್ಮ ಸಾಂಸ್ಕೃತಿಕ ನೆಲದೇವತೆಯಾದ ಕೊಂಡದೇವತೆ(ಮಲೆದೇವತೆ)ಯನ್ನು ಸ್ತುತಿಸುವುದರಿಂದ ಕೊಂಡಮಾಮದಂತಹ ಹೆಸರು ಪ್ರಾಪ್ತವಾಗಿರಬಹುದು. ಮಾನಸಿಕ ಭಾವನೆಯ ಕುರುಹನ್ನು ಹೊರದೋರುವ ಹಿರಿಯನಾಗಿರುವುದರಿಂದ 'ಕುರುಕುರುಮಾಮ' ಹೆಸರಿನಿಂದ ಕರೆಯುತ್ತಾರೆಂದು ಹಿರಿಯರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು.
             ನಂಬಿಕೆರಹಿತ ಮನುಷ್ಯನ ಬದುಕಿಲ್ಲ. ಆದಿಮಾನವನಿಂದ ಆಧುನಿಕ ಮಾನವನ ತನಕ ಇದನ್ನು ಕಾಣಬಹುದು. ಅದು ಅಗೋಚರ ಶಕ್ತಿಯ ನಂಬಿಕೆಯಿರಬಹುದು ಆಥವಾ ಭವಿಷ್ಯ ನಿಧರ್ಾರಕ ಶಕ್ತಿಗಳಲ್ಲಿರಬಹುದು. ಒಟ್ಟಾರೆ ಭವಿಷ್ಯದ ಆಗು-ಹೋಗುಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಮಾನವ ಸಹಜವಾಗಿದೆ. ಅದಕ್ಕಾಗಿ ಅವನು ಹಲವು ಸಂಕೇತ, ಶಕುನ ಹಸ್ತ ಸಾಮುದ್ರಿಕೆಗಳಲ್ಲಿ ನಂಬಿಕೆಯಿಟ್ಟಿರುತ್ತಾನೆ. ಅವು ಮೂಢನಂಬಿಕೆಗಳೋ ಕುರುಡು ನಂಬಿಕೆಗಳೋ ಎಂಬುದು ಮುಖ್ಯವಲ್ಲ. ಮಾನವನ ಭವಿಷ್ಯಗ್ರಹಿಕೆಯೂ ಅದರಲ್ಲೂ ಅದರಲ್ಲಿನ ಆಸಕ್ತಿಯು ಎಷ್ಟು ಪುರಾತನವೆಂಬುದು ಇಲ್ಲಿ ಪ್ರಧಾನವಾಗಿರುತ್ತದೆ. ಈ ನಿಟ್ಟಿನಲ್ಲಿ ಕೊಂಡಮಾಮರ ಭವಿಷ್ಯವನ್ನು ಗ್ರಹಿಸಬೇಕಾಗುತ್ತದೆ.
             ಭವಿಷ್ಯಕಾರರ ಭವಿಷ್ಯವಿಂದು ಅಧೋಗತಿಗಿಳಿದಿದೆ. ವೃತ್ತಿನಿರತ ಭವಿಷ್ಯಕಾರರು ಮೂಲೆಗುಂಪಾಗಿದ್ದಾರೆ. ಭವಿಷ್ಯವನ್ನು ಹೇಳುವ ಆಧುನಿಕ ತಾಂತ್ರಿಕ ಭವಿಷ್ಯಕಾರರು ತಲೆಯೆತ್ತುತ್ತಿದ್ದಾರೆ. ಜ್ಯೋತಿಷ್ಯಾಲಯಗಳಲ್ಲಿ ಇಂದು ಭವಿಷ್ಯ ಕಂಪ್ಯೂಟರೀಕರಣಗೊಳ್ಳುತ್ತಿದೆ. ನಿಯತಕಾಲಿಕಗಳು, ದೃಶ್ಯ ಹಾಗೂ ಶ್ರವ್ಯಮಾಧ್ಯಮಗಳು ಭವಿಷ್ಯ ಸಂಬಂಧಿ ಕಾರ್ಯಕ್ರಮಗಳನ್ನು ಯಥೇಚ್ಛವಾಗಿ ಬಿತ್ತರಿಸುತ್ತಿವೆ. ಅಲ್ಲದೆ ಆಧುನಿಕ ಶಿಕ್ಷಣ, ವೈಜ್ಞಾನಿಕ ಬೋಧನೆಗೆ ಮುಂದಾಗಿರುವುದರಿಂದ ವೃತ್ತಿನಿರತ ಕೊಂಡಮಾಮರ ಭವಿಷ್ಯಕ್ಕೆ ಮನ್ನಣೆ ಇಲ್ಲದಾಗಿದೆ. ಇವರ 'ಶಾಸ್ತ್ರಕಟ್ಟಿ'ನ ಭವಿಷ್ಯಕ್ಕಿಂತ, ಹಸ್ತಸಾಮುದ್ರಿಕೆಗಿಂತ 'ಕಂಪ್ಯೂಟರೀಕೃತ ಭವಿಷ್ಯ' ಮೇಲುಗೈ ಸಾಧಿಸಿದೆ. ಹೀಗೆ ಹತ್ತು ಹಲವಾರು ಕಾರಣಗಳಿಂದ, ಕುಲವೃತ್ತಿಯನ್ನೇ ನಂಬಿ ಬದುಕುತ್ತಿದ್ದ ಕೊಂಡಮಾಮರು ಜೀವನ ನಿರ್ವಹಣೆಗಾಗಿ ಅನ್ಯವೃತ್ತಿಗಳನ್ನು ಅವಲಂಬಿಸಿ ಬದುಕು ಮುನ್ನಡೆಸಬೇಕಾದ ಅನಿವಾರ್ಯ ಕಾಲಘಟ್ಟದಲ್ಲಿದ್ದಾರೆ.

                                         
                   ಕೊಂಡಮಾಮರ ಮೂಲ ನೆಲೆ ಆಂಧ್ರಪ್ರದೇಶವಾದರೂ ಎಲ್ಲಾ ಪ್ರದೇಶಗಳಲ್ಲಿ ಇವರನ್ನು ಕಾಣಬಹುದಾಗಿದೆ. ತಮ್ಮ ಮಾತೃಭಾಷೆಯಾದ ತೆಲುಗಿನ ಜೊತೆಗೆ ತಾವು ನೆಲೆಸಿರುವ ಪ್ರಾದೇಶಿಕ ಭಾಷೆಗಳನ್ನು ಮಾತನಾಡಬಲ್ಲರು. ಕಾಡುತನದಿಂದ ಅಲೆಮಾರಿ ಬದುಕಿಗೆ ಒಗ್ಗಿದರೂ ಸಮಾಜದ ಇತರೆ ಸಂಸ್ಕೃತಿಯ ಜನರ ಜೊತೆ ಬೆರೆತರೂ ತಮ್ಮ ಸಾಂಸ್ಕೃತಿಕ ಪ್ರತ್ಯೇಕತೆಯನ್ನು  ಕಾಯ್ದುಕೊಂಡು ಬಂದಿದ್ದಾರೆ. ವಲಸೆ ಹೋದ ಕಡೆಗಳಲ್ಲಿ ತಮ್ಮ ಜೀವನ ನಿರ್ವಹಣೆಗಾಗಿ ಆಯಾ ಪ್ರಾದೇಶಿಕ ಭಾಷೆಯ ಕಲಿಕೆಯು ಅನಿವಾರ್ಯವಾದುದುರಿಂದ ಅವರು ಬಹುತೇಕ ಭಾಷೆಗಳನ್ನು ಬಲ್ಲವರಾಗಿದ್ದಾರೆ. ಹಲವು ದಶಕಗಳ ಹಿಂದೆ ಹೊಟ್ಟೆ ಹೊರೆದುಕೊಳ್ಳುಲು ವಲಸೆ ಬಂದ ಈ ಜನಸಮೂಹವು, ಇಂದು ಕನರ್ಾಟಕದ ಎಲ್ಲಾ ಪ್ರಾಂತ್ಯಗಳಲ್ಲೂ ಕಾಣಸಿಗುತ್ತಾರೆ. ಅಲ್ಲದೆ ಅವರ ವೇಷಭಾಷೆಯಲ್ಲಿಯೂ ಕನ್ನಡತನವನ್ನು ಕಾಣಬಹುದಾಗಿದೆ.
               ಗುಡ್ಡಗಾಡಿನ ವಾಸಿಗಳಾದ ಇವರು ವ್ಯವಸಾಯ ಮಾಡಿ ಜೀವಿಸುತ್ತಿದ್ದರು-ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುವುದುಂಟು. ಆದರೆ ನಿದರ್ಿಷ್ಟ ಆಧಾರಗಳಿಲ್ಲ. ಏಕೆಂದರೆ ಅಲೆಮಾರಿ ಜೀವನವೇ ಇವರಿಗೆ ಪ್ರಧಾನವಾದಂತಿದೆ. ಭಿಕ್ಷೆ ಬೇಡುವುದೇ ನಿತ್ಯಕಾಯಕವಾಗಿರುವ ಇವರು ಮಠ-ಮಂದಿರವನ್ನೋ ಚಾವಡಿಕಟ್ಟೆಯನ್ನೋ ನಿತ್ಯ ಮನೆಯಾಗಿಸಿಕೊಳ್ಳುವ ಇವರಿಗೆ ವ್ಯವಸಾಯದ ಕಡೆಗೆ ಗಮನ ಹರಿದಿರಲು ಸಾಧ್ಯವಿಲ್ಲವೆನಿಸುತ್ತದೆ! ಒಟ್ಟಾರೆ ಇವರು ಜಮೀನು ಪಡೆದು ವ್ಯವಸಾಯವನ್ನು ಮಾಡುತ್ತಿದ್ದರೂ ಎಂಬುದಕ್ಕೆ ಉದಾಹರಣೆಗಳು ಅಪರೂಪವೆಂದು ಹೇಳಬೇಕಾಗುತ್ತದೆ. ಆದರೆ ಇಂದು ಒಕ್ಕೆಡೆ ನೆಲೆ ನಿಂತು  ವ್ಯವಸಾಯಕ್ಕೆ ತೊಡಗಿರುವ ಜನರು ಇಲ್ಲವೆಂದರೆ ತಪ್ಪಾಗುತ್ತದೆ.  ತಮ್ಮ ಮೂಲವೃತ್ತಿಯಿಂದ ಜೀವನ ನಿರ್ವಹಣೆ ಕಷ್ಟದಾಯಕವಾಗಿರುವುದು ಇದಕ್ಕೆ ಒಂದು ಕಾರಣವೆಂದು ಹೇಳಿದರೂ ಅಲೆಮಾರಿ ಜೀವನವನ್ನೇ ನಂಬಿದವರು ಜಾಸ್ತಿಯಾಗಿಯೇ ಇದ್ದಾರೆ.
           ಅದು ಅಲೆಮಾರಿ ಬದುಕಾಗಲೀ, ನೆಲೆನಿಂತ ಜೀವನವಾಗಲೀ ಇವರು ತಮ್ಮದೆ ಪಶು ಸಂಪದವನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗುತ್ತಾರೆ. ದನಕರು, ಕುರಿಕೋಳಿ, ಮೇಕೆಗಳನ್ನು ಸಾಕುತ್ತಾರೆ. ಸಾಗಾಣಿಕೆ ಮತ್ತು ಹಣಕಾಸಿನ ತೊಂದರೆಯನ್ನು ನೀಗಿಸಿಕೊಳ್ಳವಲ್ಲಿ ಇವು ಸಹಕಾರಿಯಾಗಿವೆ. ಹಿಂದೆ ಸಂಚಾರಕ್ಕಾಗಿ, ಸರಕು ಸಾಗಾಣಿಕೆಗಾಗಿ ಕುದುರೆ ಮತ್ತು ದನಕರುಗಳನ್ನು ಬಳಸುತ್ತಿದ್ದರು. ಈಗ ಕುದುರೆಗಳನ್ನು ಬಳಸುವವರಿದ್ದಾರೆ. ಆದರೆ ಬಹುತೇಕ ಅಲೆಮಾರಿ ಕುಟುಂಬದವರು ಕಾವಡಿಕಟ್ಟಿಕೊಂಡು ಸಾಮಾನುಗಳನ್ನು ಹೊರುವುದು ಸಾಮಾನ್ಯವಾಗಿತ್ತು. ಇಂದು ಅವುಗಳ ಸ್ಥಾನವನ್ನು ದ್ವಿಚಕ್ರವಾಹನಗಳು ತುಂಬಿಕೊಟ್ಟಿವೆ.
                                                             
            ಆದಿಮ ಕಾಲದಲ್ಲಿ ಮೂಲವಾಸ ಗುಡ್ಡಗಾಡುಗಳಾಗಿದ್ದೂ ಬೇಟೆಯೇ ನಿತ್ಯಕಾಯಕವಾಗಿತ್ತು. ಮಾಂಸಾಹಾರಿಗಳಾದ ಇವರು ಮಾಂಸದ ಜೊತೆಗೆ ಅಂಬಲಿ ಹಾಗೂ ಬಿದಿರುಗಂಜಿಯನ್ನು ಸೇವಿಸುತ್ತಿದ್ದರು. ಆದರೂ ಆಹಾರ ಪದ್ಧತಿಯಲ್ಲಿ ಕೆಲವು ಕಟ್ಟುಪಾಡುಗಳನ್ನು ಆಚರಣೆಯಲ್ಲಿವೆ. ನವಿಲು, ಗಿಳಿ, ಹಂಸ, ಪಾರಿವಾಳ, ಗರುಡ-ಮುಂತಾದ ಪಕ್ಷಿಗಳ ಮಾಂಸ ಸೇವನೆಗೆ ಇವರಲ್ಲಿ ನಿಷೇಧವಿದೆ. ಏಕೆಂದರೆ ನವಿಲು ನಂಬಿಕೆಯಂತೆ ಪವಿತ್ರ ಪ್ರಾಣಿ. ಗಿಳಿಯು ರಾಮನ ಸಂಕೇತ. ಹಾಗೆಯೇ ಗರುಡನನ್ನು 'ರತ್ನಪಕ್ಷಿ'ಎಂದು ಕರೆದು ನಮಸ್ಕರಿಸುತ್ತಾರೆ. ಆದರೆ ಈ ನಿಷೇಧಗಳು ಸಡಿಲಗೊಂಡಿವೆ. ಆಧುನಿಕ ಆಹಾರ ಪಾನೀಯಗಳು ಇವರ ಬದುಕಿನಲ್ಲಿ ಪ್ರವೇಶಿಸಿವೆ. ಪಾರಂಪರಿಕ ಹವ್ಯಾಸವಾದ ಮದ್ಯಪಾನ, ಭಂಗಿಸೇವನೆ ಇಂದು ಇವರ ಬದುಕಿನ ಬವಣೆಯನ್ನು ಹೆಚ್ಚಿಸಿ ನಿತ್ಯ ಸಂಪಾದನೆ ಆ ಚಟಕ್ಕೆ ಸುರಿಯುವಂತೆ ಮಾಡಿದೆ.
                 ಶಿಷ್ಟ ಸಂಸ್ಕೃತಿಯವರಂತೆ ಇವರುಗಳಲ್ಲಿ ಹಲವಾರು ಪಂಗಡಗಳಿವೆ. ಅವುಗಳನ್ನು ಭಿನ್ನ ಹೆಸರುಗಳಿಂದ ಕರೆಯುತ್ತಾರೆ. ಬೆಡಗುಗಳು ಬೇರೆಯಾದರೂ ತಮ್ಮನ್ನು ರಾಮಕ್ಷತ್ರಿಯರೆಂದು ಕರೆದುಕೊಳ್ಳುತ್ತಾರೆ. ತಮ್ಮೊಳಗೆ ಯಾವುದೇ ಮೇಲುಕೀಳಿನ ಅಥವಾ ಭಿನ್ನಭೇದದ ಭಾವನೆಯನ್ನು ತೋರಿಸುವುದಿಲ್ಲ. ಆದರೆ ವೈವಾಹಿಕ ಸಂದರ್ಭಗಳಲ್ಲಿ ಬೆಡಗುಗಳನ್ನು ಅನುಸರಿಸಿಯೇ ಪರಸ್ಪರ ಸಂಬಂಧಗಳನ್ನು ಏರ್ಪಡಿಸಿಕೊಳ್ಳುತ್ತಾರೆ. ಶಿಷ್ಟಸಂಸ್ಕೃತಿಯವರಲ್ಲಿನ ಗೋತ್ರಗಳಂತೆ ಇವರಲ್ಲಿಯೂ ಗ್ರೋತ್ರಗಳಿದ್ದೂ ಸಗೋತ್ರ ವಿವಾಹಕ್ಕೆ ನಿಷೇಧವಿದೆ. ಉಳಿದ ಯಾವುದೇ ವಿಚಾರಗಳಲ್ಲಿ ರಾಜಿಯಾದರೂ ಗೋತ್ರ ತಪ್ಪಿದ ವಿವಾಹಕ್ಕೆ ಇಂದಿಗೂ ಸಮ್ಮತಿಯಿಲ್ಲವೆಂದು ಆ ಸಮೂಹದ ಹಿರಿಯರು ಅಭಿಪ್ರಾಯಪಡುತ್ತಾರೆ.
            ಇತರೆ ಪರಿಶಿಷ್ಟ ಜನಾಂಗದ ಬೆಡಗುಗಳಲ್ಲಿರುವಂತೆ 'ಕುಲಪೆದ್ದ'(ಕುಲದ ಯಜಮಾನ) ವ್ಯವಸ್ಥೆ ಇವರಲ್ಲಿ ಅಸ್ತಿತ್ವದಲ್ಲಿದೆ. ಇವನು ಜನಾಂಗದ ಹಿರಿಯನಾಗಿದ್ದು ಬೆಡಗಿನ ಪ್ರಮುಖನಾಗಿರುತ್ತಾನೆ. ಇವನನ್ನು 'ಬಂಡಾರರು'ಎಂದು ಕರೆಯುತ್ತಾರೆ. ಈತನ ಮುಂದಾಳತ್ವದಲ್ಲೇ ಕುಲಾಚಾರಗಳು ನಡೆಯುತ್ತವೆ. ಕುಲದ ಯಾವುದೇ ಶುಭಾಶುಭ ಕಾರ್ಯಗಳಲ್ಲಿ ಇವನ ಹಾಜರಾತಿ ಕಡ್ಡಾಯವಾಗಿರುತ್ತದೆ.
                                                  
         ಒಂದು ಕಾಲಘಟ್ಟದಲ್ಲಿ ಅವಿಭಕ್ತ ಕುಟುಂಬಗಳು ಹೇರಳವಾಗಿದ್ದ ಈ ಸಮೂಹದಲ್ಲಿ ಇಂದು ಗಂಡ-ಹೆಂಡತಿ-ಮಕ್ಕಳೊಡಗೂಡಿದ ಸಣ್ಣ ಕುಟುಂಬಗಳು ಹೆಚ್ಚಾಗತೊಡಗಿವೆ. ಆದಾಯ ಮಿತಿ, ಜೊತೆಗೆ ಭಿಕ್ಷೆ ಹಾಗೂ ಭವಿಷ್ಯ ಹೇಳುವ ಕಾಯಕದ ಅತ್ಯಲ್ಪ ಆದಾಯದಲ್ಲಿ ದೊಡ್ಡ ಕುಟುಂಬಗಳ ಪೋಷಣೆ-ನಿರ್ವಹಣೆ ಕಷ್ಟವಾಗಿರುವುದು ಪ್ರಮುಖ ಕಾರಣವೆಂದು ಹೇಳಬಹುದು. ಆದರೂ ಕೆಲವು ಕಡೆ ಅವಿಭಕ್ತ ಕುಟುಂಬಗಳನ್ನೇ ಕಾಣಬಹುದಾಗಿದೆ.
           ದ್ರಾವಿಡ ಸಂಸ್ಕೃತಿಯಲ್ಲಿ ಮಾತೃಪ್ರಧಾನ ಕುಟುಂಬ ವ್ಯವಸ್ಥೆಯನ್ನು ಕಾಣುತ್ತೇವೆ. ಸ್ತ್ರೀಗೆ ವಿಶೇಷ ಸ್ಥಾನಮಾನ ಹಾಗೂ ಸ್ವಾತಂತ್ರ್ಯವನ್ನು ಇವರಲ್ಲಿ ಕಲ್ಪಿಸಲಾಗಿದೆ. ಶಿಷ್ಟಸಂಸ್ಕೃತಿಯ ಸ್ತ್ರೀಯರಿಗಿರುವ ಯಾವುದೇ ಸಾಮಾಜಿಕ ನಿರ್ಬಂಧಗಳು ಇವರಲ್ಲಿ ಕಂಡು ಬರುವುದಿಲ್ಲ. ಶೋಷಣೆ ಕಿರುಕುಳಗಳಿಲ್ಲ. ಪುರುಷನಷ್ಟೆ ಸಮಾನವಾಗಿ ಸ್ತ್ರೀಯರನ್ನು ಕಾಣುತ್ತಾರೆ. ಇದಕ್ಕೆ ಸ್ಪಷ್ಟ ನಿರ್ದಶನವೆಂದರೆ ಪೂರ್ವದಲ್ಲಿ ಈ ಸಮಾಜದಲ್ಲಿ ಚಾಲ್ತಿಯಲ್ಲಿದ್ದ 'ಸೇವಾ ವಿವಾಹ ಪದ್ಧತಿ'ಯಲ್ಲಿನ ಸ್ತ್ರೀಯ ಸ್ಥಾನಮಾನಗಳ ಬಗ್ಗೆ ಸ್ಪಷ್ಟ ಮಾಹಿತಿಗಳನ್ನು ಒದಗಿಸಿಕೊಡುತ್ತದೆ. ಆದರೆ ಈ ಪದ್ಧತಿಗಳು ಮರೆಯಾಗಿ ಪುರುಷ ಪ್ರಧಾನ ಅದರಲ್ಲೂ ಪಿತೃಪ್ರಧಾನ ಕುಟುಂಬ ವ್ಯವಸ್ಥೆಯನ್ನು ಎಲ್ಲೆಡೆಯಲ್ಲೂ ಕಾಣುತ್ತಿದ್ದೇವೆ. ಕುಟುಂಬದಲ್ಲಿ ಯಜಮಾನ್ಯ ವ್ಯವಸ್ಥೆ ಜಾರಿಯಲ್ಲಿದ್ದೂ ಯಜಮಾನನ ಮಾತನ್ನು ವೇದ ವಾಕ್ಯವೆಂದು ಭಾವಿಸುವ ಕಾಲಘಟ್ಟದಲ್ಲಿದ್ದೇವೆ.
               ಕೊಂಡಮಾಮರ ಸಂಸ್ಕೃತಿಯಲ್ಲಿ ಗಂಡು ಮಕ್ಕಳು ತಮ್ಮ ಹದಿನಾಲ್ಕು ಅಥವಾ ಹದಿನೈದನೆಯ ವಯಸ್ಸಿಗೆ ಪರಂಪರಾಗತವಾಗಿ ಬಂದ ತಂದೆಯ ವೃತ್ತಿಯನ್ನು ಅನುಸರಿಸಿ ಕಲಿಯುವುದು ಸಂಪ್ರದಾಯವಾಗಿದೆ. ಮುಡಿಕಟ್ಟುವುದು, ಸಾಂಪ್ರದಾಯಿಕ ವೇಷಭೂಷಣ ತೊಡುವುದು, ಏಕನಾದದ ಧ್ವನಿಗೆ ತಕ್ಕ ಹಾಗೆ ಆಕಷರ್ಿಣೀಯ ಮಾತಿನಲ್ಲಿ ಮೋಡಿ ಮಾಡುವುದು ಮುಂತಾದ ಕುಲವೃತ್ತಿಯ ಕೌಶಲಗಳನ್ನು ತಮ್ಮ ಹಿರಿಯರಿಂದ ಆಥವಾ ತಂದೆಯರಿಂದ ಕಲಿತು ಕುಲವೃತ್ತಿಯ ವಾರಸುದಾರರಾಗುತ್ತಿದ್ದರು. ಆದರೆ ಇಂದು ಅವಿಭಕ್ತ ಕುಟುಂಬಗಳು ವಿಘಟನೆಗೊಂಡು, ತಂದೆಯ ಸ್ಥಾನಮಾನಗಳು ಕುಸಿಯುವ ಹಂತ ತಲುಪಿವೆ. ಕುಲವೃತ್ತಿಗಿಂತ ಕೂಲಿನಾಲಿಯೇ ಸೂಕ್ತವೆಂಬ ಅಭಿಪ್ರಾಯ ಜನಾಂಗದ ಕಿರಿಯ ಪೀಳಿಗೆಯವರಲ್ಲಿ ವ್ಯಕ್ತವಾಗುತ್ತಿದೆ. ಇದಕ್ಕೆ ಮೋಹಕವಾದ ಆಧುನಿಕ ಜೀವನ ಶೈಲಿಯು ಬಹುತೇಕ ಕಾರಣವೆಂದು ಹೇಳಬಹುದಾಗಿದೆ.
                   ಕೊಂಡಮಾಮರ ಸಮಾಜದಲ್ಲಿ ಪ್ರಾಪ್ತ ವಯಸ್ಸಿಗೆ ಬಂದ ಮಕ್ಕಳು ದುಡಿಯಬೇಕೆಂಬುದು ನಿಯಮ. ಅವರ ಸಂಪಾದನೆಯ ಹಣದಿಂದ ಸಂಸಾರವನ್ನು ನಿರ್ವಹಿಸಬೇಕೇ ಹೊರೆತು ವಂಚಿಸುವುದು ಅಕ್ಷಮ್ಯ ಅಪರಾದವೆಂದು ಹಿರಿಯರು  ಹೇಳುತ್ತಾರೆ. ಒಂದು ವೇಳೆ ವಂಚನೆಯ ಆರೋಪ ರುಜುವಾದರೇ ಕುಲದ ಹಿರಿಯನ ಸಮಕ್ಷಮದಲ್ಲಿ ದಂಡ ವಿಧಿಸಲಾಗುತ್ತಿತ್ತು. ಕೆಟ್ಟ ಮಾತು, ಕೆಟ್ಟಕೆಲಸ ಮಾಡಿದರೂ ದಂಡನೆಗೆ ಗುರಿಯಾಗುವುದಲ್ಲದೆ ಕುಲ ಬಹಿಷ್ಕಾರದಂತಹ ಉಗ್ರ ಶಿಕ್ಷೆಯನ್ನು ನೀಡಲಾಗುತ್ತಿತ್ತು. ಈ ದಂಡನೆಯ ಶಿಕ್ಷೆಯು ಕೊಂಡಮಾಮರಲ್ಲಿ ಮಾತ್ರವೇ ಅಲ್ಲದೆ ಬಹುತೇಕ ಅಲೆಮಾರಿಗಳಲ್ಲಿ ಒಂದು ವಿಶಿಷ್ಟ ನಿಯಮವಾಗಿ ಅಸ್ತಿತ್ವದಲ್ಲಿತ್ತು. ಇದರಿಂದ ಪರಸ್ಪರ ವ್ಯಾಜ್ಯಗಳು ಕೋಟರ್ು ಕಛೇರಿಗಳ ಮೆಟ್ಟಿಲನ್ನೇರದೆ ತಮ್ಮೊಳಗೆ ಇತ್ಯರ್ಥವಾಗುತ್ತಿದ್ದವು. ತಪ್ಪೊಪ್ಪಿಗೆಯ ಸಂದರ್ಭದಲ್ಲಿ ದೇವರ ಮೇಲೆ ಮಾಡುವ ಪ್ರಮಾಣವು ಕೋಟರ್ಿನ ಶಿಕ್ಷೆಗಿಂತ ಮಿಗಿಲಾದುದು ಎಂಬ ನಂಬಿಕೆ ಇವರಲ್ಲಿ ಪ್ರಬಲವಾಗಿತ್ತು. ಈ ನಂಬಿಕೆ ಹಾಗೂ ಉಗ್ರ ಶಿಕ್ಷೆಯ ಕಾರಣವಾಗಿ ಅಕ್ಷಮ್ಯ ಅಪರಾಧಗಳನ್ನು ಪ್ರಜ್ಞಾಪೂರ್ವಕವಾಗಿ ಯಾರು ಮಾಡುತ್ತಿರಲಿಲ್ಲ. ಆದರೆ ಸಮೂಹ ಜೀವನ ವ್ಯವಸ್ಥೆಯ ಸಮಯದಲ್ಲಿ ಇವು ಕಟ್ಟುನಿಟ್ಟಾಗಿ ಪಾಲನೆಯಲ್ಲಿದ್ದವು. ಕಾಲಘಟ್ಟಗಳು ಬದಲಾದಂತೆ ನಿಯಮಗಳಲ್ಲಿ ಸಡಿಲಿಕೆ ಕಂಡು ಬಂದಿತು. ಇಂತಹ ದಂಡನೆಯ ನಿಯಮಗಳು ಅಲ್ಲೊಂದಿಲ್ಲೊಂದು ಕಂಡು ಬರುವುದು ಇದೆ.
                   ಕೊಂಡಮಾಮರು ಯಾವುದೇ ಪ್ರಾದೇಶಿಕ ನೆಲದಲ್ಲಿ ವಾಸಿಸುತ್ತಿದ್ದರೂ ತಮ್ಮ ಗಂಡು ಮಕ್ಕಳಿಗೆ ಗುರು ದೀಕ್ಷೆ ಕೊಡಿಸುವ ಸಂಪ್ರದಾಯವನ್ನು ಅನುಸರಿಸುತ್ತಿದ್ದರು. ಪ್ರಾಪ್ತ ವಯಸ್ಸಿಗೆ ಬಂದ ಹುಡುಗರನ್ನು ಶ್ರೀಶೈಲದ ಮಲ್ಲಿಕಾಜರ್ುನನ ದರ್ಶನಕ್ಕೆ ಕರೆದೊಯ್ದು ಗುರು ದೀಕ್ಷೆಯನ್ನು ಕೊಡಿಸುತ್ತಿದ್ದರು. ಈ ದೀಕ್ಷೆಯನ್ನು ಪಡೆದವರು ಮಾತ್ರವೇ ಸಾಂಪ್ರದಾಯಿಕ ವೃತ್ತಿಯನ್ನು ಮಾಡಲು ಅರ್ಹರೆಂದು ನಿಯಮವಿದೆ. ಆದರೆ ಕೆಲವು ಅನನುಕೂಲತೆಯ ಕಾರಣದಿಂದ ಕುಟುಂಬ ಕಟ್ಟುಪಾಡುಗಳನ್ನು ಮೀರುವುದುಂಟು. ಕುಲವೃತ್ತಿಯ ಹಿರಿಯರಿಂದಲೇ ಇಂದು ದೀಕ್ಷೆ ಪಡೆದು ವೃತ್ತಿಯನ್ನು ಮುಂದುವರಿಸುವ ಜನರು ಇದ್ದಾರೆ. ಒಟ್ಟಾರೆ  ನೀತಿನಿಯಮಗಳನ್ನು ಮೀರುವ ಜನರೇ ಇಂದು ಹೆಚ್ಚಾಗ ತೊಡಗಿದ್ದಾರೆಂದರೆ ತಪ್ಪಾಗುವುದಿಲ್ಲವೆಂದು ಹಿರಿಯರು ಬೇಸರವನ್ನು ವ್ಯಕ್ತಪಡಿಸುತ್ತಾರೆ.
                ಕೊಂಡಮಾಮರ ಸಾಂಸ್ಕೃತಿಕ ಬದುಕಿನಲ್ಲಿ ವೇಷಭೂಷಣಗಳಿಗೆ ವಿಶಿಷ್ಟ ಸ್ಥಾನವಿತ್ತು. ಅವರ ಚಿಂತಾಮಣಿ ಕಟ್ಟು, (ಶಾಸ್ತ್ರಕಟ್ಟು) ರುದ್ರಾಕ್ಷಿಸರ, ವಿಭೂತಿ ಉಂಡೆಗಳು, ಏಕನಾದ, ಮುಡಿಕಟ್ಟು, ನಾಮ   ವೀರಗಚ್ಚೆ, ಎದೆಗೆ ಕಾವಿ ಇಲ್ಲವೆ ಅರ್ಧ ಅಂಗಿಯ ಕುಪ್ಪಸ ತೊಟ್ಟು, ಕಪ್ಪುಬಟ್ಟೆ ಅಥವಾ ಚರ್ಮದ ನಡುಪಟ್ಟಿ, ಕೈಗಳಲ್ಲಿ ತಾಮ್ರದ ಕಡಗಗಳು, ಎತ್ತಿಕಟ್ಟಿದ ಮುಡಿ, ಅದರ ಮೇಲೆ ಯಂತ್ರಕಡಗದಿಂದ ಸಿಂಬೆ ಮಾಡಿ ತಾಮ್ರದ ಬಳೆ ತೊಡಿಸುವುದು, ಬಳೆಯಾಕಾರದ ಹುಲಿಚರ್ಮವನ್ನು ಮುಡಿಗೆ ಕಟ್ಟಿಕೊಂಡು ನವಿಲುಗರಿ-ಹಕ್ಕಿಪುಕ್ಕಗಳನ್ನು ಸಿಕ್ಕಿಸಿಕೊಳ್ಳುವುದು, ಹಣೆಗೆ ಬಿಳಿ ನಾಮ, ಕುತ್ತಿಗೆಗೆ ಬೆಳ್ಳಿಕಟ್ಟಿನ ಹುಲಿ ಉಗುರಿನ ತಾಯತ ಕಟ್ಟಿಕೊಳ್ಳುವುದು, ಕೊಂಡಿ ಕಟ್ಟಿರುವ ಬೆಳ್ಳಿ ಹಾಗೂ ತಾಮ್ರ ನಾಣ್ಯಗಳನ್ನು ಸರವಾಗಿ ಧರಿಸುವುದು, ಬಿದಿರುದಬ್ಬೆಗೆ ಕೌದಿಚೀಲ ನೇತು ಹಾಕಿಕೊಂಡು, ಕೈಯಲ್ಲಿ ಏಕನಾದ ಮತ್ತೊಂದು ಕೈಯಲ್ಲಿ ಚಿಂತಾಮಣಿ ಕಟ್ಟು ಹಿಡಿದುಕೊಳ್ಳುವುದು, ಕಿವಿಯಲ್ಲಿ ಚಂದ್ರಾಕಾರದ 'ಚಂದ್ರಮುಡಿ'ಗಳು ಇರುತ್ತಿದ್ದವು. ಆದರೆ ಹಿಂದೆ ಚಂದ್ರಮುಡಿಯ ಬದಲಿಗೆ ಬಾಣ ಭತ್ತಳಿಕೆಗಳು ಧರಿಸುತ್ತಿದುದುಂಟು .ಹೀಗೆ ಪ್ರತಿ ವಸ್ತುವೂ ಸಾಂಸ್ಕೃತಿಕ ಅನನ್ಯತೆಯನ್ನು ಸೂಚಿಸುವ ಸಂಕೇತಗಳಾಗಿದ್ದವು. ಕೊಂಡಮಾಮರು ವರ್ಷಕ್ಕೊಂದಾವತರ್ಿ ಶ್ರೀಶೈಲನ ಸನ್ನದಿಗೆ ತೆರಳಿ, ಗುರುಕಾಣಿಕೆಯನ್ನು ಸಮರ್ಪಸುವ ಸಂಪ್ರದಾಯವಿತ್ತು. ಕುಲ ನಿಯಮದ ಪ್ರಕಾರ ಗಡ್ಡಮೀಸೆ ಹಾಗೂ ತಲೆಗೂದಲನ್ನು ಬೋಳಿಸುವಂತಿಲ್ಲ. ಒಂದು ವೇಳೆ ನಿಯಮ ಮೀರಿದರೆ ದಂಡನೆಗೆ ಗುರಿಯಾಗುತ್ತಿದ್ದರು. ಆದರೆ ಆಧುನಿಕ ಸಂಸ್ಕೃತಿಯ ಅಬ್ಬರದಲ್ಲಿ ಸಾಂಪ್ರದಾಯಿಕ ಬದುಕಿನ ನಿಯಮಗಳು ಬೆಲೆ ಕಳೆದುಕೊಳ್ಳ ತೊಡಗಿವೆ. ಹೊಟ್ಟೆಯೇ ಖಾಲಿಯಾಗಿರುವಾಗ ದೇವರಿಗೆ ಕಾಣಿಕೆಯನ್ನು ಸಲ್ಲಿಸುವ ಗೋಜಿಗೆ ಹೋಗದ ಅನೇಕ ಕುಟುಂಬಗಳನ್ನು ಇಂದು ನಾವು ಕಾಣಬಹುದಾಗಿದೆ.
                                                           
                  ಕೊಂಡಮಾಮರ ಜೀವನಾವರ್ತನ ನಂಬಿಕೆಗಳು ಸಂಕರ ಸ್ಥಿತಿಯಲ್ಲವೆ.  ಗಭರ್ಿಣಿ ಬಸುರಿನೊಳಗಿನ ಕಂದನ ಆಸೆಗಳನ್ನು ತೀರಿಸುವ ಬಯಕೆಯ ಆಚರಣೆಯು ಬದಲಾಗಿ ಸೀಮಂತದಂತಹ ಪ್ಯಾಶನ್ ಆಚರಣೆಗಳು ಜಾಗ ಮಾಡಿಕೊಂಡಿವೆ. ಪ್ರಸವ ಕಾರ್ಯವನ್ನು ನಿರ್ವಹಿಸುತ್ತಿದ್ದ 'ಮಂತ್ರಸಾನಿ (ಸೂಲಗಿತ್ತಿ) ಯ ಕೆಲಸಕ್ಕೆ ವಿರಾಮ ನೀಡಲಾಗಿದೆ. ಏಕೆಂದರೆ ಅನಕ್ಷರರಾದ ಇವರು ಆಧುನಿಕ ಆಸ್ಪತ್ರೆಗಳ ಮುಖ ನೋಡಿದವರಲ್ಲ. ಆದರೆ ಕೆಲವರ್ಷಗಳಲ್ಲಿ ಕಾಡಿದ ಮಾರಣಾಂತಿಕ ಕಾಯಿಲೆಗಳೂ ಆರೋಗ್ಯ ಶಿಕ್ಷಣ ಪದ್ಧತಿಗಳು, ಅವರನ್ನು ಆಧುನಿಕ ಚಿಕಿತ್ಸಗೆ ಅವರನ್ನು ಪ್ರೇರೇಪಿಸಿದವು. ಬಾಣಂತಿಯ ಆರೈಕೆಗೆ ಬಳಸುತ್ತಿದ್ದ ವಾಂಪುಡಿ, ಪಿಪ್ಪೀಳ್ಳು (ಕರಿಮೆಣಸು), ಕಸ್ತೂರಿ ಮಾತ್ರೆ, ಬಜೆ, ಕರ್ಕಾಯಿ, ನಾಮಕೊಡಿ, ಪರಂಗಿಚೆಕ್ಕೆಯಂತಹ ಮನೆಮದ್ದುಗಳು ಆಧುನಿಕ ಔಷಧಿಗಳ ಕಾರಣದಿಂದ ದೂರ ಸರಿದವು. ಆದರೆ ಸಂಪ್ರದಾಯಕ್ಕಾದರೂ ಬಳಸಬೇಕೆಂದು ಕೆಲವು ಕುಟುಂಬಗಳು ಇವುಗಳನ್ನು ತರುತ್ತಾರೆ.
        ಈ ಜನಾಂಗದ ವಿವಾಹ ಆಚರಣೆಗಳಿಗೆ ಒಂದು ವೈಶಿಷ್ಟ್ಯತೆಯಿದೆ. ಕುಟುಂಬದ ಯಜಮಾನಾದಿಯಾಗಿ ಕುಲಪೆದ್ದನ ಸಮ್ಮುಖದಲ್ಲಿ ಕನ್ಯಾ ನಿಶ್ಚಿತಾರ್ಥ ನೆರವೇರುತ್ತಿತ್ತು. ಯಾವುದೇ ಪುರೋಹಿತನ ಮುಂದಾಳತ್ವ ಇವರ ಮದುವೆಗಳಲ್ಲಿಲ್ಲ. ಕುಲದ ಹಿರಿಯನೇ ಈ ಕಾರ್ಯಗಳನ್ನು ನಿರ್ವಹಿಸುತ್ತಿದ್ದನು. ಆದರೆ ಪ್ರಸ್ತುತ ಜಾತಕ, ನಕ್ಷತ್ರಫಲ ಹಾಗೂ ಮಹೂರ್ತ ನಿರ್ಣಯ ಕಾರ್ಯಗಳಿಗೆ ಪುರೋಹಿತರನ್ನು ಆಶ್ರಯಿಸ ತೊಡಗಿದ್ದಾರೆ. ಶುಭಾಶುಭ ಕಾರ್ಯಗಳಿಂದ ಕುಲದ ನಿಯಮಗಳನ್ನು ಮೀರಿ ದಂಡನೆಗೊಳಪಟ್ಟವರನ್ನು ದೂರವಿಡುವ ನಿಯಮವು ಇಂದು ಸಡಿಲಗೊಳ್ಳ ತೊಡಗಿದೆ. ಇವರಲ್ಲಿ ಒಂದು ಕಾಲದಲ್ಲಿ ಜಾರಿಯಲ್ಲಿದ್ದ 'ಕೂಡಿಕೆಪದ್ಧತಿ' ಇಂದಿಗೂ ಜಾರಿಯಲ್ಲದೆ. ಗಂಡಸರ ಮರುಮದುವೆಗೆ ಅವಕಾಶವಿದೆ. ಆದರೆ ಮೊದಲ ಹೆಂಡತಿ ತೀರಿಕೊಂಡಿದ್ದರೇ ಮಾತ್ರವೇ ಎಂಬ ನಿಯಮವಿದೆ. ಇವರಲ್ಲಿ ಯಾವುದೇ ಕಾರಣಕ್ಕೂ ವಿವಾಹ ವಿಚ್ಛೇಧನದಂತಹ ಕಾರ್ಯಕ್ಕೆ ಆಸ್ಪದವಿಲ್ಲ. ಇಂತಹ ವಿಚಾರಗಳು ಜಟಿಲವಾದಾಗ ಕುಲಪಂಚಾಯತಿ ಮಾಡಿ ಪರಿಹರಿಸಿಕೊಳ್ಳುವ ವಿಶಿಷ್ಟ ಸಂಪ್ರದಾಯ ಇಂದಿಗೂ ಚಾಲ್ತಿಯಲ್ಲಿದೆ.
                                                  
                  ಹಿಂದೆ ಪ್ರತಿ ಮನೆ ಮನೆಗೂ ಬಂದು ಭಿಕ್ಷೆ ಬೇಡುವುದರ ಜೊತೆಗೆ ಶಾಸ್ತ್ರವನ್ನು ಹೇಳುತ್ತಿದ್ದರು. ಮಕ್ಕಳಿಗೆ ಬಾಲಗ್ರಹ, ನೆಲಗ್ರಹ ಭೀತಿ, ಹಲ್ಲು ಕಡಿಯುವಿಕೆ-ಮುಂತಾದ ಮಕ್ಕಳ ಕಾಯಿಲೆಗಳಿಗೆ, ಗರ್ಭಚವಿ, ಗರ್ಭಸುಲಿ, ಕಿವಿ ಸೋರುವುದು, ದೃಷ್ಟಿದೋಷ, ವಾಂತಿ ಮುಂತಾದ ಹಿರಿಯರ ಕಾಯಿಲೆಗಳಿಗೆ ನಾಟಿ ಔಷಧವನ್ನು ಮಾಡಿಕೊಡುತ್ತಿದ್ದರು. ಆದರೆ ಆಧುನಿಕ ಔಷಧಿಯ ಕಾರಣದಿಂದ ನಾಟಿ ಮನೆಮದ್ದುಗಳು ಬೆಲೆ ಕಳೆದುಕೊಳ್ಳ ತೊಡಗಿವೆ.
      ಹೀಗೆ ಭವ್ಯ ಸಾಂಸ್ಕೃತಿಕ ಬದುಕನ್ನು ನಡೆಸಿದ, ಸಂತೆ ಪಟ್ಟಣಗಳಲ್ಲಿ ಹೇರಳವಾಗಿ ಶಾಸ್ತ್ರ ಹೇಳುತ್ತಿದ್ದ  ಕೊಂಡಮಾಮರು ಇಂದು ಅಪರೂಪವಾಗುತ್ತಿದ್ದಾರೆ. ಅವರು ತಮ್ಮ ಸಾಂಪ್ರದಾಯಿಕ ಉಡುಪನ್ನು ಧರಿಸಲು ಹಿಂಜರಿಯುತ್ತಿದ್ದಾರೆ. ಧರಿಸಿದರೂ ಮನೆಯಂಗಳಕ್ಕೆ ಬಂದು ಬೇಡಿದಾಗ, ಭಿಕ್ಷೆ ನೀಡುವ ತಾಯಂದಿರ ಸಂಖ್ಯೆ ಕಡಿಮೆಯಾಗಿದೆ. ಆಧುನಿಕ ಜ್ಯೋತಿಷ್ಯಾಲಯಗಳು ಇವರ ಬದುಕಿಗೆ ಬರೆ ಎಳೆದಿವೆ. ಸಕರ್ಾರ ಹಾಗೂ ಸಕರ್ಾರೇತರ ಸಂಸ್ಥೆಗಳು ಇವರ ಬದುಕಿಗೆ ಆಸರೆ ನೀಡುತ್ತಿಲ್ಲ. ಇವರ ಕಲಾವಂತಿಕೆಗೆ ಸೂಕ್ತ ಮನ್ನಣೆಯಿಲ್ಲದೆ, ವೃತ್ತಿ ಬದುಕನ್ನು ತೊರೆದು ಜೀವನ ನಿರ್ವಹಣೆಗಾಗಿ ಅನ್ಯಕೆಲಸಗಳನ್ನು ಹುಡುಕುತ್ತಾ ಪಟ್ಟಣದ ಕಡೆಗೆ ವಲಸೆ ಹೋಗುತ್ತಿದ್ದಾರೆ. ಇಂತಹ ಕಲಾಸಿರಿಯನ್ನು ಮುಂದಿನ ಪೀಳಿಗೆಗೆ ಸಂರಕ್ಷಣೆ ಮಾಡಬೇಕಾದ ಅನಿವಾರ್ಯತೆ ಇಂದು ಅಧಿಕವಾಗಿದೆ. ಆಧುನಿಕತೆಯ ಪ್ರವಾಹದಲ್ಲಿ ದೇಸೀಕಲೆಗಳು ಕೊಚ್ಚಿ ಹೋಗುವ ಮುನ್ನ ಅವುಗಳನ್ನು ರಕ್ಷಿಸಿ, ಪೋಷಿಸುವ ಜವಾಬ್ದಾರಿ ಪ್ರತಿಯೊಬ್ಬರದಾಗಬೇಕಾಗಿದೆ.
                                                                                              - ಡಾ|| ಜಿ.ಶ್ರೀನಿವಾಸಯ್ಯ
                               

ಮಂಗಳವಾರ, ಡಿಸೆಂಬರ್ 20, 2011

ಶತಾಯುಷಿ ಜನಪದ ಗಾಯಕಿ ದೊಡ್ಡಹಳ್ಳಿ ಅಕ್ಕಾಯಮ್ಮ


                                             

            ಹಿಂದಿನ ತಲೆಮಾರುಗಳಲ್ಲಿ ಗ್ರಾಮೀಣ ಬದುಕಿಗೆ ನವಚೇತನವನ್ನು ತಂದು ಜೀವನವನ್ನು ಹದನುಗೊಳಿಸುತ್ತಿದ್ದ ಜಾನಪದ ಸಾಹಿತ್ಯ ಸೊಗಡು ಇಂದು ಜನಮಾನಸದಿಂದ ದೂರವಾಗುತ್ತಿದೆ. ಒಸಗೆಪದ, ಸೋಬಾನೆಪದ,ದ್ಯಾವರುಪದ, ಕೋಲಾಟದಂತಹ ಅನೇಕ ಜನಮನರಂಜನೆಯ ಪದಗಳನ್ನು ಹಾಡಿ ಮನತಣಿಸಿಕೊಳ್ಳುತ್ತಿದ್ದ ಬಾಯಿಗಳು ಇಂದು ಧ್ವನಿ ಕಳೆದುಕೊಂಡು ಮೂಕವಾಗುತ್ತಿವೆ. ಹಾಡುವ ಧ್ವನಿಗಳನ್ನು ಮಾಧ್ಯಮದ ಮಾನದಂಡಗಳು ಮರೆಯಾಗಿಸುತ್ತಿವೆ. ಆದರೆ ಎಲೆಮರೆಯ ಕೋಗಿಲೆಗಳಂತೆ ಹಾಡನ್ನು ಅನಿವಾರ್ಯವಾಗಿಸಿಕೊಂಡು ತಮ್ಮ ಆತ್ಮತೃಪ್ತಿಗಾಗಿ ಹಾಡುತ್ತಾ ಸಹೃಯರಲ್ಲೂ ಮರೆತ ಹಾಡಿನ ಪ್ರೀತಿಯ ಭಾವವನ್ನು ಉಕ್ಕಿಸಿದ ಕಲಾ ರಸಿಕರು ಇಲ್ಲವೆನ್ನಲು ಸಾಧ್ಯವೇ? ಸುಮಾರು ನೂರ ಹತ್ತು ವಸಂತಗಳನ್ನು ಹಾಡಿಗೆ ಅಪರ್ಿಸಿದ ಅಜ್ಜಿ, ಮೊಸರು ಮಜ್ಜಿಗೆ ಮಾರಲು ,ಮಕ್ಕರಿಯನ್ನು ತಲೆಗೇರಿಸಿಕೊಂಡು ಊರೂರು ಸುತ್ತಿ, ಮನೆಮನೆಗೆ ಹೆಜ್ಜೆ ಹಾಕಿ, ಸಹೃದಯ ತಾಯಂದಿರ ತಲೆಗೊಂದು ಪದ ಕಲಿತು ,ದಾರಿ ಮಧ್ಯೆ ಗಿಡಗಂಟೆ ಮರಕ್ಕೊಂದು ಹಾಡಿಗಟ್ಟಿ ಕಲಾ ಸಹೃದಯರ ಮನಗೆದ್ದ ಕಂದೆಲುಗು ಸೀಮೆಯ ಅಕ್ಕಂದಿರ ಅಕ್ಕಮ್ಮ-ದೊಡ್ಡಕೊಂಡ್ರಹಳ್ಳಿಯ ಅಕ್ಕಾಯಮ್ಮ.
                                           
          ಗಟ್ಟಂಚಿನ ಚೌಕಳಿ ಗುಂತಕಲ್ಲು ಸೀರೆ, ಸಾದಾ ಜಾಕೀಟು ,ಕೆನ್ನೆ ತುಂಬಾ ಅರಿಶಿನ, ಹಣೆಯಲ್ಲಿ ಅಗಲ ಕುಂಕುಮ, ಗಾಜಿನ ಕರಿ ಬಳೆಗಳು, ಕಿವಿಯಲ್ಲಿ ಎಣ್ಣೆ ಇಳಿದರೂ ಹೊಳೆಯುವ ಕೆಂಪು ಹರಳಿನ ಓಲೆ, ಕತ್ತಿನಲ್ಲಿ ದಪ್ಪನೆಯ ಕರಿಮಣಿಸರ, ಕಿವಿ ತುಂಬಾ ಬುಗುಡಿ ಬಾವುರಿಗಳು, ಮೂಗಿನಲ್ಲಿ ದಪ್ಪನಾದ ಒಂಟಿಕಲ್ಲು ಮೂಗುತಿಗಳಾವುವು ಇರಲ್ಲಿಲ್ಲ. ಒಂದು ಕಾಲದಲ್ಲಿ ಅಕ್ಕಾಯಮ್ಮನು ಇಲ್ಲದೆ ಮದುವೆಗೆ ಕಳೆಯಿಲ್ಲ,ಶುಭ ಕಾರ್ಯಗಳಿಗೆ ಶೋಭೆಯಿಲ್ಲ ಎಂದು ಭಾವಿಸಿ, ಹಳ್ಳಿಯ ಎಲ್ಲಾ ಶುಭ ಕಾರ್ಯಗಳಿಗೆ ಈ ಸುಮಂಗಲೆಯನ್ನು ಕಡ್ಡಾಯವಾಗಿ ಕರೆದುಕೊಂಡು ಹೋಗುತ್ತಿದ್ದ ಜತೆಗಾತಿಯರು ಇಲ್ಲ. ಆ ಕಾಲವೊಂದಿತ್ತು ದಿವ್ಯ ತಾನಾಗಿತ್ತು ಎಂಬಂತೆ ಅವೆಲ್ಲಾ ಒಂದು ಕಾಲದಲ್ಲಿ ತೊಟ್ಟು ಮರೆದು, ಹಾಡಿನ ರುಚಿಯನ್ನು ತೋರಿಸಿದ ಅಜ್ಜಿಯ ಬೆಡಗು-ಬಿನ್ನಾಣಗಳು, ಅಜ್ಜನ ಜೊತೆಗೆ ಹೊರಟವೇನೋ ಎನ್ನವಂತೆ ಈಗ ಒಬ್ಬಂಟಿಯಾಗಿ ಮಾಘಮಾಸದ ಕೋಗಿಲೆಯಂತೆ ಮೌನವಾಗಿ ಮನೆಮುಂದೆ ಕುಳಿತ್ತಿದ್ದಳು.

                  ಏನಮ್ಮ ಸಂದಾಕಿದ್ದೀಯ, ನಾನು ಬಂದೀನಿ. ನಿಮ್ಮನ್ನ ನೋಡಾಕ ಮೇಸ್ಟ್ರು ಬಂದವರೇ ಎಂಬ ಮಾತನ್ನು ಅಸ್ವಷ್ಟವಾಗಿ ಕೇಳಿಸಿಕೊಂಡು ಯಾರು ಮಗ್ಳೆ ನೀವು ಎಂದು ತಡಬಡಾಯಿಸಿ ಕೇಳಿದಳು. ನಾನು ಉತ್ತನೂರು ರಾಜಮ್ಮಎಂದು ಅಜ್ಜಿಯ ಕೈಯನ್ನು ಹಿಡಿದು ಹೇಳಿದಳು. ಅಜ್ಜಿಗೆ ನಿಧಿ ಸಿಕ್ಕಷ್ಟು ಸಂತಸವಾಯಿತು. ಇಬ್ಬರ ಕಣ್ಣುಗಳಲ್ಲೂ ನೀರಾಡಿತು. ಬಹುಶಃ ಇಬ್ಬರ ತಾಯಂದಿರದು ಹೆತ್ತಕರಳಿನ ಕರುಣ ಭಾವವೇ ಇದು ! ಎಂದನ್ನಿಸಿತು. ರಾಜಮ್ಮ ಮತ್ತು ಅಕ್ಕಾಯಮ್ಮನದು ಸುಮಾರು ನಲವತ್ತು ವರ್ಷಗಳ ತಾಯಿ-ಮಗಳ ಸಂಬಂಧವೋ, ಪ್ರೀತಿ ವಿಶ್ವಾಸ ಅಥವ ಸಹೃದಯತೆಯ ಸಂಬಂಧವೋ ಸ್ಪಷ್ಟವಾಗಿ ಹೇಳಲಾಗದು. ನನ್ನನ್ನು ಅಜ್ಜಿಗೆ ಪರಿಚಯಿಸಿದಾಗ, ನನ್ನ ಅಜ್ಜಿಯೊಂದಿಗಿನ ಮೊಮ್ಮೊಗನ ಸಲಿಗೆಯ ಭಾವದಲ್ಲೇ ಮುಕ್ತವಾಗಿ ಆ ದಿನದ ಎರಡು ಗಂಟೆಗಳನ್ನು ಅಕ್ಕಾಯಮ್ಮ ಜೆತೆಗೆ ಕಳೆದೆ.

          ಪರಕೀಯರ ಆಳ್ವಿಕೆಯ ಅವಧಿಯಲ್ಲಿ ಪರತಂತ್ರದ ಬದುಕಾದರೂ ಜನರಿಗೆ ಜಾನಪದ ಕಲಾಸಕ್ತಿ ಕಡಿಮೆಯಾಗಿರಲ್ಲಿಲ್ಲ.ಆದರಾಭಿಮಾನಗಳು ಕುಂದಿರಲಿಲ್ಲ. ದಿನನಿತ್ಯದ ನೋವು ನಲಿವುಗಳನ್ನು ರಾತ್ರಿಯ ಆಟಪಾಟಗಳಲ್ಲಿ ಮರೆಯುತ್ತಿದ್ದರು. ಅಕ್ಷರಜ್ಞಾನ ಅಭಾವದ ಕಾಲದಲ್ಲೂ ದೇಸಿಕೃಷಿ ಮತ್ತು ಕಲೆಗಳು ಸಿರಿವಂತವಾಗಿದ್ದವು. ಬೆಂಳೂರು ಗ್ರಾಮಾಂತರ ಜಿಲ್ಲೆಯ ತಾವರೆಕೆರೆ ಆಸುಪಾಸಿನ ಮಾರಸಂದ್ರಹಳ್ಳಿಯ ಕುರುಬರ ತಿರುಪಿಳ್ಳಪ್ಪನೆಂದರೆ ದೇಸೀ ಕೃಷಿಗೆ ಒಂದು ಹೆಸರು: ಮಡದಿ ಮುನಿಯಮ್ಮನೂ ಸಹಾ. ಸುತ್ತಮುತ್ತಲ ಗ್ರಾಮಗಳಲ್ಲಿ ಹೋರಿಗಳನ್ನು ಸಾಕುವುದರಲ್ಲಿ ಇವರು ಎತ್ತಿದ ಕೈಯಾಗಿತ್ತು. ಮನೆಗೆ ಬರುವ ಅತಿಥಿಗಳಿಗೆ ಆಧರಾಭಿಮಾನದಿಂದ ಸತ್ಕಾರ ನೀಡುವದರಲ್ಲಿ ಮುನಿಯಮ್ಮ ಆದರ್ಶ ಗೃಹಣಿ ಎನಿಸಿಕೊಂಡಿದ್ದಳು. ಹುರಳಿ-ಹುಲ್ಲು ಮೇವನ್ನು ಹೋರಿಗಳಿಗೆ ಅಣಿಗೊಳಿಸುವುದರ ಜತೆಗೆ ಕೃಷಿ ಕಾರ್ಯಗಳಲ್ಲೂ ಗಂಡನಿಗೆ ಸಹಕರಿಸುತ್ತಿದ್ದಳು. ಇಂತಹ ಆದರ್ಶ ದಂಪತಿಗಳ ಮೂರು ಜನ ಮುದ್ದು ಮಕ್ಕಳಲ್ಲಿ ಏಕೈಕ ಹೆಣ್ಣು ಮಗುವೇ ಅಕ್ಕಾಯಮ್ಮ.
                                  
            ಅಕ್ಷರ ಬರದ ಆ ಕಾಲದಲ್ಲಿ ಶಾಲೆಗಳು ಇರಲ್ಲಿಲ್ಲ. ಇದ್ದರೂ ಸಾಮಾನ್ಯ ಜನರಿಂದ ಅವು ದೂರದಲ್ಲೇ ಇದ್ದವು. ಆ ಅವಧಿಯಲ್ಲಿ ಸಾಮಾನ್ಯರ ಆಶಾದೀಪಗಳೇ-ಕೂಲಿಮಠಗಳು. ಪರಂಗಿಯವರ ಕಾಲದಲ್ಲಿ ತಾವರೆಕೆರೆಯ ಆಸುಪಾಸಿನ ಅರಸನಹಳ್ಳಿಯಲ್ಲಿ ಸ್ವಾಮಿ ಚಿನ್ಮಯನಂದಾ ಅವರ ಒಂದು ಮಠವಿತ್ತು. ಅದರಲ್ಲಿ ಒಂದು ದೇವಸ್ಥಾನವೂ ಸೇರಿತ್ತು. ರಜಪೂತರ ಬಾವಾಜಿಯಪ್ಪ ಎನ್ನುವ ಗುರುಗಳು ಆ ದೇವಸ್ಥಾನವನ್ನು ಕೂಲಿಮಠವಾಗಿ ಮಾರ್ಪಡಿಸಿದರು. ಜಾತಿ ಮತಗಳ ಅಂತರವನ್ನು ದೂಡಿ ಸರ್ವರಿಗೂ ವಿದ್ಯಾದಾನವನ್ನು ಮಾಡಿದರು. ಗ್ರಾಮಸ್ಥರೆಲ್ಲಾ ಸೇರಿ ಅವರಿಗೆ ಎಂಟಾಣೆ ಸಂಬಳವನ್ನು ನೀಡುತ್ತಿದ್ದರು. ಅಲ್ಲದೆ ತಾವು ಬೆಳೆದ ಧವಸಧಾನ್ಯಗಳಲ್ಲಿ ಒಂದು ಪಾಲನ್ನು ಅವರಿಗೂ ನೀಡುತ್ತಿದ್ದರು. ಆ ಗುರುವಿನ ಗುಣಗಳು ತುಂಬಾ ಮೇಲ್ಮಟ್ಟದವಾಗಿದ್ದವು.ನಾವು ಮನೆಯಲ್ಲಿ ಕೆಲವು ಸಾರಿ ಊಟತಿಂಡಿಗಳನ್ನು ತನ್ನದೆ ಹೋಗುತ್ತಿದ್ದುಂಟು. ಆಗ ಗುರುಗಳು ನನ್ನನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡು ನಮಗೆ ಊಟವನ್ನು ಮಾಡಿಸುತ್ತಿದ್ದರು. ಎಲ್ಲ ಮಕ್ಕಳಿಗೂ ಮನಸ್ಸಿಗೆ ನಾಟುವ ರೀತಿಯಲ್ಲಿ ಆಟಪಾಠಗಳನ್ನು ಹೇಳಿಕೊಡುತ್ತಿದ್ದರು. ಆಗ ಹೀಗಿನ ರೀತಿಯಲ್ಲಿ ಕಪ್ಪು ಹಲಗೆ ನಾವು ಕಂಡಿಲ್ಲಿ. ನೆಲದ ಮರಳಿನಲ್ಲಿ ಅಕ್ಷರಾಭ್ಯಾಸ ಆರಂಭವಾಗುತ್ತಿತ್ತು. ಹೀಗೆ ನಾನು ಮೂರನೆಯ ಈಯತ್ತಿನ ತನಕ ಓದಿದೆ. ಆಗಿನ ಸಮಯದಲ್ಲಿ ಹೆಣ್ಣು ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸುವುದು ಅಪರಾಧವೆಂದು ಜನ ನಂಬಿದ್ದರು. ಆದರೆ ನಮ್ಮಪ್ಪ ಮುದ್ದುಮಗಳು ಎನ್ನುವ ಕಾರಣಕ್ಕೆ ನನ್ನನ್ನು ಶಾಲೆಗೆ ಕಳುಹಿಸಿದರು. ಮೂರನೆಯ ಈಯತ್ತು ಓದುವಾಗಲೇ ಶಾಲೆಯನ್ನು ನಾನು ಬಿಟ್ಟು ಹೋರಿಗಳಿಗೆ ಹುಲ್ಲು ತರುವುದು, ಮನೆಕೆಲಸಗಳಲ್ಲಿ ಅಮ್ಮನಿಗೆ ಸಹಾಯ ಮಾಡುವ ಕಾರ್ಯಗಳಲ್ಲಿ ತೊಡಗಿಸಿಕೊಂಡೆ. ಒಟ್ಟಾರೆ ಆ ಕಾಲದಲ್ಲಿ ನಾನು ಮೂರನೆಯ ಈಯತ್ತಿನ ತನಕ ಓದಿದು ನನ್ನ ಸಾಧನೆಯಲ್ಲವೆ ?

          ನಾನು ಶಾಲೆಗೆ ಹೋಗುತ್ತಿರುವ ಆ ಸಮಯದಲ್ಲಿ ನಮ್ಮೂರಿನಲ್ಲಿ ತುಂಬಾ ಬೀದಿ ನಾಟಕಗಳನ್ನು ಆಡುತ್ತಿದ್ದರು. ಸತೀಸಕೂಬಾಯಿ. ಶನಿಮಹಾತ್ಮನ ಕಥೆಗಳನ್ನು,ಕೋಲಾಟದಂತಹ ಮನರಂಜನೆಯ ಕಾರ್ಯಗಳು ದಿನದ ದಣಿವನ್ನು ಪರಿಹರಿಸುತ್ತಿದ್ದವು. ಇಂತಹ ಕಲಾ ರಸಿಕರು ರಾತ್ರಿಗಟ್ಟಲೇ ಹಾಡುತ್ತಿದ್ದರು.ನನಗೆ ಮತ್ತು ನಮ್ಮ ಚಿಕ್ಕಮ್ಮನ ಮಗಳಾದ ವೆಂಕಟಗಿರಿಯಮ್ಮನಿಗೆ ಈ ಕಥೆಗಳು ಮತ್ತು ಅದರಲ್ಲಿನ ಹಾಡುಗಳು ಚಿಕ್ಕವರಿದ್ದಾಗಲೇ ಬಾಯಿಪಾಠವಾಗಿದ್ದವು. ನಾವು ಮನೆಯಲ್ಲಿ ಅಪ್ಪಮ್ಮಂದಿರ ಮುಂದೆ ಇವುಗಳನ್ನು ಹಾಡುತ್ತಿರಲಿಲ್ಲ. ಹುಲ್ಲಿಗೋ ಬೇರೆ ಕೆಲಸದ ನಿಮಿತ್ತ ಹೊರಹೋದಾಗ ಗೊಣಗುವುದು ಅಥವಾ ಯಾರು ದಾರಿಯಲ್ಲಿ ಕಾಣಿಸದಿದ್ದಾಗ ಜೋರಾಗಿ ಹಾಡುವುದನ್ನು ಮಾಡುತ್ತಿದ್ದೆವು. ನಮ್ಮೂರಿನಲ್ಲಿ ಯಾವುದಾದರೂ ಮದುವೆ ಅಥವಾ ಶುಭಕಾರ್ಯಗಳು(ಮೈನೆರೆಯುವುದು, ಗುಡಿಸಲಿಗೆ ಹಾಕುವುದು) ನಡೆದಾಗ ಅಮ್ಮನ ಜೊತೆಗೆ ಹೋಗುತ್ತಿದ್ದೆನು. ಅಲ್ಲಿ ಒಸಗೆ, ಸೋಬಾನೆ ಹಾಡುಗಳನ್ನು ಹಿರಿಯ ಮುದುಕಿಯರಿಂದ ಕೇಳಿಸಿಕೊಳ್ಳುತ್ತಿದ್ದೆವು.

           ಹೆಣ್ಣು ಸಮರ್ಥಳಾಗುವುದು ಜೀವನದ ಒಂದು ಅದ್ಭುತ ಘಟ್ಟ. ಆ ಹೆಣ್ಣು ಮಗುವನ್ನು ಬಾಗಿಲಾಚೆಯಿಡುವುದು ಸಂಪ್ರದಾಯ. ತಲೆಗೆ ಅರಳೆಣ್ಣಿ ಜೊತೆಗೆ ಮೂರು ರೀತಿಯ ಎಣ್ಣೆಗಳಿಂದ ತಲಂಟಿ(ಅಭ್ಯಂಜನ).ಮೈಗೆ ಅರಸಿನವಚ್ಚಿ ಬಿಸಿ ನೀರಿನ ಸ್ನಾನ ಮಾಡಿಸುತ್ತಿದ್ದರು. ಸೋದರ ಮಾವನಿಗೆ ಸುದ್ಧಿ ಮುಟ್ಟಿಸಿ ಹೊಂಗೆ-ಊಡುಗ-ನೇರಳೆ ಸೊಪ್ಪಿನಿಂದ ಗುಡಿಸಲಾಕಿಸಿ ಮೂರು ದಿನಗಳು ವಸಗೆ ಕಾರ್ಯಗಳು ನಡೆಸುತ್ತಿದ್ದರು. ಚೆಕ್ಕಲಿ.ತಂಬಿಟ್ಟು.ಸಿಂಬಿಲುಂಟೆ,ಬಾಳೆ ಒಣಕೊಬ್ಬರಿ ತಿನ್ನಲು ನೀಡುತ್ತಿದ್ದರು. ಮೂರು ದಿನಗಳು ಮಾವನು ಹಾಕಿದ ಗುಡಿಸಲಿನಲ್ಲೆ ಇರುತ್ತದ್ದೆವು. ಪ್ರತಿದಿನವೂ ಸಂಜೆ ನಮಗೆ ಮುತ್ತೈದೆಯರು ವಸಗೆ ಹಾಕುತ್ತಿದ್ದರು. ಗೆಳತಿಯರು ನಮ್ಮ ಜೊತೆಗಿರುತ್ತಿದ್ದರು. ತುಂಟ ಮಾತುಗಳನ್ನು ಹೇಳುತ್ತಿದ್ದರು. ಮೂರನೆಯ ದಿನ ನಮ್ಮನ್ನು ಬಾಗಿಲಾಚೆ ನಿಲ್ಲಿಸಿ ಮೂವರು ಮುತ್ತೈದೆಯರು ಅರಿಸಿನ ಎಲೆಯನ್ನು ನೀಡಿ ಮನೆಯೊಳಗೆ ಕರೆದುಕೊಳ್ಳುತ್ತಿದ್ದರು.
                                  
         ಮದುಮಗನಿಗೆ ಸುದ್ಧಿ ತಿಳಿಸಿ ಸೋಬನಕ್ಕೆ ಕರೆತಂದು ಅವರಿಬ್ಬರನ್ನು ಒಂದು ಮಾಡುವುದು ನಮ್ಮ ಕಾಲದಲ್ಲಿತ್ತು. ಅದು ಜೀವನದ ಅತಿ ಸುಖಮಯವಾದ ಘಟನೆಯೆಂದೇ ಕರೆಯಬೇಕು. ಆಗಿನ ಸಂದರ್ಭದ ಹಾಡುಗಳು ಮನವನ್ನು ರಂಜಿಸುವಂತಹವು. ಈಗ ಏನಿದೆ ಬಿಡಿ. ಬರಿ ಸೋಕಿ. ಎಂದು ಅಜ್ಜಿ ಒಂದು ಹಾಡನ್ನು ಹಾಡ ತೊಡಗಿದಳು. ಆಗ ಆಕೆಯ ಮುಖದಲ್ಲಿ ಏನೋ ಒಂದು ರೀತಿಯ ನವತನ ತುಂಬಿತ್ತು. ಆ ಹಾಡು ಹೀಗಿದೆ.

ಮಲ್ಲಿಗೆ ಮುಡಿಸ್ಯಾನ

ಮರಳಕ್ಕಿ ಕಟ್ಟ್ಯಾನ

ಇನ್ನೇನು ಮಗಳೇ ಎರವಾದೆ
ವಸವಸೆಗೆಂದಾರೆ

ಮುಸಮುಸನ ನಗತಾರೆ

ನಲ್ಲೆ ನಿನ್ನಳಿಯ ಬರುತ್ತಾನೆ ತಾಯಮ್ಮ

ಮಲ್ಲಿಗೆ ಮುಡಿಸೇ ಮಗಳೀಗೆ

ಬಾಲೆ ನೆರೆದವಳೇ

ಬಾಕಲಾಗೆ ನಿಂತವಳೇ

ತವರೀಗೇಳಿ ಕಳಿಸೇ ತಾಯಮ್ಮ
        ಹೀಗೆ ಮುದುಕಿಯರು ಹಾಡುತ್ತಿದ್ದರು. ನಾವು ಆರಂಭದಲ್ಲಿ ಸ್ವಲ್ಪ ನಾಚಿಕೆಯಿಂದಲೇ ಗೊಣಗುತ್ತಿದ್ದೆವು. ಕೆಲವು ದಿವಸಗಳ ನಂತರ ಅವರ ಜೊತೆ ನಾವು ಹಾಡುವುದನ್ನು ಆರಂಭಿಸಿದೆವು.ಹೀಗೆ ಮದುವೆಗೂ ಪೂರ್ವದಲ್ಲೆ ವಸಗೆ ಪದಗಳು,ಕೋಲಾಟದ ಪದಗಳು, ಸೋಭಾನೆ ಪದಗಳು ಕುರುಬದ್ಯಾವರ ಪದಗಳು,ಅಣ್ಣ-ತಂಗಿಯ ಆತ್ಮೀಯ ಸಂಬಂಧವನ್ನು ಹಾಗೂ ಅತ್ತಿಗೆಯ ಕ್ರೂರ ವರ್ತನೆಯನ್ನು-ಇವೆಲ್ಲದರ ಕಾರಣದಿಂದ ಅಣ್ಣ-ತಂಗಿಯ ಆತ್ಮಿಯ ಸಂಬಂಧ ಕೆಟ್ಟು ತಂಗಿಯ ಬದುಕು ಸಾವಿನೊಂದಿಗೆ ಅಂತ್ಯವಾಗುವ ಅತ್ಯಂತ ಕರುಣಾಜನಕ ಖಂಡಕಾವ್ಯವಾದ ರಾಮಣ್ಣನ ಹಾಡುಗಳು ಬಾಯಿ ಪಾಠವಾಗಿದ್ದವು. ಸಿನಿಮಾ ಅಥವಾ ಇನ್ನಾವುದೇ ಮನರಂಜನಾ ಮಾಧ್ಯಮಗಳ ಕನಸು ಇಲ್ಲದ ಕಾಲದಲ್ಲಿ ನಮಗೆ ರಂಜನೆ ನೀಡುವುದರ ಜೊತೆಗೆ ಹೊತ್ತು ಕಳೆಯಲು ಇದ್ದ ಸಾಧನಗಳು ಈ ಜಾನಪದ ಹಾಡುಗಳೇ. ಹೀಗೆ ನಮ್ಮೂರಿನ ಹಿರಿಯರೇ ನಮಗೆ ಮೊದಲ ಜಾನಪದ ಗುರುಗಳು ಎಂದು ಹೇಳಬಹುದು.
                                                      
          ಎತ್ತಣ ಮಾಮರ, ಎತ್ತಣ ಕೋಗಿಲೆ ಎನ್ನುವಂತೆ ತಾವರೆಕೆರೆಯ ಮಾರಸಂದ್ರಹಳ್ಳಿಗೂ ಚಿಂತಾಮಣಿಯ ದೊಡ್ಡಿಕೊಂಡ್ರಹಳ್ಳಿಗೂ ಏನು ಸಂಬಂಧ ? ಎಂದು ಅಜ್ಜಿಯನ್ನು ಪ್ರಶ್ನಿಸಿದಾಗ ತನ್ನ ಬೊಚ್ಚು ಬಾಯಿ ಅಂಚುಗಳಲ್ಲಿ ಒಂದು ಕ್ಷಣ ಉಸಿ ನಗು ಮೂಡಿತು. ಮುಂದುವರಿದು ಹೇಳಿದಳು. ಚಿಂತಾಮಣಿ ಸಮೀಪದ ಸಿನ್ನಸಂದ್ರಕ್ಕೆ ನಮ್ಮಪ್ಪನ ತಂಗಿಯನ್ನು ಕೊಟ್ಟು ವಿವಾಹ ಮಾಡಿದ್ದರು. ಮುನಗನಹಳ್ಳಿಯಲ್ಲಿ ನಮ್ಮ ಚಿಕ್ಕಮ್ಮನವರು ಇದ್ದರು. ಅವರು ನಮ್ಮ ಯಜಮಾನರಿಗೆ ಗೊತ್ತಿದ್ದವರು. ಆ ಲೆಕ್ಕಚಾರದ ಮೇಲೆ ನನ್ನನ್ನು ದೊಡ್ಡಿಕೊಂಡ್ರಹಳ್ಳಿಗೆ ಕೊಟ್ಟರು. ನನಗೆ ಮದೆಯಾದಾಗ ಸುಮಾರು ಹತ್ತು ವರ್ಷದವಳಿರಬೇಕು. ನಮ್ಮ ಯಜಮಾನರಿಗೆ ಒಂದು ಹದಿನೇಳು ಹದಿನೆಂಟು ವರ್ಷವಾಗಿತ್ತು. ನಮ್ಮದು ಐದು ದಿನದ ಮದುವೆ. ಮದುವೆಯಾದ ನಂತರ ನಾನು ದೊಡ್ಡವಳು ಆಗುವ ತನಕ ನಮ್ಮೂರಿನಲ್ಲೇ ಇದ್ದೆ. ನಮ್ಮ ಕಾಲದಲ್ಲಿ ಸಮರ್ಥಳಾಗದೆ ಕಾಪುರಕ್ಕೆ ಕಳುಹಿಸುವ ಪದ್ದತಿಯಿರಲಿಲ್ಲ. ಈಗ ಬಿಡಿ ಎಲ್ಲವೂ ಅದಲು ಬದಲಾಗಿಬಿಟ್ಟಿದೆ. ಎಂದು ಒಂದು ನಿಟ್ಟುಸಿರು ಬಿಟ್ಟಳು.

          ದೊಡ್ಡಕೊಂಡ್ರಹಳ್ಳಿಯ ಮುನಿಶಾಮಪ್ಪನೆಂದರೆ ಸುತ್ತಾರು ಹಳ್ಳಿಗೆ ಗೊತ್ತಿದ್ದವರು. ಬಡತನವಿದ್ದರು ಗುಣದಲ್ಲಿ ಸಿರಿವಣತರು. ಮದುವೆಯಾದ ಮೇಲೆ ದನ-ಕುರಿಗಳನ್ನು ಮೇಯಿಸಿಕೊಂಡು ಕಾಲ ಕಳೆಯುತ್ತಿದರು. ಮದುವೆಯಾಗಯೂ ಜೊತೆಗಾತಿಯಿಲ್ಲದ ಏಕಾಂಗಿತನವನ್ನು ಕಳೆಯಲು ದನಕುರಿಗಳೊಂದಿಗೆ ಕಾಡಿನ ಮೊರೆ ಹೋಗಿದ್ದರು. ಒಂದು ದಿನ ಅವರಿಗೆ ನಮ್ಮ ಮನೆಯವರು ಒಂದು ಸಿಹಿಸುದ್ಧಿಯನ್ನು ಮುಟ್ಟಿಸಿದರು. ಅದೇ ನಾನು ಸಮರ್ಥಳಾಗಿರುವ ಸುದ್ಧಿ. ಆದರೆ ಗಂಡನ ಮನೆಯಿಂದ ವಸಗೆ ತಂದು ಸೋಬನ ಮಾಡದ ಹೊರೆತು ಹೆಣ್ಣನ್ನು ಕಳುಹಿಸುವ ಪದ್ಧತಿ ಇರಲಿಲ್ಲ.

ಮಲ್ಲಿಗೆ ಮುಡಿಸ್ಯೇಳೆ ಮಗಳೀಗೆ
ಅಲ್ಲದ ಏರೀ ಮ್ಯಾಲೆ
ಬೆಲ್ಲದ ಗೂಡಾರಯಿಸಿ
ನಲ್ಲೆ ನಿನ್ನಳಿಯ ಬರುತಾನೆ
ತಾಯಮ್ಮ

ಮಲ್ಲಿಗೆ ಮುಡಿಸೇ ಮಗಳೀಗೆ
ಸಿಕ್ಕಿ ಮೈನೆರೆದು
ಸೂರಲ್ಲಿ ನಿಂತವಳೇ
ಸುತ್ತಲೊಡ್ಡವನೇ
ಅವರಪ್ಪಾ ಮಳೆರಾಯಾ

ಸುಕ್ಕೀಗ ಹನ್ನೆರಡು ಪಲವಂದು

ಮಲ್ಲಿಗೆ ಮುಡಿಸೇ ಮಗಳೀಗೆ



ಬಾಲೆ ನೆರದವಳೇ

ಬಾಕಲಾಗೆ ನಿಂದವಳೆ

ನಿಮ್ಮಣ್ಣನಿಕ ಹೇಳ್ಕಳಿಸೇ

ತೌರಸೂರಿಗೆ

ಎಸರು ತಾರಮ್ಮಾ ನಿನ್ನ ತಾಯಮ್ಮಾಗೆ
         ಅದಕ್ಕೆ ಯಜಮಾನರು ಒಸಗೆಯನ್ನೆಲ್ಲ ತಯಾರಿಸಿ ಬಂಧುಗಳ ಜತೆಗೆ ನಮ್ಮೂರಿಗೆ ಹೊರಟು ಅರ್ಧ ದಾರಿಗೆ ಬಂದರು. ಆವೊತ್ತೇ ಮಳೆ ಬರಬೇಕೆ ? ಬಂದರೇ ಬರಲಿ ಕೆರೆಕಟ್ಟೆಗಳು ಒಡೆದು ಹೋಗಬೇಕೇ ? ಎಂತಹ ದುರಂತ ನೋಡಿ!! ಆಗ ನಮ್ಮ ಯಜಮಾನರು ನನ್ನನ್ನು ನೋಡುವ ಕಾತುರದಲ್ಲಿ ಮಳೆಯನ್ನು ಹೀಗೆ ಪ್ರಾಥರ್ಿಸಿದರಂತೆ..

ಒಸಕ್ವಾಟೊಸಕ್ವಾಟೇ
ಎಲೇ ನಾರಿ


ಅದೆಂತಾ ಒಸಕ್ವಾಟೇ

ಒಸಕ್ವಾಟೆ ಸುತ್ತೂರ ಒಂಬಾಳೆ

ಒತ್ತೋಗಿ ಬಾರೋ ಮಳೆರಾಯ

ಸಿರಿಗಂಧಾರಿ ನೆರದವಳೆ

ಬೆಂಗಳೂರು ಬೆಂಗಳೂರು
ಎಲೆ ನಾರಿ


ಅದೆಂತಾ ಬೆಂಗಳೂರೇ..

ಬೆಂಗಳೂರು ಸುತ್ತಾರ ಬೆಡಗೀತೆ

ಸಿರಿಗಂದಾರಿ ನೆರೆದವಳೇ

ಒತ್ತೋಗಿ ಬಾರೋ ಮಳೆರಾಯ

ಸಿರಿಗಂಧಾರಿ ನೆರೆದವಳೆ...

        ನಮ್ಮ ಯಜಮಾನರು ಮಹಾ ಕಲಾರಸಿಕರು. ಅವರು ಬೀದಿ ನಾಟಕದಲ್ಲಿ ಗೋಪಿಚಂದ್ರನಾಟಕದಲ್ಲಿ ಶ್ರೀಕೃಷ್ಣನ ಪಾತ್ರ. ಸತ್ಯ ಹರಿಶ್ಚಂದ್ರನ ವೇಷ ತೊಟ್ಟು ಬಂದರೇ ಇಡೀ ಸಭೆಯೇ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದರು.ಅವರ ಹಾಡಲು ಆರಂಭಿಸಿದರೆ ಮನಸ್ಸಿರುವ ಮನುಷ್ಯರ ಕಣ್ಣುಗಳಲ್ಲಿ ನೀರು ಬರದಿರಲು ಸಾಧ್ಯವಿರಲಿಲ್ಲ. ಅಷ್ಟು ಗತ್ತು ಗಮತ್ತಿನಿಂದ ಹಾಡು-ಪದ್ಯಗಳನ್ನು ಹಾಡಿ ಮೋಡಿ ಮಾಡುತ್ತಿದ್ದರು. ಅಂತಹ ಪುಣ್ಯಾತ್ಮ ನನ್ನನ್ನು ಬಿಟ್ಟು ಹೋದ ನೋಡಿ. ಎಂದು ಮತ್ತೆ ಗಂಡನ ನೆನಪಾಗಿ ಕಣ್ಣಿನಲ್ಲಿ ನೀರಾಡಿದವು.
                                                
           ಉತ್ತನೂರು ರಾಜಮ್ಮನವರು ತಮ್ಮ ಮತ್ತು ಅಕ್ಕಾಯಮ್ಮನ ನಡುವಿನ ಸಂಬಂಧದ ಬುತ್ತಿಯನ್ನು ಬಿಚ್ಚತೊಡಗಿದರು. ಒಂದು ಸಲ ಈ ನೂರು ವರ್ಷದ ಮುದುಕಿ ನೂರೈದು ವರ್ಷದ ಈಕೆಯ ಗಂಡ ಮುನಿಶಾಮಪ್ಪ ಪರಂಗೋರ ಕಾಲದಾಗ ಕರೆಗಳೆಲ್ಲಾ ಒಡ್ಡು ಒಡೆದು ಊರುಗಳೆಲ್ಲಾ ಮುಳುಗಿದಾಗ ಮೀಸೆ ಸಿಗರಿದ ಹುಡುಗನಾಗಿ; ಕುರಿ ದನ ಕಾಯುತ್ತಿದ್ದನಂತೆ. ಎಂದು ಹೇಳಿದ ತಕ್ಷಣವೇ ಅಜ್ಜನ ನೆನಪಿನೊಂದಿಗೆ ಅವರ ಗುಣಗಾನವೂ ಅರಂಭವಾಯಿತು. ಅಂತಹ ಪುಣಾತ್ಮ ಸಿಗ್ತಾನಯೇ, ನನ್ನವರೋದಮ್ಯಾಕ ನನ್ದೆಲ್ಲಾ ಹೋಯ್ತು ಎಂದು ಒಂದೆರಡು ನಿಮಿಷ ಕಣ್ಣೀರು ಸುರಿದಳು. ಅಕ್ಕಾಯಮ್ಮ ಅಜ್ಜಿಗೆ ಉಡಿತುಂಬಾ ಅಡಿಕೆಲೆ ಕೊಟ್ಟು ಪುರಮಾಯಿಸಿ ಮಾಡಿ ಆ ಮಾತು ಈ ಮಾತುಗಳಿಂದ ಹೊಗಳಿ ಅಟ್ಟಕ್ಕೇರಿಸಿದಾಗ ಹಾಡಲು ತಯಾರಾಗಿ ಕುಂತುಬಿಡುತ್ತಿದ್ದಳು. ಉತ್ಸಾಹದ ಬುಗ್ಗೆಯಂತೆ ಸೊಬಗಿನ ಇಳಿಯವಯಸ್ಸಿನ ಅಕ್ಕಾಯಮ್ಮಜ್ಜಿ ಮದುವೆಯ ಹೆಣ್ಣಿನಂತೆ ಸ್ವಲ್ಪ ಸಿಗ್ಗು ಸ್ವಲ್ಪ ಬಿಂಕ ರವಷ್ಟು ಬಿನ್ನಾಣ ಕೊಸರುತ್ತಾ ಮಡಿಸಿದ ಮೊಣಕಾಲ ಚಿಪ್ಪಿನ ಮೇಲೆ ತಲೆ ಆನಿಸಿಕೊಂಡು ಹಾಡುತ್ತಿದ್ದಳು. ಅವುಗಳನ್ನು ಕೇಳುವ ಅದೃಷ್ಟ ಮೇಷ್ಟ್ರಂತಹವರಿಗಿಲ್ಲ. ಅಜ್ಜಿ ಒಂದು ನುಡುಗನ್ನು ಎಂದಾಗ ಇಲ್ಲ ಅಮ್ಮಣ್ಣಿ ಎಲ್ಲಾ ಮರ್ತೋಗಿದ್ದೀನಿ. ನೀನು ನುಡುಗೆತ್ತಕೊಟ್ರೆ ಹಾಡ್ತೀನಿ ಎಂದಾಗ ರಾಜಮ್ಮ ಅವರ ಧ್ವನಿಗೆ ಧ್ವನಿಗೂಡಿಸಿ ಅಜ್ಜಿ ಹಾಡ ತೊಡಗಿದಳು. ಮರೆತ ಯಾವುದೋ ಜೀವನದ ಪುಟ ತೆರೆದಂತೆ. ಕೋಲಾರದಲ್ಲಿರು ಬೀರೇದ್ಯಾವರನ್ನು ಆರಾಧಿಸುವ ಸಮಯದಲ್ಲಿ ಹಾಡುವ ಹಾಡುಗಳಲ್ಲಿ ಇದು ಪ್ರಮುಖವಾದ ಹಾಡಾಗಿದೆ. ಆದರೆ ಮರೆವಿನ ಕಾರಣದಿಂದ ಬಂದಷ್ಟು ಸುಗಮವಾಗಿ ಹಾಡಿದಳು.

ದ್ಯಾವರಪದ- ಅಣ್ಣ ಸನಿಕೆ ತಾರೋ


ತಮ್ಮ ಗುದ್ದಲಿ ತಾರೋ



ಕೋಳಾಲ ಮಣ್ಣ ತುಳಿಬಾರ ಸಿದ್ಧಯ್ಯ

ನಮ್ಮ ಹುಟ್ಟಿದ ಮನೆ ದ್ಯಾವರು

ಇರಾದೆ ಕೋಲಾರ
         ಎಂದು ಹಾಡಲು ಆರಂಭಿದಳು. ಹಾಡುವಾಗ ಆಕೆಯ ಮುಖದಲ್ಲಿ ಹೊಸ ಕಳೆ ಉಕ್ಕುತ್ತಿತ್ತು. ಬಹುಶಃ ನನ್ನ ಹಾಡನ್ನು ಮೆಚ್ಚುವ ಆಸಕ್ತರು ಇದ್ದಾರೆನ್ನಿಸಿತೋ ಏನೋ!!. ಹಾಡುತ್ತಾ ಹಾಡುತ್ತಾ ಬೇರೆ ಪರಿವೆಯೇ ಇಲ್ಲದಂತೆ ತನ್ಮಯಳಾಗಿ ಹಾಡುತ್ತಿದ್ದ ಅಜ್ಜಿಯನ್ನು ಹಿಂದೆ ಅವರ ಯಜಮಾನ ಮುನಿಶಾಮಪ್ಪನವರು ಹಿಂಗೆ ಅನ್ನುತ್ತಿದ್ದರಂತೆ ಏನೇ ಯಜಮಾನ್ತಿ ನೀ ಮದುವಣಿಗಿತ್ಯಂತೆ ಸೊಲ್ಲಾಡ್ತಾ ಕುಂತುಬುಟ್ರೆ ಮನೀಕ ಕಡೀ ಎಂತ್ಯೆ. ಎಂದಾಗ ಅವುದೌವುದು ಎದ್ದೇಳು ಯಜಮಾನ ಮಗ್ನು ನೇಗ್ಲು ಬಿಚ್ಚ್ಕೊಂಡು ಬಂದ್ರೆ ಕೊಟ್ಟಗ್ಯಾಗ ಹುಲ್ಲಿಲ್ಲ ಎಂದು ಎದ್ದು ಹೊರಡುತ್ತಿದ್ದಳು. ಅಷ್ಟೆ ಅಲ್ಲ ಎಚ್ಚರಿಸಿದಾಗಲೇ ಅಜ್ಜಿ ಇಹಲೋಕದ ಪರಿವೆಗೆ ಬರುತ್ತಿದ್ದದ್ದು ಅಲ್ಲದೆ ರಾಜಮ್ಮನವರು ಇವರ ಹಾಡುಗಳನ್ನು ಧ್ವನಿ ಮುದ್ರಿಸಿ ಅವರಿಗೆ ಕೇಳಿಸಿದ ಸಮಯದಲ್ಲಿ ಆ ಧ್ವನಿಗೆ ಕಿವಿ ನಿಮಿರಿಸಿಕೊಂಡು ಕುಳಿತ ಅಜ್ಜಿ ಆಶ್ಚರ್ಯ, ಹರ್ಷಗಳಿಂದ ಪಕ್ಕದಲ್ಲಿ ಕುಳಿತಿದ್ದ ಯಜಮಾನ ಮುನಿಶಾಮಪ್ಪನ ಪಕ್ಕೆ ತಿವಿದು ಕೇಳ್ದಾ ಯಜಮಾನ ಏನು ಪಸಂದಾಗೋದೋ ಪದ ಅಂದಾಗ ಹೌದಲ್ಲೇ ಯಜಮಾನ್ತಿ ನಿನ್ನ ಮಕಕ್ಕೆ ರಂಗುಬಳ್ಬುಟ್ರೆ ಪಸಂದಾಗಿ ಕುಣಿದೋಗ್ಬುಡ್ತೀಯ ಅನ್ನುತ್ತಿದ್ದರಂತೆ -ಎಂದು ಅಲ್ಲಿದ್ದವರು ಹೇಳಿದರು.ಅಷ್ಟು ಅನ್ಯೋನ್ಯ ಸಂಬಂಧ ಅವರದು. ವಿರಸವಿಲ್ಲದ ಸರಸಜೀವನ ನಡೆಸಿದರು. ಎಂದು ಅವರ ಸಮಕಾಲೀನರು ಹೇಳಿದ ತಕ್ಷಣ ಕವಿ ಮಿತ್ರ ಮೂಡಲಗೊಲ್ಲಳ್ಳಿ ನರಸಿಂಹಪ್ಪ- ಇವರಂತೆ ಅನ್ಯೋನ್ಯ ಬದುಕು ನಮಗಿಲ್ಲವಲ್ಲ ಎಂದರು. ಅಷ್ಟು ಹಾಡಗಾರಿಕೆಯಲ್ಲಿ ತನ್ಮಯಳಾಗಿ ಹಾಡುತ್ತಾಳೆ ಅಕ್ಕಾಯಮ್ಮಜ್ಜಿ.

               ಗಂಡ ಮುನಿಶಾಮಪ್ಪ ದನ,ಎಮ್ಮೆ, ಕುರಿಗಳನ್ನು ಮೇಯಿಸುತ್ತಾ ವ್ಯವಸಾಯಕ್ಕೆ ಒಗ್ಗತೊಡಗಿದರು. ವೀಳ್ಯಯ ತೋಟವನ್ನು ಬೆಳಸಿದರು. ಅಜ್ಜಿ ಅಕ್ಕಾಯಮ್ಮ ಸಂಸಾರ ಮತ್ತು ಮಕ್ಕಳ ಪಾಲನೆಯನ್ನು ಮಾಡಲು ಹಾಲು, ಮೊಸರು ಮತ್ತು ತುಪ್ಪವನ್ನು ಸುತ್ತಲ ಹಳ್ಳಿಗಳಿಗೆ ತೆಗೆದುಕೊಂಡು ಹೋಗಿ ಮಾರಿ ಮಕ್ಕಳ ಮತ್ತು ಸಂಸಾರವನ್ನು ಪೋಷಿಸ ತೊಡಗಿದಳು. ದಾರಿಯಲ್ಲಿ ಸಿಕ್ಕದವರಿಗೆ ಮಗ ಬಿಸಿಲಾಗ ಹೊಂಟೀಯ ಲೋಟ ಮಜ್ಜಿಗೆ ಕುಡ್ದು ಹೋಗು ಎಂದು ಅವರ ಹೊಟ್ಟೆಯನ್ನು ತಟ್ಟಗಾಗಿಸುತ್ತಿದ್ದಳು. ಅಂತಹ ಕರುಣಾಳು ಅಕ್ಕಾಯಮ್ಮನನ್ನು ಅವರು ಮಾಡಿದ ಒಳ್ಳೆಯ ಕೆಲಸಗಳೇ ಇಷ್ಟು ವರ್ಷಗಳು ಬದುಕಿಸಿರಬಹುದೇನೋ !

       ಅಕ್ಕಾಯಮ್ಮಜ್ಜಿ ಜಿಲ್ಲೆಯ ಅತ್ಯಂತ ಹಿರಿಯ ಶತಾಯುಷಿ ಜನಪದ ಗಾಯಕಿ. ಆಕೆ ಹಾಡುತ್ತಿದ್ದ ಕಾಲದಲ್ಲಿ ಆ ಅಪೂರ್ವ ಸಾಹಿತ್ಯವನ್ನು ಸಂಗ್ರಹ ಮಾಡಿದ್ದದರೆ, ಕೋಲಾರ ಸೀಮೆಯ ಜಾನಪದ ಸಾಹಿತ್ಯಕ್ಕೆ ಒಂದು ಹೊಸ ಹೊಳಪು ಪ್ರಾಪ್ತವಾಗುತ್ತಿತ್ತೇನೋ. ಇಂದು ತುಂಬು ಸಂಸಾರದ ಮಕ್ಕಳು ಮರಿಮಕ್ಕಳ ಜೊತೆಗಿದ್ದರು ಗಂಡನಿಲ್ಲದ ಏಕಾಂಗಿತನ ಆಕೆಯನ್ನು ಕಾಡುವಂತಿದೆ. ಆ ಏಕಾಂಗಿತನವನ್ನು ಕಳೆಯಲೆಂದು ಹಾಡುಗಳನ್ನು ಹಾಡಲು ದೀಘರ್ಾಯುಷ್ಯದ ಕಾರಣದಿಂದ ನೆನಪು ಮಾಸಿದೆ. ಆದರೂ ಸುತ್ತಮುತ್ತಲ ಊರುಗಳಲ್ಲಿ ಈಕೆಯೊಂದಿಗೆ ಹಾಡುತ್ತಿದ್ದ ಹಾಡುಗಾರ ಜಾನಪದ ಪರಂಪರೆಯನ್ನು ಮುಂದುವರಿಸುವಂತಾಗಬೇಕು. ಆ ಮೂಲಕ ಯುವ ಜನತೆಯು ಅವನ್ನು ಕಲಿಯುವಂತಾದಾಗ ಜಾನಪದ ಸಾಹಿತ್ಯಕ್ಕೆ ಒಂದು ನೆಲೆ ಸಿಗುತ್ತದೆ.
                                       
          ಅಕ್ಕಾಯಮ್ಮ ಹಾಡುವ ಸಂದರ್ಭದಲ್ಲಿ ಯಾವುದೇ ಅಕಾಡೆಮಿಗಳು ಸಂಘ-ಸಂಸ್ಥೆಗಳು ಗುತರ್ಿಸಿ ಪ್ರೋತ್ಸ್ಸಾಹ ನೀಡದಿರುವುದು ವಿಪಯರ್ಾಸವೆಂದೆ ಹೇಳಬೇಕಾಗುತ್ತದೆ. ಆದರೂ ಉತ್ತನೂರು ರಾಜಮ್ಮನವರು ಸುಮಾರು ಮೂವತ್ತು ವರ್ಷಗಳ ಹಿಂದೆಯೇ ಆಕೆಯ ಬಗ್ಗೆ ಅನೇಕ ನಿಯತಕಾಲಿಕಗಳಲ್ಲಿ ಲೇಖನಗಳನ್ನು ಬರೆದಿದ್ದಾರೆ. ಹಾಡುಗಳನ್ನು ಧ್ವನಿಮುದ್ರಿಸಿ ಆಗಿನ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿದ್ದ ಡಾ.ಎಚ್,ಎಲ್.ನಾಗೇಗೌಡರಿಗೆ ಒದಗಿಸಿಕೊಟ್ಟಿದ್ದಾರೆ. ಅದಕ್ಕೆ ಅಕ್ಕಯಮ್ಮನವರಿಗೆ ಮೂವತ್ತು ರುಪಾಯಿಗಳ ಗೌರವಧನವು ಸಂಧಾಯ ಮಾಡಿದ್ದರು.ಆದರೆ ಶಾಶ್ವತವಾದ ಪ್ರಶಸ್ತಯಂತಹ ಪ್ರೋತ್ಸಹಗಳು ನೀಡಲಿಲ್ಲಿ. ಅದಕ್ಕೆ ಕಾರಣಗಳು ತಿಳಿಯದು. ಇತ್ತೀಚಿನ ದಿನಗಳಲ್ಲಿ ಚಿಂತಾಮಣಿಯ ಲಂಕೇಶ ಸಂವೇಧನೆ,ಓದುಗರವೇದಿಕೆ ಶ್ರೀಸಾಯಿ ಕಲಾನಿಕೇತನ ಹಾಗೂ ಜಾನಪದ ಅಕಾಡೆಮಿ ಪರವಾಗಿ ಇವರನ್ನು ಸನ್ಮಾಸಿಸಲಾಗಿದೆ. ಆದರೂ ಈ ಹಿರಿಯ ಚೇತನಕ್ಕೆ ಬದುಕಿನ ಅಂತಿಮ ಘಟ್ಟದಲ್ಲಾದರೂ ಸಕರ್ಾರಗಳು ಸಂಘ-ಸಂಸ್ಥೆಗಳು ಸಹಾಯ ಹಸ್ತವನ್ನು ನೀಡಲಿಲ್ಲವಾದರೇ ಒಂದು ಕಲಾಪ್ರಕಾರವನ್ನು ನಿರ್ಲಕ್ಷಿದ ಹಾಗೆ ಆಗುತ್ತದೆ. ಅದು ಅಕ್ಷಮ್ಯ ಅಪರಾದವೆಂದೇ ಭಾವಿಸಬೇಕಾಗುತ್ತದೆ. ಅಕ್ಕಾಯಮ್ಮ ನೂರು ಹತ್ತು ವಸಂತಗಳಿಂದ ಸಾಧಿಸಿದ ಸಾಧನೆಗೆ ಬೆಲೆಯಿಲ್ಲದಾಗುತ್ತದೆ.























ಜನಪದ ವೈದ್ಯದ 'ದಿಸ್ಟಿ'ಯ ಆಚರಣೆಗಳು

         ಆಧುನಿಕತೆಯ ಅಬ್ಬರದಲ್ಲೂ ದೃಷ್ಟಿ ತೆಗೆಯುವ ಆಚರಣೆಯನ್ನು  ಕಾಣುತ್ತೇವೆ. 'ದಿಸಿ'್ಟ ಎನ್ನುವುದು 'ದೃಷಿ'್ಟಯ ಜನಪದ ರೂಪ. ಅಂದರೆ ನೋಟ ಎಂದರ್ಥ. ಹಿರಿ-ಕಿರಿಯರಿಗೆ ಕೆಟ್ಟ ನೋಟಗಳು ಬಿದಿದ್ದರೇ ಅದನ್ನು ನಿವಾರಿಸುವ ಸಲುವಾಗಿ ಮಾಡುವ ಒಂದು ರೀತಿಯ ಶಾಂತಿಯನ್ನು 'ದೃಷ್ಟಿ ತೆಗೆಯುವುದು' ಎಂದು ಕರೆಯುವರು. ಊಟ ಮಾಡಲು ಆಗದಿರುವುದು. ವಿಪರೀತವಾಗಿ ಆಕಲಿಕೆಗಳು ಬರುವುದು. ಸುಸ್ತು ಹೊಟ್ಟೆ ಉಬ್ಬರಿಸಿ ಬರುವುದು. ಹುಳಿತೇಗು ಮುಂತಾದ ಅನಾರೋಗ್ಯಕರ ಲಕ್ಷಣಗಳು ಕಾಣಿಸಿದಾಗ ಮಾಡುವ ದೃಷ್ಟಿಯ ಆಚರಣೆ ವಿಶಿಷ್ಟವಾದುದು.
                                               
 'ಕೂಟಿ ದಿಸ್ಟಿ' (ಅನ್ನ ತೆಗೆದು ಹಾಕುವುದು)  

                                                
                                                                 ಅರಿಶಿನದ ನೀರನ್ನು ತಟ್ಟೆಯಲ್ಲಿ ಮಾಡಿಟ್ಟುಕೊಂಡಿರುತ್ತಾರೆ. ಕಪ್ಪು, ಬಿಳುಪು ಮತ್ತು ಕೆಂಪು ಬಣ್ಣದ ಅನ್ನದ ತುತ್ತುಗಳನ್ನು ಮಾಡುವರು. ಒಂದು ವೀಳ್ಯದೆಲೆ, ಒಂದು ಮೆಣಸಿನ ಕಾಯಿ, ಒಂದಷ್ಟು ಉಪ್ಪು, ಒಂದೆರಡು ಪೊರಕೆಕಡ್ಡಿ ಇವುಗಳನ್ನು ಪ್ರತ್ಯೇಕವಾಗಿ ನೀವಳಿಸಿ ಮೂರು ಸಾರಿ ಉಗಿದು ತಟ್ಟೆಗೆ ಹಾಕುತ್ತಾರೆ. ಕೊನೆಯಲ್ಲಿ ತಟ್ಟೆಯಿಂದ ಒಂದು ಬಾರಿ ನೀವಳಿಸಿ ಉಗಿದು ತಟ್ಟೆಯೊಳಕ್ಕೆ ಹಾಕುತ್ತಾರೆ. ಕೊನೆಯಲ್ಲಿ ಎಡಗೈಯಿಂದ ಅರಿಶಿನ ನೀರನ್ನು ಹಣೆಗೆ ಅಚ್ಚುವರು. ಆ ತಟ್ಟೆಯನ್ನು ತೆಗೆದುಕೊಂಡು ಹೋಗಿ ಮೂರು ದಾರಿ ಕೂಡುವ  ಜಾಗದಲ್ಲಿ ಚೆಲ್ಲಿ ಬರುವರು.

'ಕಡವ ದಿಸ್ಟಿ (ಕೊಡದ ದೃಷ್ಟಿ ತಗೆಯುವುದು)
        ಈ ದೃಷ್ಟಿಯನ್ನು ಮಕ್ಕಳು ಮತ್ತು ಹಿರಿಯರಿಗೂ ತೆಗೆಯುತ್ತಾರೆ. ಮಕ್ಕಳು ಮತ್ತು ಹಿರಿಯರು ಸರಿಯಾಗ ಊಟ ಮಾಡದಿರುವುದು, ನಿತ್ರಾಣವಾಗಿರುವುದು ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರೆ ಈ ಕಾರ್ಯವನ್ನು ಮಾಡುತ್ತಾರೆ.
    ಗುರುವಾರ ಮತ್ತು ಆದಿವಾರದ ದಿನಗಳು ಶುಭ ದಿನಗಳೆಂಬ ನಂಬಿಕೆಯಿದೆ. ಆ ದಿನಗಳಲ್ಲಿ ಮನೆಯ ಮುಂದೆ ಒಂದಡಿಯಷ್ಟು ಜಾಗವನ್ನು ಸಾರಿಸಿ ರಂಗೋಲಿಡುವರು. ಆ ಜಾಗದಲ್ಲಿ ವೃತ್ತಾಕಾರವಾಗಿ ಸಗಣಿಯಿಂದ ಕಟ್ಟೆ ಕಟ್ಟುವರು. ಅದರ ಮಧ್ಯದಲ್ಲಿ ಒಂದು ಸಗಣಿಯ ಉಂಡೆಯನ್ನಿಡುವರು. ಅದರಲ್ಲಿ ಸಗಣಿಯ ನೀರನ್ನು ಹಾಕಿರುವರು. ಆ ಸಗಣಿಯ ಮುದ್ದೆಗೆ ಮೂರು ಕಡೆ ಅರಿಶಿನ ಕುಂಕುಮವನ್ನಿಟ್ಟಿರುವರು. ಅದರ ಮುಂದೆ ರೋಗಿಯನ್ನು ಪೂವರ್ಾಭಿಮುಖವಾಗಿ ಕೂರಿಸುವರು.
         ಒಂದು ಕೊಡಕ್ಕೆ ಕೆಮ್ಮಣ್ಣನ್ನು ಬಳಿದಿರುವರು. ಅದಕ್ಕೆ ಮಸಿ ಮತ್ತು ಸುದ್ದೆಯಿಂದ ಚುಕ್ಕೆಗಳನ್ನಿಡುವರು. ಮೂರು ಕಣ್ಣುಗಳಿರುವ ಮೂರು ತೆಂಗಿನ ಚಿಪ್ಪುಗಳಿಗೆ ಬೆಂಕಿ ಹೊತ್ತಿಸುವರು. ಅವನ್ನು ಎತ್ತಿಕೊಂಡು ಬಂದು ರೋಗಿಗೆ ಮತ್ತು ಸೂರ್ಯ-ಚಂದ್ರರರಿಗೆ ಮೂರು ಮೂರು ಸಾರಿ ನಿವಾಳಿಸುವರು. ಅವನೆತ್ತಿ ಆ ಸಗಣಿಯ ಮುದ್ದೆಯ ಮೇಲಿಡುವರು. ಬಣ್ಣದ ಕೊಡವನ್ನು ಮೂರು ಸಾರಿ ರೋಗಿಗೂ ಮತ್ತು ಮೂರು ಸಾರಿ ಸೂರ್ಯ-ಚಂದ್ರರರಿಗೂ ನಿವಾಳಿಸಿ ಸಗಣಿಯ ಮುದ್ದೆಯ ಮೇಲೆ ಬೋರಲಾಗಿ ಹಾಕುವರು. ಆಗ ಭೋರೆಂದು ಶಬ್ದ ಬರುತ್ತದೆ. ಸಗಣಿಯ ನೀರನ್ನೆಲ್ಲಾ ಎಳೆದುಕೊಳ್ಳಲು ಆರಂಭಿಸುತ್ತದೆ.
         ರೋಗಿಯು ಮೂರು ಸಾರಿ ಆ ಕೊಡವನ್ನು ದಾಡಿ ಹಿಂದಿರುಗಿ ನೋಡದಂತೆ ಮತ್ತೇ ಪೂರ್ವದ ಕಡೆಗೆ ಹೊರಟು ಹೋಗುತ್ತಾನೆ. ದಾರಿಯಲ್ಲಿ ಯಾರನ್ನಾದರೂ ಮಾತನಾಡಲೇ ಬೇಕು. ಆಗ ದೃಷ್ಟಿಯೂ ಹೊರಟು ಹೋಗುತ್ತದೆ ಅಥವಾ ವಗರ್ಾವಣೆಯಾಗುತ್ತದೆ ಎಂಬ ನಂಬಿಕೆ ಜನಪದರಲ್ಲಿ ಜನಜನಿತವಾಗಿದೆ.

ಪೊರಕೆ ಕಡ್ಡಿಗಳಿಂದ ದೃಷ್ಟಿ ತೆಗೆಯುವುದು.

         ಈ ಆಚರಣೆಯನ್ನು ವಿಶೇಷವಾಗಿ ಒಳ್ಳೆಯ ಕೈಗುಣವಿರುವ ಹಿರಿಯ ಹೆಂಗಸು ಮಾಡಬೇಕೆಂದು ಹೇಳುವರು. ವಿಪರೀತವಾದ ಆಕಲಿಕೆ, ವಾತೀ ಹೊಟ್ಟೆ ನೋವು ,ಕಣ್ಣುರಿ ಮುಂತಾದ ಲಕ್ಷಣಗಳಿರುವಾಗ ಈ ದೃಷ್ಟಿ ತೆಗೆಯುವ ಶಾಸ್ತ್ರವನ್ನು ಮಾಡುವರು.
         ಹಿರಿಯ ಹೆಂಗಸು ಒಂದು ಹಿಡಿಯಷ್ಟು ಪರಕೆ ಕಡ್ಡಿಗಳನ್ನು ತೆಗೆದುಕೊಳ್ಳುವಳು. ರೋಗಿಯೂ ಪೂವರ್ಾಭಿಮುಖವಾಗಿ ಕುಳಿತುಕೊಳ್ಳುವನು.  ಆ ಹೆಂಗಸು ಪೊರಕೆ ಕಡ್ಡಿಗಳನ್ನು ಮೂರು ಭಾಗ ಮಾಡುವಳು. ಒಂದು ಭಾಗವನ್ನು ಸೂರ್ಯ-ಚಂದ್ರರರಿಗೆ ಮೂರು ದಿಕ್ಕುಗಳಿಗೂ ನೀವಳಿಸಿ ರೋಗಿಗೆ ಒಂದು ಸಾರಿ ನೀವಳಿಸುವಳು. ಅವನ್ನು ತನ್ನ ಎಡಗಾಲಿನ ಕೆಳಗಿಟ್ಟುಕೊಳ್ಳುವಳು. ಹೀಗೆ ಮೂರು ಸಾರಿ ಮಾಡುವಳು. ನಂತರ ಮೂರು ಭಾಗವನ್ನು ಒಟ್ಟು ಮಾಡಿ ಮತ್ತೇ ಮೂರು ಸಾರಿ ನೀವಳಿಸುವಳು.
    ಪೊರಕೆ ಕಡ್ಡಿಗಳಿಗೆ ಬೆಂಕಿ ಕೊಡುವಳು. ಆ ಬೆಂಕಿಯಿಂದ ಉರಿಯುವ ಪೊರಕೆ ಕಟ್ಟನ್ನು ರೋಗಿಗೆ, ಸೂರ್ಯ-ಚಂದ್ರರರಿಗೆ ಮೂರು ಸಾರಿ ನೀವಳಿಸುವಳು.ಇರುಗು ದಿಸ್ಟಿ, ಪೊರುಗು ದಿಸ್ಟಿ ,ಅಂದರು ಕಣ್ಣುಲ ದಿಸ್ಟಿ ಪಾಡೈಪೋನಿ(ಅಕ್ಕ ಪಕ್ಕದವರ ದಿಸ್ಟಿ, ಎಲ್ಲರ ಕಣ್ಣುಗಳ ದೃಷ್ಟಿ ಹಾಳಾಗಿ ಹೋಗಲೀ)ಎಂದು ಹೇಳಿ, ಅದನ್ನು ಮನೆಯ ಯಾವುದಾದರೂ ಒಂದು ಮೂಲೆಗಿಟ್ಟು ತನ್ನೆರಡೂ ಕೈಗಳಿಂದ ನಟಿಕೆ ಮುರಿಯುವಳು. ಆ ಕಡ್ಡಿಗಳು ಮಾಡುವ ಶಬ್ದದ ಮೇಲೆ ದೃಷ್ಟಿಯ ತೀರ್ವತೆಯನ್ನು ನಿರ್ಧರಿಸುವರು.

ಅಡಿಗೆ ಪರಿಕರಗಳಿಂದ ದೃಷ್ಟಿ

   ಮನೆಯಲ್ಲಿರುವ ಹಿರಿಯ ಹೆಂಗಸು ಮನೆಯಲ್ಲಿರುವ ಹಿಟ್ಟುಗೋಲು. ಮಸೆಗೋಲು, ಸೊಟ್ಟಗೋಲು ಮತ್ತು ಮಡಿಕೆಯ ಕೆಳಗಿನ ಸಿಂಬೆಯನ್ನು ಒಟ್ಟಿಗೆ ತೆಗೆದುಕೊಂಡು ಸೂರ್ಯ-ಚಂದ್ರರರಿಗೆ ಮತ್ತು ರೋಗಿಗೆ ನಿವಾಳಿಸಿ ದೃಷ್ಟಿ ತೆಗೆಯುವ ಆಚರಣೆ ಜಾರಿಯಲ್ಲಿದೆ.
     ಆ ಭೂದಿಯನ್ನು ಎಡಗೈಯಲ್ಲಿ ತೆಗೆಕೊಂಡು ಬರುವಳು. ರೋಗಿಯೂ ಹೆಂಗಸಾಗಿದ್ದರೇ ಎಡಗಣ್ಣಿನ ಹುಬ್ಬು, ಎಡಗೈ, ಎಡಗಾಲಿಗೆ ಅಚ್ಚುವರು. ಗಂಡಸಾಗಿದ್ದರೇ ಬಲಗಣ್ಣಿನ ಹುಬ್ಬು, ಬಲಗೈ, ಬಲಗಾಲಿಗೆ ಅಚ್ಚವರು. ಅವರು ಕೂತ ಕಡೆಯೇ ಕೂತರೇ ದೃಷ್ಟಿ ಹೋಗುವುದಿಲ್ಲ. ಎದು ಹೋಗಿ ಯಾರನ್ನಾದರೂ ಮಾತನಾಡಿಸಿದರೇ, ದೃಷ್ಟಿಯೂ ಹೊರಟು ಹೋಗುವುದು ಎಂಬ ನಂಬಿಕೆ ಈ ಜನಪದರಲ್ಲಿದೆ.
                                                

ಕೂದಲು ದೃಷ್ಟಿ.

   ತಾಯಿ ಅಥವಾ ಹಿರಿಯ ಹೆಂಗಸು ಈ ಆಚರಣೆಯನ್ನು ಮಾಡುತ್ತಾಳೆ. ತನ್ನ ತೆಲೆಯ ಕೂದಳನ್ನು ತೆಗೆದು ಎಡಗೈಯಲ್ಲಿಡಿಯುವಳು. ಮಗುವಿಗೆ ಮತ್ತು ಸೂರ್ಯ-ಚಂದ್ರರರಿಗೆ ಮೂರು ಸಾರಿ ನಿವಾಳಿಸುವಳು. ಮಗುವಿಗೆ ಮೇಲಿನಿಂದ ಕೆಳಗೆ ನಿವಾಳಿಸುತ್ತಾ 'ತೂ, ತೂ,ತೂ' ಎಂದು ಶಬ್ದ ಮಾಡುತ್ತಾ ದೃಷ್ಟಿ ತೆಗೆಯುವಳು.
 ಸೀರೆಯ ಸೆರಿಗು
   ತಾಯಿ ಆಥವಾ ಹಿರಿಯ ಹೆಂಗಸು ತನ್ನ ಸೀರೆಯ ಸೆರಗನ್ನು ತೆಗೆಯುವಳು. ಅದನ್ನು ಎಡಗೈಯಲ್ಲಿಡಿದು ಅದನ್ನು ತಿರಿಗಿಸುತ್ತಾ ದೃಷ್ಟಿ ತೆಗೆಯುವಳು. ಇದೂ ಕೂಡಾ ಸೂರ್ಯ ಚಂದ್ರಾದಿಯಾಗಿ ದಿಕ್ಕುಗಳಿಗೆ ನಿವಾಳಿಸಿ ನಂತರ ಮಗುವಿಗೆ ನಿವಾಳಿಸಿ ತೆಗೆಯುವ ದೃಷ್ಟಿಯಾಗಿದೆ.
                                       

 ಉಪ್ಪಿನ ದೃಷ್ಟಿ

   ಕೆಲವರು ಹಿರಿಯರು ದೃಷ್ಟಿ ತೆಗೆಯಲು ಉಪ್ಪನ್ನು ಮಂತ್ರಿಸಿ ಕೊಡುವರು. ಅವರು ಉಪ್ಪನ್ನು ಅಂಗೈಯಲ್ಲಿಟ್ಟುಕೊಂಡು ಮಂತ್ರಗಳನ್ನು ಗುಣುಗುವರು. ಆ ಗುಣುಗುವ ಸಂದರ್ಭದಲ್ಲಿ ವಿಪರೀತವಾದ ಆಕಳಿಕೆಗಳು ಅವರಿಗೆ ಬರುತ್ತವೆ. ನಂತರ ಮಂತ್ರಿಸಿದ ನಂತರ ಉಪ್ಪನ್ನು ರೋಗಿಗೆ ನೀಡುವರು. ರೋಗಿಯು ಆ ಉಪ್ಪಿನ ಎರಡು ಕಲ್ಲುಗಳನ್ನು ಬಾಯಿಗೆ ಹಾಕಿಕೊಳ್ಳುವನು.  ಮಂತ್ರಿಸಿದ ಸಮಯದಲ್ಲೇ ಎಲ್ಲಾ ದೃಷ್ಟಿಯನ್ನು ಆತನು ಆವಾನಿಸಿರುತ್ತಾನೆಂಬ ನಂಬಿಕೆ ಈ ಜನರಲ್ಲಿದೆ.
   ಉಪ್ಪಿನಿಂದ ದೃಷ್ಟಿ ತೆಗೆಯುವುದರಲ್ಲಿ ಬೇರೆ ಬೇರೆ ಪ್ರಕಾರಗಳಿವೆ. ಮತ್ತು ಪ್ರಾದೇಶಿಕ ಭಿನ್ನತೆಯನ್ನು ಪಡೆದಿವೆ. ತಾಯಿ ಅಥವಾ ಹಿರಿಯ ಹೆಂಗಸು ನಾಲ್ಕು ಉಪ್ಪಿನ ಕಲ್ಲುಗಳನ್ನು ತೆಗೆದುಕೊಳ್ಳುವಳು. ಅದನ್ನು ಮಗುವಿಗೆ, ಸೂರ್ಯ-ಚಂದ್ರರಿಗೆ ನಿವಾಳಿಸಿ ಬೆಂಕಿಯ ಒಲೆಗೆ ಹಾಕುವುದುಂಟು. ಅದು ಚಿಟಗುಟ್ಟುವುದರ ಮೇಲೆ ದೃಷ್ಟಿ ತೀವ್ರತೆಯನ್ನು ನಿಧರ್ಾರ ಮಾಡುತ್ತಿದ್ದರು. ನಾಲ್ಕು ಉಪ್ಪಿನ ಕಲ್ಲುಗಳನ್ನು ಮಗುವಿಗೆ, ಸೂರ್ಯ-ಚಂದ್ರರಿಗೆ ನಿವಾಳಿಸಿ ಅದನ್ನು ತುಂಬಿದ ನೀರಿನ ಕೊಡಕ್ಕೆ ಹಾಕುತ್ತಾರೆ. ತಾಯಿ ಅಥವಾ ಮನೆಯ ಹಿರಿಯ ಹೆಂಗಸು ಉಪ್ಪು. ಈರುಳ್ಳಿ ಮೆಣಸಿನಕಾಯಿಯನ್ನು ಕೈಯಲ್ಲಿಡಿದು ಮಗುವಿಗೆ ನಿವಾಳಿಸಿ ಅದನ್ನು ಮೂರು ದಾರಿ ಕೂಡುವ ಜಾಗದಲ್ಲಿ ಬಿಸಾಕಿ ಬರುವುದನ್ನು ಮಾಡುವರು.
                                   

 ಚೆಂಬುದಿಷ್ಟಿ (ತಂಬಿಗೆ ದೃಷ್ಟಿ)

   ಇದನ್ನು 'ಪಾಟದ್ಯಾವರ' ಎಂದು ಕರೆಯುವರು. ಚಿಕ್ಕ ಮಕ್ಕಳಿಗೆ ವಿಪರೀತವಾದ ವಾಂತಿ ಬೇದಿ ಆಗುತ್ತಿದ್ದರೆ, ಮಗುವು ಎಲ್ಲಾದರೂ ಬಿದ್ದಿದ್ದರೇ ಈ ಆಚರಣೆ ಮಾಡುತ್ತಾರೆ. ಗುರುವಾರ ಅಥವಾ ಆದಿವಾರ(ಭಾನುವಾರ) ವಿಶೇಷವಾದ ದಿನಗಳೆಂದು ಭಾವಿಸುತ್ತಾರೆ. ಆ ದಿನಗಳಂದು ಮನೆಯ ಮುಂದೆ ಒಂದು ಅಡಿಯಷ್ಟು ಜಾಗದಲ್ಲಿ ವೃತ್ತಾಕಾರವಾಗಿ ಅಥವಾ ಚೌಕಾಕಾರವಾಗಿ ಸಗಣಿಯಿಂದ ಸಾರಿಸುವರು. ರಂಗೋಲಿ ಹಾಕುವರು. ಎಕ್ಕೆಗಿಡದ(ಜಿಲ್ಲಿಡಾಕು) ಮೂರು ಎಲೆಗಳನ್ನು ತರುವರು. ಅವುಗಳನ್ನು ಸಾರಿಸಿದ ಜಾಗದಲ್ಲಿಟ್ಟು ಅರಿಶಿನ ಕುಂಕುಮವನ್ನು ಮೂರು ಕಡೆಯಿಡುವರು. ಒಂದು ತಂಬಿಗೆಯ ತುಂಬಾ ನೀರನ್ನು ತೆಗೆದುಕೊಳ್ಳುವರು. ಅದಕ್ಕೆ ಅರಿಶಿನ ಮತ್ತು ಕುಂಕುಮವನ್ನು ಹಾಕುವರು. ಮೂರು ಕಡೆ ಅರಿಶಿ ಕುಂಕುಮವನ್ನಿಡುವರು. ಮಗುವಿಗೆ ಆ ತಂಬಿಗೆಯನ್ನು ನಿವಾಳಿಸಿ ಆ ಎಕ್ಕೇ ಎಲೆಯ ಮೇಲೆ ಬೋರಳಾಗಿ ಹಾಕುವರು. ನಂತರ ಮಗುವನ್ನು ಮೂರು ಸಾರಿ ಆ ತಂಬಿಗೆಯ ಮೇಲೆ ದಾಟಿಸಿ ಮನೆಯ ಒಳಗೆ ತೆಗೆದುಕೊಂಡು ಹೋಗುವರು.
  ಮರುದಿವಸದ ತನಕ ಅದನ್ನು ತೆಗೆಯುವುದಿಲ್ಲ. ಈ ಆಚರಣೆಯನ್ನು ಮಾಡಿದರೆ ವಾಂತಿಬೇದಿ ನಿಂತು ಹೋಗುತ್ತದೆ. ಮಗು ಗುಣ ಮುಖವಾಗುತ್ತದೆ ಎಂಬ ನಂಬಿಕೆಯಿದೆ.
                                                 


 ಎರನೀಳ್ಳು ದಿಸ್ಟಿ (ಕೆನ್ನೀರು ದೃಷ್ಟಿ)

   'ಎರನೀಳ್ಳ ದಿಸ್ಟಿ'ಯನ್ನು ವಿಭಿನ್ನ ರೀತಿಯಲ್ಲಿ ತೆಗೆಯುತ್ತಾರೆ. ಅಲ್ಲದೆ ಪ್ರಾದೇಶಿಕ ವೈವಿಧ್ಯತೆಯೂ ಕೂಡಾ ಪಡೆದಿದೆ. ಅವುಳನ್ನು ಮುಂದೆ ನೀಡಿದೆ.
    ಮಗುವಿಗೆ ತಲೆಸ್ನಾನ ಮಾಡಿಸಿದ ದಿವಸ ಈ ಆಚರಣೆ ಮಾಡುತ್ತಾರೆ. ಒಂದು ಸೌಟಿನಲ್ಲಿ ಬೆಂಕಿಯ ಕೆಂಡಗಳನ್ನು ಹಾಕಿ, ಮಗುವಿಗೆ ಸಾಂಬ್ರಾಣಿ ಹೊಗೆಯನ್ನು ಹಾಕುವರು. ಹಾಗೆಯೇ ಒಂದು ತಟ್ಟೆಯಲ್ಲಿ 'ಎರನೀಳ್ಳು'(ಕೆಂಪುನೀರು) ಮಾಡುವರು. ಆ ಬೆಂಕಿಯ ಕೆಂಡಗಳನ್ನು ಆ ಕೆಂಪುನೀರಿಗೆ ಹಾಕುವರು. ಅದನ್ನು ಸೂರ್ಯ-ಚಂದ್ರ ಮತ್ತು ಮಗುವಿಗೆ ನಿವಾಳಿಸುವರು. ಆ ತಟ್ಟೆಯನ್ನೆತ್ತಿ ತೊಟ್ಟಿಲ ಕೆಳಗಡೆಯಿಡುವರು. ಗೋಧೂಳಿ ಹೊತ್ತಿನಲ್ಲಿ ಆ ತಟ್ಟೆಯನ್ನು ತೆಗೆದುಕೊಂಡು ಹೋಗಿ ದಾರಿಗೆ ಅಡ್ಡವಾಗಿ ಸುರಿದು ಬರುವರು. ಅಂದರೆ ಮಗುವಿನ ದೃಷ್ಟಿ ಗೋಧೂಳಿನಲ್ಲಿ ಹೊರಟು ಹೋಗಲಿ ಎಂಬ ಉದ್ದೇಶವಿರಬಹುದು.
  ಮಕ್ಕಳಿಗೆ ಒಂದೊಂದು ದಿವಸ ಒಂದೊಂದು ಬಣ್ಣದ ದಿಸ್ಟಿಯ ನೀರನ್ನು ತೆಗೆದು ಚೆಲ್ಲವರು. ತಲೆಗೆ ಸ್ನಾನ ಮಾಡಿದ ದಿವಸ ಕೆಂಪುನೀರು ತೆಗೆಯುವರು. ಮತ್ತೊಂದು ದಿವಸ ಬೂದಿಯ ನೀರನ್ನು ಮಗುವಿಗೆ ಮತ್ತುಸೂರ್ಯ-ಚಂದ್ರರರಿಗೆ ನಿವಾಳಿಸಿ ಅದನ್ನು ತೊಟ್ಟಿಲ ಕೆಳಗಿಟ್ಟಿರುವರು. ಪ್ರಾಣಿ-ಪಕ್ಷಿಗಳು ಮತ್ತು ಗೋವುಗಳು ವಾಪಸ್ಸಾಗುವ ಸಮಯದಲ್ಲಿ ಅದನ್ನು ಊರು ಬಾಗಿಲಿಗೆ ಅಡ್ಡವಾಗಿ ಸುರಿದು ಬರುವರು.
                                             
  ಮಕ್ಕಳು ಭಯಪಟ್ಟಿದ್ದರೂ ಕೆಂಪುನೀರಿನಲ್ಲಿ ದೃಷ್ಟಿ ತೆಗೆಯುವರು. ನೀರಿಗೆ ಅರಿಶಿನ ಮತ್ತು ಸುಣ್ಣ ಹಾಕಿ ಮಿಶ್ರಣ ಮಾಡುವರು. ಈ ನೀರನ್ನು ಮಗುವಿಗೆ ಮತ್ತು ಸೂರ್ಯ-ಚಂದ್ರರರಿಗೆ ನಿವಾಳಿಸುವರು. ಆ ನೀರನ್ನು ಬೆರಳುಗಳಲ್ಲಿ ತೆಗೆದುಕೊಂಡು ಮಗುವಿನ ಮುಖಕ್ಕೆ ಭಯಪಡುವ ರೀತಿಯಲ್ಲಿ ಮೂರು ಸಾರಿ ಚಿಮುಕಿಸುವರು. ನಂತರ ಅದನ್ನು ತೆಗೆದುಕೊಂಡು ಹೋಗಿ ಮೂರು ದಾರಿ ಕೂಡುವ ಜಾಗದಲ್ಲಿ ಅಡ್ಡವಾಗಿ ಸುರಿದು ಬರುವರು ಅಥವಾ ಹಸಿರು ಗಿಡದ ಮೇಲೆ ಸುರುದು ಬರುವರ.

'ದಾಟು' ತೆಗೆಯುವುದು.

    'ದಾಟು'ತೆಯುವುದು ಕೂಡಾ ವೈವಿಧ್ಯತೆಯಿಂದ ಕೂಡಿದೆ. ಅಲ್ಲದೆ ಪ್ರಾದೇಶಿಕ ಭಿನ್ನತೆಯಿಂದ ಕೂಡಿದೆ. ಅವುಗಳ ಸ್ವರೂಪವೂ ಈ ಕೆಳಗಿನಂತಿವೆ.
ಎಮ್ಕೆ ದಾಟು (ಮೂಳೆ ದಾಟು)
    ವ್ಯಕ್ತಿಗೆ ಕೈಕಾಲು ನೋವು. ಜ್ವರ, ವಾಂತಿ, ಪ್ರಾಣಕ್ಕೆ  ಆಯಾಸ, ಭಯವಾಗುವುದು, ಸುಸ್ತಾಗುವುದು ಮುಂತಾದ ಅಸ್ವಸ್ಥತೆಗಳಿದ್ದಾಗ ನಾಟಿವೈದ್ಯರನ್ನು ಕಾಣುತ್ತಾರೆ. ಅವನು 'ದಾಟ'ನ್ನು ತೆಗೆಯಲು ಹೇಳುತ್ತಾನೆ.
    ಗುರುವಾರ ಅಥವಾ ಆದಿವಾರದ ಸಂಜೆ ಇದನ್ನು ಮಾಡುವರು. ಅಂದು ಊರಲ್ಲಿ ಹುಡುಕಾಡಿ ಮೂರು 'ಗೊಡ್ಡೆಮಕ'(ಹಸು ಅಥವಾ ಎತ್ತಿನ ಮೂಳೆ)ಗಳನ್ನು ತರುವರು. ಅವನ್ನು ಚೆನ್ನಾಗಿ ತೊಳೆದು ಅವುಗಳಿಗೆ 'ಪೋಗುದಾರ'(ಅರಿಶಿನದ ದಾರ)ವನ್ನು ಕಟ್ಟುವರು. ಅವನ್ನು ಬಾಗಿಲಾಚೆಯೇ ಇಟ್ಟಿರುವರು. 'ಅಮದನ'್ನವನ್ನು ಮಾಡಿಸುವರು. ತೆಂಗಿನಕಾಯಿ, ಎಲೆ ಅಡಿಕೆ, ಮೂರು ಪ್ರಕಾರದ 'ಗಿಂಜಲು'(ಬುರುಗಿ,ಕಳ್ಳೆಬೀಜ,ಕಡಲೆಪಪ್ಪು)ಭತ್ತದ ಹುಲ್ಲು ಮತ್ತು ಬೇವಿನ ಸೊಪ್ಪುನ್ನು ತಯಾರಿ ಮಾಡಿಟ್ಟಿರುವರು. 'ಮೂಡು ಸಂದುಲು ಗುಂಕೇ ಸಮಯ'(ಹೊತ್ತು ಮುಳುಗುತ್ತಿರುವ ವೇಳೆ)ದಲ್ಲಿ ವೈದ್ಯರು ಇವುಗಳೆವನ್ನೂ ರೋಗಿಯನ್ನು ಮೂರು ದಾರಿಗಳು ಕೂಡುವ ಜಾಗಕ್ಕೆ ಕರೆ ತರುವರು.

                                                    
    ಎಡೆಯನ್ನು ಹಾಕಿ, ಅದರಲ್ಲಿ ಮೂಳೆಗಳನ್ನಿಟ್ಟು, ಕಾಣಿಕೆಯನ್ನಿಟ್ಟು ಬುರಗಿಯನ್ನು ಅದರ ಮೇಲೆ ಚೆಲ್ಲಿ, ಬೇವಿನ ಸೊಪ್ಪಿನಿಂದ ವೈದ್ಯ ಮಂತ್ರ ಹಾಕುವನು. ಹುಲ್ಲಿಗೆ ಬೆಂಕಿ ತಾಕಿಸಿ ಆ ಎಡೆಯನ್ನು ಮೂರು ಸಾರಿ ದಾಟಿಸುವನು. ನಂತರ ಹಿಂದುರುಗಿ ನೋಡದಂತೆ ರೋಗಿಯೂ ಮನೆಗೆ ಬರುವನು.
   ಕೆಲವು ಸಮಯದಲ್ಲಿ ಈ 'ದಾಟು' ತೆಗೆಯುವುದು ವೈದ್ಯನಿಲ್ಲದೆಯೂ ಹಿರಿಯ ಅನುಭವವುಳ್ಳವರು ಮಾಡಿಸಬಹದೆಂದು ಹೇಳುತ್ತಾರೆ.

'ದಾಟು ಕುರು' ಮತ್ತು 'ಕೈಕಾಲು ನೋವಿನ' ದಾಟು





   ಕೈಕಾಲು ನೋವು, ಜ್ವರ, ವಾಂತಿಯಿಂದ ಅಸ್ವಸ್ಥನಾಗಿ ಕ್ಷಯವಾಗುತ್ತಿದ್ದರೆ 'ದಾಟು' ತೆಗೆಯುವ ಆಚರಣೆಯನ್ನು ಮಾಡುವರು. ಆದರೆ ಇದನ್ನು ಹಿರಿಯ ಅನುಭವವುಳ್ಳವರೇ ಮಾಡಿಸುತ್ತಾರೆ.
   ಆದಿವಾರ ಅಥವಾ ಗುರುವಾರದ ದಿನಗಳಲ್ಲಿ ಮಾಡುವ ಆಚರಣೆಯಾಗಿದೆ. ಆ ದಿನ ಮುಂಜಾನೆ, ಯಾರ ಮುಖವನ್ನೂ ನೋಡದೆ, ಮೂರು ಹಿಡಿಯಷ್ಟು ರಾಗಿ ಹಿಟ್ಟು, ಎಲೆ ಅಡಿಕೆ, ಮೆಣಸಿಕಾಯಿ, ಉಪ್ಪು ಮತ್ತು ರೂಕ(ಕಾಸು)-ಇವೆಲ್ಲವನ್ನೂ ತೆಗೆದುಕೊಂಡು ಮೂರು ದಾರಿ ಕೂಡುವ ಜಾಗಕ್ಕೆ ಹೋಗುತ್ತಾರೆ. ಅಲ್ಲಿ ರಾಗಿ ಹಿಟ್ಟಿಂದ ಮೂರು ಗೆರೆಗಳನ್ನು ಹಾಕುತ್ತಾರೆ. ಅದರ ಮೇಲೆ ಎಲೆ ಅಡಿಕೆ, ಅದರ ಮೇಲೆ ಕಾಸನ್ನಿಡುತ್ತಾರೆ. ಮೂರು ಸಾರಿ ಆ ಗೆರೆಗಳನ್ನು ದಾಟಿಕೊಂಡು ಹಿಂದಿರುಗಿ ನೋಡದಂತೆ ಮನೆಗೆ ಬರುತ್ತಾರೆ.
                                              
                                                                                            ಈ ಗೆರೆಗಳನ್ನು ದಾಟಿದವರಿಗೆ ರೋಗವು ಅಂಟಿಕೊಳ್ಳುವುದು ಎಂದು ನಂಬುತ್ತಾರೆ. ಅದರಿಂದಲೇ ದಾಟು ತೆಗೆದಿರುವ ಗೆರೆಗಳನ್ನು ಯಾರು ದಾಟಿ ಹೋಗುವ ಸಾಹಸವನ್ನು ಮಾಡುವುದಿಲ್ಲ. ಬದಲಿಗೆ ಅಲ್ಲಿ ಉಗಿದು, ನೆಟಿಕೆ ಮುರಿದು ಅದನ್ನು ಸುತ್ತಿಬಳಸಿ ಹೋಗುತ್ತಾರೆ. ಈ ಆಚರಣೆಯೂ ಗ್ರಾಮೀಣ ಪ್ರದೇಶದ ಈ ಜನರಲ್ಲಿ ಜೀವಂತವಾಗಿದೆ.
                                            
                                                      ಜಿ.ಶ್ರೀನಿವಾಸಯ್ಯ
 
       ರಾತ್ರಿಯ ವೇಳೆ ರಾಗಿ ಮುದ್ದೆ ತೊಳೆಸುವ ಸಮಯದಲ್ಲಿ ಮತ್ತು ಊಟ ಸಮಯದಲ್ಲಿ ಮಾಡುವ ಆಚರಣೆಯಿದು. ಈ ಆಚರಣೆ ಮಾಡುವ ಸಮಯದಲ್ಲಿ ವ್ಯಕ್ತಿ ಪೂರ್ವ ದಿಕ್ಕಿಗೆ ಮುಖ ಮಾಡಿರಬೇಕು. ಎಡಗಡೆಗೆ ತೊಳೆಸಿದಾಗ ಒಂದು ತುತ್ತು, ಬಲಗಡೆಗೆ ತೊಳೆಸಿದಾಗ ಒಂದು ತುತ್ತು ಮತ್ತು ತಿರಿಗಿಸಿ ಕಳಕಿದಾಗ ಒಂದು ತುತ್ತು- ಹೀಗೆ ಮೂರು ತುತ್ತುಗಳನ್ನು ತೆಗೆದುಕೊಂಡು ಚಿಟ್ಟೆ(ದೀಪಾಂತಿ) ಮಾಡುವರು. ಅದರಲ್ಲಿ ಎಣ್ಣೆಯನ್ನು ಹಾಕಿ ಬತ್ತಿ ಅಂಟಿಸುವರು. ಮಗುವಿಗೆ ಮೂರು ಸಾರಿ ನೀವಳಿಸುವರು. ಈ ಮೂರು ಸಾರಿಯೂ 'ತುಪಕ್ ತುಪಕ್'ಎಂದು ಆ ದೀಪವನ್ನು ಮತ್ತು ಚಿಟ್ಟೆಯನ್ನು ಉಗಿಯುವರು ಅಲ್ಲದೆ ಕೈ ಬೆರಳುಗಳಿಂದ ನೆಟಿಕೆ ಮುರಿದು ಅದನ್ನು ತೆಗೆದುಕೊಂಡು ಹೋಗಿ ಎಕ್ಕೆಗಿಡದ ಕೆಳಗಡೆ ಮಡಗಿ, ಮೂರು ಸಾರಿ ಉಗಿದು ಹಿಂತಿರುಗಿ ನೋಡದೆ ಬರುವರು.
     ಹೀಗೆ ಮಾಡಿದರೆ ಊಟ ಮಾಡುವ ಸಂದರ್ಭದಲ್ಲಿ ಆಗಿರುವ ದೃಷ್ಟಿ ನಿವಾರಣೆಯಾಗುವುದೆಂದು ಪ್ರಬಲವಾಗಿ ನಂಬುತ್ತಾರೆ.
    ಊಟದ ತಟ್ಟೆಯನ್ನು ಮುಂದಿಟ್ಟುಕೊಂಡು ಮುದ್ದೆಯನ್ನೊ ಅಥವಾ ಅನ್ನವನ್ನೋ ನಿವಾಳಿಸಿ ಪಕ್ಕಿಡುವುದು ಈ ಆಚರಣೆಯ ಲಕ್ಷಣ. ಅಂದರೆ ಒಂದು ತುತ್ತನ್ನು ತೆಗೆದುಕೊಂಡು ಮುಖದಿಂದ ಮೂರು ಸಾರಿ ಉಗುಳುತ್ತಾ ನಿವಾಳಿಸಿ ಪಕ್ಕಕ್ಕಿಡುವರು ಅಥವಾ ನಾಯಿಗೆ ಹಾಕುವರು. ಹೀಗೆಯೇ ಮೂರು ಸಾರಿ ಮಾಡಿ ನಂತರ ಊಟ ಮಾಡುವರು. ಇದರಿಂದ ಕೂಟಿದಿಸ್ಟಿ ನಿವಾರಣೆಯಾಗುವುದೆಂದು ನಂಬಿಕೆಯಿದೆ.

ಕೋಲಾರ ಜಿಲ್ಲಾ ದರ್ಶನ

                                                                      
            ತನ್ನೊಡಲ ಬಗೆಸಿಕೊಂಡು ಪ್ರಪಂಚಕ್ಕೇ ಬಂಗಾರ ಕೊಟ್ಟ ಈ ಕಂದೆಲುಗು ನೆಲದೊಡಲು ಇಂದು ಬರಿದಾಗಿದ್ದರೂ ಕನರ್ಾಟಕ ಸಾಂಸ್ಕೃತಿಕ ಇತಿಹಾಸಕ್ಕೆ ನೀಡುವ ಕೊಡುಗೆಯಲ್ಲಿ ಸಿರಿವಂತಿಕೆಯನ್ನೇ ಮರೆದಿದೆ. ಭೌಗೋಳಿಕ ವೈವಿಧ್ಯತೆಯ ಈ ನೆಲದೊಡಲಲ್ಲಿ ಹಲವಾರು ಗಿರಿಶಿಖರಗಳು, ನದ-ನದಿಗಳು, ಸಾವಿರಾರು ಕೆರೆ-ಕುಂಟೆಗಳು, ಕಟ್ಟೆ-ಕಾಲುವೆಗಳು, ಪ್ರಾಚೀನ-ಆವರ್ಾಚೀನ ಗತವೈಭವವನ್ನು ಸಾರುವ ಸಾವಿರಾರು  ದೇಗುಲ-ಮಠಗಳು, ವಿವಿಧ ರಾಜಸಂತತಿಗಳು ಕೆತ್ತಿಸಿದ ಹತ್ತು ಹಲವು ಶಿಲಾಶಾಸನಗಳು, ಆದಿ ಮಾನವನ ಬದುಕಿನ ಹಲವು ಮಜಲುಗಳನ್ನು ಅರಿಯಲು ನೆರವಾಗುವ ಹತ್ತಾರು ಸ್ಥಳ ವಿಶೇಷಗಳು- ಹೀಗೆ ವಿಭಿನ್ನ ಆಯಾಮಗಳು ಜಿಲ್ಲೆಯ ರಾಜಕೀಯ, ಸಾಮಾಜಿಕ, ಆಥರ್ಿಕ ಹಾಗೂ ಸಾಂಸ್ಕೃತಿಕ ಗತ ವೈಭವವನ್ನು ಬಿಂಭಿಸಿವೆ.
           ಕೋಲಾರ ಜಿಲ್ಲೆಯು ತನ್ನದೆ ಪೌರಾಣಿಕ ಹಿನ್ನೆಲೆಯನ್ನು ಪಡೆದಿದೆ. ಅದು ರಾಮಾಯಣ ಮತ್ತು ಮಹಾಭಾರತದಷ್ಟು ಪ್ರಾಚೀನತೆಯನ್ನು ಪಡೆದಿದೆ.ಇದನ್ನು ಪುಷ್ಠೀಕರಿಸುವ ಹತ್ತಾರು ಸ್ಥಳಪುರಾಣಗಳು ಹಾಗೂ ಐತಿಹ್ಯಗಳು ಉಪಲಬ್ಧವಾಗುತ್ತವೆ.
ಸ್ಥಳ ನಿದರ್ೇಶನ ಮತ್ತು ಮೇರೆಗಳು   ಪಶ್ಚಿಮದಲ್ಲಿ ಬೆಂಗಳೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು, ಉತ್ತರ ಮತ್ತು ಪೂರ್ವದಲ್ಲಿ ಅನುಕ್ರಮವಾಗಿ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಗಳು, ದಕ್ಷಿಣದಲ್ಲಿ ತಮಿಳುನಾಡಿನ ಉತ್ತರ ಆಕರ್ಾಟ್ ಮತ್ತು ಧರ್ಮಪುರಿ ಜಿಲ್ಲೆಗಳು  ಇವು ಕೋಲಾರ ಜಿಲ್ಲೆಯ ಮೇರೆಗಳು. ಜಿಲ್ಲೆಯಲ್ಲಿ ಕೋಲಾರ, ಶ್ರೀನಿವಾಸಪುರ, ಮುಳಬಾಗಿಲು, ಬಂಗಾರಪೇಟೆ ಮತ್ತು ಮಾಲೂರು ತಾಲ್ಲೂಕುಗಳು ಇವೆ. ಒಟ್ಟು ವಿಸ್ತೀರ್ಣ 3923.3 ಚ.ಕಿ.ಮೀಟರುಗಳು.

ಜಲಸಂಪನ್ಮೂಲಗಳು            ಕೋಲಾರ ಜಿಲ್ಲೆಯಲ್ಲಿ ಸರ್ವಋತು ನದಿಗಳು ಯಾವುವೂ ಇಲ್ಲ. ಬಹುತೇಕ ನದಿಗಳು ಸಣ್ಣವು. ಮಳೆಗಾಲದಲ್ಲಿ ಮಾತ್ರ ಇವುಗಳಲ್ಲಿ ಪ್ರವಾಹ. ಪಾಲಾರ್ ಮತ್ತು ಉತ್ತರಪಿನಾಕಿನಿ (ಉತ್ತರ ಪೆನ್ನಾರ್) ಇವು ಮುಖ್ಯನದಿಗಳು. ಇವೂ ಹಲವು ಸಣ್ಣ ನದಿಗಳೂ ಜಿಲ್ಲೆಯಲ್ಲಿ ಹುಟ್ಟಿ ವಿವಿಧ ದಿಕ್ಕುಗಳಲ್ಲಿ ಹರಿಯುತ್ತವೆ. ಪಾಲಾರ್ ನದಿ ಮೊದಲು ಕಾಣಿಸಿಕೊಳ್ಳುವುದು ಕೈವಾರದ ದಕ್ಷಿಣಕ್ಕಿರುವ ಗೌತಮ ಗುಡ್ಡದಲ್ಲಿ. ಅಲ್ಲಿಂದ ಜಂಗಮಕೋಟೆಯವರೆಗೆ ಪೂವರ್ಾಬಿಮುಖವಾಗಿ, ಮುಂದೆ ದಕ್ಷಿಣ ಮತ್ತು ಆಗ್ನೇಯಾಬಿಮುಖವಾಗಿ ಹರಿದು, ಬಂಗಾರಪೇಟೆಯನ್ನು ಹಾದು, ಜಿಲ್ಲೆಯನ್ನು ಬಿಡುತ್ತದೆ. ಉಗಮಸ್ಥಳದಿಂದ ಜಿಲ್ಲೆಯನ್ನು ಬಿಡುವಲ್ಲಿಯ ವರೆಗೆ ಇದರ ಉದ್ದ 108ಕಿಮೀ ಉತ್ತರಪಿನಾಕಿನಿ ಚೆನ್ನಕೇಶವ ಬೆಟ್ಟದಲ್ಲಿ ಹುಟ್ಟಿ ವಾಯವ್ಯ ದಿಕ್ಕಿನಲ್ಲಿ ಹರಿದು, ಮಂಚೇನಹಳ್ಳಿ ಮತ್ತು ಗೌರಿಬಿದನೂರುಗಳ ಬಳಿಯಲ್ಲಿ ಸಾಗಿ ಅನಂತಪುರ ಜಿಲ್ಲೆಯ ಹಿಂದೂಪುರ ತಾಲ್ಲೂಕನ್ನು ಪ್ರವೇಶಿಸುತ್ತದೆ. ಜಿಲ್ಲೆಯಲ್ಲಿ ಈ ನದಿಯ ಉದ್ದ 55ಕಿಮೀ. ನಂದಿಬೆಟ್ಟದ ಬಳಿ ಹುಟ್ಟಿ ದಕ್ಷಿಣಕ್ಕೆ ಪ್ರವಹಿಸುವ ದಕ್ಷಿಣಪಿನಾಕಿನಿ ಕೋಲಾರ ಜಿಲ್ಲೆಯಲ್ಲಿ ಸ್ವಲ್ಪ ದೂರ ಮಾತ್ರ ಹರಿಯುತ್ತದೆ. ಜಿಲ್ಲೆಯ ಇನ್ನೊಂದು ಮುಖ್ಯ ನದಿ ಪಾಪಘ್ನಿ. ಚಿಕ್ಕಬಳ್ಳಾಪುರದ ಬಳಿಯ ಬೆಟ್ಟದಲ್ಲಿ ಇದರ ಉಗಮ. ಇದು ಈಶಾನ್ಯ ದಿಕ್ಕಿನಲ್ಲಿ ಬಾಗೇಪಲ್ಲಿ ತಾಲ್ಲೂಕಿನ ಮೂಲಕ ಹರಿದು, ಚಿತ್ತೂರು ಜಿಲ್ಲೆಯ ಮದನಪಲ್ಲಿ ತಾಲ್ಲೂಕನ್ನು ಪ್ರವೇಶಿಸುತ್ತದೆ. ಜಿಲ್ಲೆಯಲ್ಲಿ ಈ ನದಿಯ ಉದ್ದ 68ಕಿಮೀ. ಚಿತ್ರಾವತಿ ಇನ್ನೊಂದು ನದಿ. ನಂದಿ ಬೆಟ್ಟಕ್ಕೆ ಉತ್ತರದಲ್ಲಿ 14ಕಿಮೀ ದೂರದಲ್ಲಿ ಹುಟ್ಟಿ ಈಶಾನ್ಯಾಬಿಮುಖವಾಗಿ ಹರಿದು ಹಿಂದೂಪುರವನ್ನು ಪ್ರವೇಶಿಸುತ್ತದೆ. ಇದು ಉತ್ತರ ಪಿನಾಕಿನಿಯ ಒಂದು ಉಪನದಿ. ಜಿಲ್ಲೆಯಲ್ಲಿ ಇದರ ಹರಿವು 48ಕಿಮೀ. ಇದರ ಜಲಾನಯನ ಪ್ರದೇಶ 538ಚ.ಕಿಮೀ. ಇಲ್ಲಿ 206 ಕೆರೆಗಳಿವೆ. ನಂಗ್ಲಿಹೊಳೆ ಮುಳಬಾಗಿಲಬಳಿಯ ಕುರುಡುಮಲೆಯಲ್ಲಿ ಹುಟ್ಟಿ ಪೂವರ್ಾಬಿಮುಖವಾಗಿ ಹರಿದು ಜಿಲ್ಲೆಯನ್ನು ದಾಟಿ ಹೋಗುತ್ತದೆ. ಇದು ಕೌಂಡಿನ್ಯ ನದಿಯ ಉಪನದಿ. ಕುಮುದ್ವತಿ ನದಿ ಉತ್ತರ ಪಿನಾಕಿನಿಯ ಉಪನದಿ. ಜಿಲ್ಲೆಯಲ್ಲಿ ಇದರ ಉದ್ದ 29ಕಿಮೀ. ಇದು ಮಾಕಳಿದುರ್ಗಕ್ಕೆ ಪಶ್ಚಿಮದಲ್ಲಿ ಉಜನಿ ಬೆಟ್ಟದಲ್ಲಿ ಹುಟ್ಟಿ ಉತ್ತರಕ್ಕೆ ಹರಿದು ಗೌರಿಬಿದನೂರು ತಾಲ್ಲೂಕಿನಲ್ಲಿ ಸಾಗಿ ಜಿಲ್ಲೆಯ ಎಲ್ಲೆಯನ್ನು ದಾಟುತ್ತದೆ. ಕುಶಾವತಿ ಎಂಬ ಹೆಸರಿನ ಎರಡು ಹೊಳೆಗಳು ಈ ಜಿಲ್ಲೆಯಲ್ಲುಂಟು. ಒಂದು ಪಾಪಘ್ನಿಯನ್ನೂ ಇನ್ನೊಂದು ಚಿತ್ರಾವತಿಯನ್ನೂ ಸೇರುತ್ತದೆ. ಮಾರ್ಕಂಡೇಯ ಇನ್ನೊಂದು ಹೊಳೆ. ಕೋಲಾರ ತಾಲ್ಲೂಕಿನ ವಕ್ಕಲೇರಿ ಬೆಟ್ಟಗಳ ಮೇಲೆ ಮತ್ತು ಮಾಲೂರು ತಾಲ್ಲೂಕಿನ ಟೇಕಲ್ ಬೆಟ್ಟಗಳ ಮೇಲೆ ಹುಟ್ಟುವ ಎರಡು ತೊರೆಗಳು ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆ ಎಂಬಲ್ಲಿ ಸೇರಿ ಮಾರ್ಕಂಡೇಯ ನದಿಯಾಗಿ ದಕ್ಷಿಣದತ್ತ ಹರಿದು ವೃಷಭಾವತಿಯನ್ನು ಸೇರಿಕೊಳ್ಳುವುದು. ಜಿಲ್ಲೆಯಲ್ಲಿ 50ಕಿಮೀ ದೂರ ಈ ನದಿ ಹರಿಯುವುದು. ಇದರ ಜಲಾನಯನ ಪ್ರದೇಶದಲ್ಲಿ 274 ಕೆರೆಗಳಿವೆ. ದಕ್ಷಿಣಪಿನಾಕಿನಿ ನದಿ ಹುಟ್ಟುವುದು ಚೆನ್ನರಾಯನ ಬೆಟ್ಟದಲ್ಲಿ. ಶಿಡ್ಲಘಟ್ಟದವರೆಗೆ ಪೂವರ್ಾಬಿಮುಖವಾಗಿ ಹರಿದು, ದಕ್ಷಿಣಕ್ಕೆ ತಿರುಗಿ, ಬೆಂಗಳೂರು ಜಿಲ್ಲೆಯನ್ನು ಪ್ರವೇಶಿಸುತ್ತದೆ. ಕೋಲಾರ ಜಿಲ್ಲೆಯಲ್ಲಿ ಇದರ ಉದ್ದ 39ಕಿಮೀ. ಜಲಾನಯನ ಪ್ರದೇಶ 580ಚ.ಕಿಮೀ. ಕಾವೇರಿಯ ಉಪನದಿಗಳಲ್ಲಿ ಒಂದಾದ ಅಕರ್ಾವತಿ ಉದಿಸುವುದು ನಂದಿದುರ್ಗದಲ್ಲಿ. ಇದು ಬೆಟ್ಟವನ್ನಿಳಿದು ಜಿಲ್ಲೆಯನ್ನು ದಾಟಿ ಬೆಂಗಳೂರು ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕನ್ನು ಸೇರುತ್ತದೆ. ವೃಷಭಾವತಿ ನದಿ ವಕ್ಕಲೇರಿ ಬೆಟ್ಟದಲ್ಲಿ ಹುಟ್ಟುತ್ತದೆ. ಬಂಗಾರಪೇಟೆ ತಾಲ್ಲೂಕಿನಲ್ಲಿ ಹಾಯ್ದು, ಕೊಪ್ಪ ದೊಡ್ಡ ಕೆರೆಗೆ ನೀರು ಒದಗಿಸಿ, ಕಾಮಸಂದ್ರದ ಬಳಿ ದಕ್ಷಿಣಕ್ಕೆ ಹರಿದು ತಮಿಳುನಾಡು ರಾಜ್ಯದ ಧರ್ಮಪುರಿ ಜಿಲ್ಲೆಯ ಹೊಸೂರು ತಾಲ್ಲೂಕನ್ನು ಪ್ರವೇಶಿಸುತ್ತದೆ. ಕಾಮಸಂದ್ರದ ಬಳಿ ಇದಕ್ಕೆ ಕಟ್ಟೆ ಕಟ್ಟಲಾಗಿದೆ. ಜಿಲ್ಲೆಯಲ್ಲಿ ಈ ನದಿಯ ಉದ್ದ 58ಕಿಮೀ. ಜಲಾನಯನ ಪ್ರದೇಶ 347ಚ.ಕಿಮೀ. ಈ ಪ್ರದೇಶದಲ್ಲಿ 264 ಕೆರೆಗಳಿವೆ.  ತಾಲ್ಲೂಕಿನ ದಕ್ಷಿಣ ಭಾಗದಲ್ಲಿ ಹಲವು ಸಣ್ಣ ಗುಡ್ಡಗಳಿವೆ. ಇಲ್ಲಿಯ ಮುಖ್ಯ ನದಿ ಪಾಲಾರ್. ಇದು ದಕ್ಷಿಣ ಮತ್ತು ಆಗ್ನೇಯ ದಿಕ್ಕುಗಳಿಗೆ ಹರಿದು ಬೇತಮಂಗಲ ಮತ್ತು ರಾಮಸಾಗರ ಕೆರೆಗಳಿಗೆ ನೀರು ಒದಗಿಸುತ್ತದೆ. ಇದು ಗುಂಡಲಪಲ್ಲಿಯ ಬಳಿಯಲ್ಲಿ ತಮಿಳುನಾಡಿನ ಉತ್ತರ ಆಕರ್ಾಟ್ ಜಿಲ್ಲೆಯನ್ನು ಪ್ರವೇಶಿಸುತ್ತದೆ. ವಕ್ಕಲಗೇರಿ ಬೆಟ್ಟದ ನೈಋತ್ಯಕ್ಕೆ ಒಂದು ತೊರೆ ಹುಟ್ಟುತ್ತದೆ. ಮಾಲೂರು ತಾಲ್ಲೂಕಿನ ಟೇಕಲ್ ಬೆಟ್ಟದಲ್ಲಿ ಇನ್ನೊಂದು ಉಗಮಿಸುತ್ತದೆ. ಇವೆರಡೂ ಬೂದಿಕೋಟೆಯ ಬಳಿ ಕೂಡುತ್ತವೆ. ಒಂದಾದ ನದಿಗೆ ಮಾರ್ಕಂಡೇಯ ಎಂದು ಹೆಸರು. ಇದು ತಾಲ್ಲೂಕಿನ ದಕ್ಷಿಣದಲ್ಲಿ ಪ್ರವಹಿಸುತ್ತದೆ. ವಕ್ಕಲಗೇರಿ ಬೆಟ್ಟದಲ್ಲಿ ಹುಟ್ಟುವ ವೃಷಭಾವತಿ ನದಿ ದಕ್ಷಿಣ ದಿಕ್ಕಿಗೆ ಹರಿದು ಕೊಪ್ಪ ದೊಡ್ಡ ಕೆರೆಗೆ ನೀರನ್ನು ಒದಗಿಸುತ್ತದೆ. ಇದು ಕಡನಟ್ಟದ ಬಳಿ ತಮಿಳುನಾಡನ್ನು ಪ್ರವೇಶಿಸುತ್ತದೆ.

ಸಸ್ಯ,ಪ್ರಾಣಿ ಮತ್ತು ಖನಿಜ ಸಂಪತ್ತು

           ಕೋಲಾರ ಜಿಲ್ಲೆ ಬಹುಮಟ್ಟಿಗೆ ನೈಸ್ ಕಣಶಿಲೆಯ ಪ್ರದೇಶ. ಶ್ರೀನಿವಾಸಪುರದಿಂದ ದಕ್ಷಿಣಾಬಿಮುಖವಾಗಿ ಜಿಲ್ಲೆಯ ಅಂಚಿನವರೆಗೆ ಸುಮಾರು 6ಕಿಮ  ಅಗಲದ ಶಿಸ್ಟ್ ಕಲ್ಲಿನ ಪಟ್ಟೆಯೊಂದು ಹಬ್ಬಿದೆ. ಜಿಲ್ಲೆಯ ಹೆಚ್ಚಿನ ಭಾಗದಲ್ಲಿ ನೆಲ ಅಲ್ಪಸ್ವಲ್ಪ ಏರುತಗ್ಗುಗಳೊಡನೆ ಹರಡಿದ್ದು ಕಣಶಿಲೆಯ ಗುಡ್ಡಬೆಟ್ಟಗಳು ಅಲ್ಲಲ್ಲಿ ಎದ್ದು ನಿಂತಂತಿರುತ್ತವೆೆ. ದೊಡ್ಡ ದೊಡ್ಡ ಬಂಡೆಗಳನ್ನು ಒಂದರ ಮೇಲೊಂದು ವಿಚಿತ್ರಾಕಾರದಲ್ಲಿ ಪೇರಿಸಿದಂತಿರುವ ಈ ಬೆಟ್ಟಗಳು ಕೋಲಾರ ಜಿಲ್ಲೆಯ ವೈಶಿಷ್ಟ್ಯ. ಶಿಸ್ಟ್ ಕಲ್ಲಿನ ಪಟ್ಟೆಯ ಪ್ರದೇಶ ಆಥರ್ಿಕವಾಗಿ ಮುಖ್ಯವಾದುದು. ಇದಕ್ಕೆ ಹೊಂದಿಕೊಂಡಂತೆ ಕ್ವಾಟರ್ೈಟ್, ಬೆಣಚುಕಲ್ಲು ಮುಂತಾದ ವಿವಿಧ ಬಗೆಯ ಶಿಲೆಗಳ ಸಮುದಾಯವಿದೆ. ಪ್ರಸಿದ್ಧವಾದ ಚಿನ್ನದ ಭೂನಿಕ್ಷೇಪಗಳು ಹಬ್ಬಿರುವುದೂ ಇದರ ಜೊತೆಯಲ್ಲೇ. ಇದಲ್ಲದೆ ಜಿಲ್ಲೆಯ ಹಲವು ಭಾಗಗಳಲ್ಲಿ ಉತ್ತರ ದಕ್ಷಿಣ ಅಥವಾ ಪೂರ್ವ ಪಶ್ಚಿಮವಾಗಿ ಹಬ್ಬಿರುವ ಡಾಲರೈಟ್ನ ಹೊಡೆಸಾಲುಗಳೂ ಇವೆ. ಚಿಕ್ಕಬಳ್ಳಾಪುರ ಶಿಡ್ಲಘಟ್ಟ ಜಂಗಮಕೋಟೆ ಈ ತ್ರಿಕೋನ ಪ್ರದೇಶದಲ್ಲಿ ಮತ್ತು ಸ್ವಲ್ಪಮಟ್ಟಿಗೆ ಶ್ರೀನಿವಾಸಪುರದ ಬಳಿ ಜಂಬುಮಣ್ಣು ಸಹ ಇದೆ. ಕೋಲಾರದ ಚಿನ್ನದ ಗಣಿಗಳು ಜಗತ್ಪ್ರಸಿದ್ಧ. ಇಲ್ಲಿ ಅಲ್ಪಾಂಶ ಬೆಳ್ಳಿಯೂ ದೊರಕುತ್ತದೆ. ಬಂಗಾರಪೇಟೆ ತಾಲ್ಲೂಕಿನ ರಾಮಸಮುದ್ರದ ಬಳಿ ಕೊರಂಡಂ, ಮಾಲೂರು ತಾಲ್ಲೂಕಿನ ಕರಡಿಬಂಡೆ ಬಳಿ ಸುದ್ದೆಮಣ್ಣು ದೊರಕುತ್ತವೆ.
           ಸ್ವಲ್ಪ ಹೆಚ್ಚು ಮಳೆಯಾಗುವ ಬೆಟ್ಟಗುಡ್ಡಗಳಲ್ಲಿ ಚಿಕ್ಕ ಮರ ಮತ್ತು ಕುರುಚಲು ಕಾಡುಗಳಿವೆ. ಈ ಕಾಡುಗಳಲ್ಲಿ ಬೇವು, ಹುಣಿಸೆ, ಗಂಧ, ಹೊಂಗೆ, ಕರಿಜಾಲಿ, ಬಿಳಿಜಾಲಿ, ಕಗ್ಗಲಿ, ಬನ್ನಿ, ಗುಜ್ಜಲು, ಬಿಲ್ವಾರ, ಚುಜ್ಜಲು, ದಿಂಡಿಗ, ನೇರಳೆ, ಚೆನ್ನಂಗಿ, ಪಚರಿ, ನವಿಲಾದಿ, ದೇವದಾರು, ಆಲ, ಬೇಲ, ಮುತ್ತುಗ ಬೆಳೆಯುತ್ತವೆ. ಸೌದೆ, ಶ್ರೀಗಂಧ ಮುಖ್ಯ ಉತ್ಪನ್ನಗಳು. ನಂದಿಬೆಟ್ಟದ ಕಾಡುಗಳಲ್ಲಿ ಕರಡಿ, ಚಿರತೆ, ಕಾಡುಮೊಲ, ಕಾಡುಹಂದಿ ಮತ್ತು ಜಿಂಕೆಗಳಿವೆ. ದೊಡ್ಡ ನದಿಗಳಿಲ್ಲದಿರುವುದರಿಂದಲೂ ಮಳೆ ಕಡಿಮೆಯಾದ್ದ ರಿಂದಲೂ ಈ ಜಿಲ್ಲೆಯ ವ್ಯವಸಾಯಕ್ಕೆ ಕೆರೆಗಳು ಮುಖ್ಯ ಆಧಾರ. ಜಿಲ್ಲೆಯಲ್ಲಿ ಉತ್ತಮ ವಿದ್ಯುತ್ ಸಂಪರ್ಕಗಳಿರುವುದರಿಂದ, ನೀರಾವರಿ ಪಂಪ್ಗಳೂ ಹೆಚ್ಚು ಸಂಖ್ಯೆಯಲ್ಲಿವೆ. ರಾಗಿ, ಬತ್ತ, ಜೋಳ, ಸಜ್ಜೆ, ಕಾಳುಗಳು, ನೆಲಗಡಲೆ, ಕಬ್ಬು, ಆಲೂಗೆಡ್ಡೆ, ಈರುಳ್ಳಿ ಮತ್ತು ಹೊಗೆಸೊಪ್ಪು ಇಲ್ಲಿಯ ಮುಖ್ಯ ಬೆಳೆಗಳು.

ಕೃಷಿ ಮತ್ತು ನೀರಾವರಿ

            ಬೆಟ್ಟಗುಡ್ಡಗಳಿಂದ ಕೂಡಿದೆ. ಮುಳಬಾಗಲು ಮತ್ತು ಅವನಿ ಬಳಿಯ ಬೆಟ್ಟಗಳು ದೊಡ್ಡವು. ಮುಖ್ಯ ಬೆಟ್ಟಶ್ರೇಣಿಯೊಂದು ಮಧ್ಯದಲ್ಲಿ ಹಬ್ಬಿದ್ದು ಇದರ ಪಶ್ಚಿಮ ಪ್ರದೇಶದಲ್ಲಿ ವಿಶಾಲ ಕಣಿವೆಗಳಿದ್ದರೆ ಪೂರ್ವದಲ್ಲಿ ಕಿರುಕಣಿವೆಗಳಿವೆ. ಪಿಂಗಾಣಿ ಸಾಮಾನು ತಯಾರಿಕೆಗೆ ಉಪಯುಕ್ತವಾಗುವ ಬಿಳಿ ಜೇಡಿ ಮತ್ತು ಕೆಂಪುಜೇಡಿ ಮಣ್ಣುಂಟು. ವ್ಯವಸಾಯಕ್ಕೆ ಪೂರಕವಾಗುವಂಥ ಹಲವಾರು ಕೆರೆಗಳೂ ಬಾವಿಗಳೂ ಇವೆ. ರಾಗಿ, ಬತ್ತ, ನೆಲಗಡಲೆ ಮುಖ್ಯ ಬೆಳೆಗಳು, ದ್ವಿದಳ ಧಾನ್ಯಗಳನ್ನೂ ಹಣ್ಣುಗಳನ್ನೂ ಬೆಳೆಸುತ್ತಾರೆ. ಪಶುಪಾಲನೆ ಉಂಟು.   ಬೆಟ್ಟಗುಡ್ಡಗಳಿಂದ ಕೂಡಿದೆ. ಮುಳಬಾಗಲು ಮತ್ತು ಅವನಿ ಬಳಿಯ ಬೆಟ್ಟಗಳು ದೊಡ್ಡವು. ಮುಖ್ಯ ಬೆಟ್ಟಶ್ರೇಣಿಯೊಂದು ಮಧ್ಯದಲ್ಲಿ ಹಬ್ಬಿದ್ದು ಇದರ ಪಶ್ಚಿಮ ಪ್ರದೇಶದಲ್ಲಿ ವಿಶಾಲ ಕಣಿವೆಗಳಿದ್ದರೆ ಪೂರ್ವದಲ್ಲಿ ಕಿರುಕಣಿವೆಗಳಿವೆ. ಪಿಂಗಾಣಿ ಸಾಮಾನು ತಯಾರಿಕೆಗೆ ಉಪಯುಕ್ತವಾಗುವ ಬಿಳಿ ಜೇಡಿ ಮತ್ತು ಕೆಂಪುಜೇಡಿ ಮಣ್ಣುಂಟು. ವ್ಯವಸಾಯಕ್ಕೆ ಪೂರಕವಾಗುವಂಥ ಹಲವಾರು ಕೆರೆಗಳೂ ಬಾವಿಗಳೂ ಇವೆ. ರಾಗಿ, ಬತ್ತ, ನೆಲಗಡಲೆ ಮುಖ್ಯ ಬೆಳೆಗಳು, ದ್ವಿದಳ ಧಾನ್ಯಗಳನ್ನೂ ಹಣ್ಣುಗಳನ್ನೂ ಬೆಳೆಸುತ್ತಾರೆ. ಪಶುಪಾಲನೆ ಉಂಟು.

ಕೈಗಾರಿಕೆಗಳು

         ಮಾಲೂರಿನ ಹತ್ತಿರದಲ್ಲಿ ದೊರೆಯುವ ಮಣ್ಣು ಹೆಂಚು ಮತ್ತು ಇಟ್ಟಿಗೆ ತಯಾರಿಕೆಗೆ ಉತ್ತಮವಾದದ್ದು. ಇಲ್ಲಿ ತಲಾ ನಾಲ್ಕು ಹೆಂಚಿನ ಮತ್ತು ಇಟ್ಟಿಗೆ ಕಾಖರ್ಾನೆಗಳೂ ಇವೆ. ಗೃಹಕೈಗಾರಿಕೆಗಳಾಗಿ ಬೆಂಕಿಪೊಟ್ಟಣ, ಊದುಬತ್ತಿ, ಬೀಡಿ ತಯಾರಿಕೆ, ಜೇನು ಮತ್ತು ಕೋಳಿ ಸಾಕಣೆ, ಹಾಲಿನ ಉತ್ಪಾದನೆ ಮತ್ತು ರೇಷ್ಮೆ ವ್ಯವಸಾಯ ಇವು ಇತರ ಪ್ರಚಲಿತವಿರುವ ಉದ್ಯಮಗಳು. ಇಲ್ಲಿ ತಯಾರಾಗುವ ಇಟ್ಟಿಗೆ ಹೆಂಚುಗಳನ್ನು ಹೊರಜಿಲ್ಲೆಗಳಿಗೂ ಕಳುಹಿಸಲಾಗುವುದು. ಶಿವಾರಪಟ್ಟಣದಲ್ಲಿ ತಯಾರಾಗುವ ಲೋಹದ ಮತ್ತು ಕಲ್ಲಿನ ವಿಗ್ರಹಗಳಿಗೆ ವಿದೇಶಗಳಲ್ಲಿ ಬೇಡಿಕೆ ಇದೆ. ಇಲ್ಲಿ ಬೆಳೆಯುವ ವಿವಿಧ ತರಕಾರಿಗಳನ್ನೂ ಮಲ್ಲಿಗೆ, ಸೇವಂತಿಗೆ, ಗುಲಾಬಿ ಹೂಗಳನ್ನೂ ಹೊರರಾಜ್ಯಗಳಿಗೆ ರವಾನಿಸಲಾಗುತ್ತದೆ. ಇಲ್ಲಿಯ ವ್ಯಾಪಾರ ವಾಣಿಜ್ಯೋದ್ಯಮಗಳಿಗೆ ಸಹಕಾರಿಯಾಗಿರುವ ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕುಗಳಿವೆ.
           ಚಿನ್ನದ ಗಣಿಗಾರಿಕೆ ಜಿಲ್ಲೆಯ ಒಂದು ದೊಡ್ಡ ಉದ್ಯಮ. ಭಾರತದ ಒಟ್ಟು ಚಿನ್ನದ ಉತ್ಪಾದನೆಯಲ್ಲಿ ಸೇ.99ನ್ನು ಕೋಲಾರ ಚಿನ್ನದ ಗಣಿಗಳಲ್ಲಿ ತೆಗೆಯಲಾಗುತ್ತಿತ್ತು. ಈಗ ಚಿನ್ನದ ಗಣಿಗಾರಿಕೆ ಸ್ಥಗಿತಗೊಳ್ಳುವ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಭಾರತ ಸಕರ್ಾರದ ರಕ್ಷಣಾ ಇಲಾಖೆಯ ಆಡಳಿತ ನಿಯಂತ್ರಣಕ್ಕೊಳಪಟ್ಟ ಭಾರತ್ ಅತರ್್ ಮೂವರ್ಸ್ ಲಿಮಿಟೆಡ್ ಸಂಸ್ಥೆ ಭಾರಿ ಯಂತ್ರೋಪಕರಣಗಳನ್ನು ತಯಾರಿಸುತ್ತಿದೆ. ಗೌರಿಬಿದನೂರಿನಲ್ಲಿ ಸಹಕಾರ ಸಕ್ಕರೆ ಕಾಖರ್ಾನೆ ಸ್ಥಾಪಿತವಾಗಿದೆ. ಹಲವು ಸಣ್ಣ ಕೈಗಾರಿಕೆಗಳು ಕೋಲಾರ, ಚಿಕ್ಕಬಳ್ಳಾಪುರ, ಚಿಂತಾಮಣಿ ಮತ್ತು ಕೋಲಾರ ಚಿನ್ನದ ಗಣಿ ಪ್ರದೇಶದಲ್ಲಿವೆ. ಉಕ್ಕಿನ ಸಾಮಾನುಗಳು, ವ್ಯವಸಾಯೋಪಕರಣಗಳು, ಅಲ್ಯುಮಿನಿಯಂ ಪಾತ್ರೆಗಳು, ಹೆಂಚು, ಇಟ್ಟಿಗೆ, ಸ್ಲೇಟ್, ಸೀಸದಕಡ್ಡಿ, ಸಾಬೂನು, ಅಂಟು, ಸುಗಂಧದ್ರವ್ಯಗಳು, ಔಷದಿಗಳು, ಕಡ್ಡಿಪೆಟ್ಟಿಗೆ, ಪ್ಲಾಸ್ಟಿಕ್ ಸಾಮಾನುಗಳು ಕೊಡ ಕೋಲಾರ ಜಿಲ್ಲೆಯಲ್ಲಿ ತಯಾರಾಗುತ್ತವೆ. ಕಲ್ಲಿಗೆ ಹೊಳಪು ಕೊಡುವುದು, ಬೀಡಿ ಕಟ್ಟುವುದು, ಊದುಬತ್ತಿ ತಯಾರಿಕೆ, ಕೈಮಗ್ಗ, ಕಂಬಳಿ ತಯಾರಿಕೆ, ಗಾಣದಿಂದ ಮತ್ತು ಯಂತ್ರಗಳಿಂದ ಎಣ್ಣೆ ಉತ್ಪಾದನೆ, ಬೆಲ್ಲ ತಯಾರಿಕೆ ಇವೂ ಇವಕ್ಕೆ ಸಂಬಂಧಪಟ್ಟ ಸಣ್ಣಪುಟ್ಟ ಉತ್ಪಾದನೆ ಮತ್ತು ಕೈಕೆಲಸಗಳೂ ಹಲವು ಜನರಿಗೆ ಉದ್ಯೋಗ ದೊರಕಿಸಿವೆ. ಜಿಲ್ಲೆಯಲ್ಲಿ ರೇಷ್ಮೆಉದ್ಯಮ ಉತ್ತಮ ಸ್ಥಿತಿಯಲ್ಲಿದೆ. ಶಿಡ್ಲಘಟ್ಟ ಈ ಉದ್ಯಮಕ್ಕೆ ಪ್ರಸಿದ್ಧವಾಗಿದೆ. ಚರಕದಿಂದ ನೂಲು ತೆಗೆಯುವುದು. ಮಣ್ಣಿನ ಸಾಮಾನುಗಳನ್ನು ತಯಾರಿಸುವುದು. ಚರ್ಮ ಹದ ಮಾಡುವುದು, ಜೇನುಸಾಕಣೆ, ಕೊಟ್ಟಣದ ಅಕ್ಕಿ ತಯಾರಿಕೆ -ಇವು ಇತರ ಕೆಲವು ಸಣ್ಣ ಕೈಗಾರಿಕೆಗಳು. ಆಲೂಗೆಡ್ಡೆ, ಮೆಣಸಿನಕಾಯಿ ಮತ್ತು ಈರುಳ್ಳಿ ಇವನ್ನು ಆಂಧ್ರಪ್ರದೇಶಕ್ಕೂ ಶ್ರೀಲಂಕಾಗೂ ಕಳುಹಿಸುತ್ತಾರೆ. ಉಣ್ಣೆಕಂಬಳಿಗಳೂ ರೇಷ್ಮೆ ಬಟ್ಟೆಗಳೂ ಚರ್ಮದ ವಸ್ತುಗಳೂ ನೆರೆ ರಾಜ್ಯಗಳಿಗೆ ಹೋಗುತ್ತವೆ. ಆಂಧ್ರಪ್ರದೇಶದಿಂದ ಜಿಲ್ಲೆಗೆ ಅಕ್ಕಿಪೂರೈಕೆಯಿದೆ.

ಪೌರಾಣಿಕ ಹಿನ್ನೆಲೆ           ಕೋಲಾರವನ್ನು ಕೋಲಾಹಲಪುರ ,ಕುವಲಾಲ, ಕೋಲಾಳ ಇತ್ಯಾದಿ ನಾಮದೇಯಗಳಿಂದ ಹಿಂದಿನ ಕಾಲದಲ್ಲಿ ಕರೆದಿದ್ದಾರೆ. ಈ ನಾಮದೇಯಗಳ ಉಗಮಕ್ಕೆ ಒಂದು ಕಥಾಕಾರಣವೂ ಇದೆ. ಪೂರ್ವದಲ್ಲಿ ಕಾರ್ತವೀಯರ್ಾಜರ್ುನ ಈ ಪ್ರಾಂತ್ಯದ ದೊರೆಯಾಗಿ ಆಳುತ್ತಿದ್ದ. ಒಮ್ಮೆ ಮಹಷರ್ಿ ಜಮದಗ್ನಿಯ ಆಶ್ರಮಕ್ಕೆ ಬಂದ ಕಾರ್ತವೀಯರ್ಾಜರ್ುನನನ್ನು ಸುರಭಿಯೆಂಬ ಗೋವಿನ ಸಹಾಯದಿಂದ ಮಹಷರ್ಿ ಸತ್ಕರಿಸಿದನು. ಸತ್ಕಾರ ಸ್ವೀಕರಿಸಿದ ದೊರೆ ಆ ಗೋವನ್ನು ತನಗೆ ಕೊಡಬೇಕೆಂದು ಪೀಡಿಸಿದ ಅಲ್ಲದೆ ಬಲತ್ಕಾರವಾಗಿ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡಿದಾಗ ಜಮದಗ್ನಿಯ ಪುತ್ರನಾದ ಪರಶುರಾಮನಿಂದ ಹತನಾದನು. ಅನಂತರ ದೊರೆಯ ಮಕ್ಕಳಿಂದ ಜಮದಗ್ನಿ ಮಹಷರ್ಿ ಹತ್ಯೆ ನಡೆಯುತ್ತದೆ. ಮಹಷರ್ಿಯ ಮಡದಿ ರೇಣುಕಾದೇವಿಯು ಸತಿಸಹಗಮನವಾಗುತ್ತಾಳೆ. ಈ ಎಲ್ಲಾ ಘಟನೆಗಳಿಂದ ಕುಪಿತನಾದ ಪರಶುರಾಮ ಕ್ಷತ್ರಿಯರ ನಾಶದ ಪಣ ತೊಟ್ಟು ಕಾರ್ತವೀಯರ್ಾಜರ್ುನರ ಮಕ್ಕಳನ್ನು ಯುದ್ಧದಲ್ಲಿ ಕೊಲ್ಲುತ್ತಾನೆ.  ಈ ಯುದ್ಧಗಳಿಂದ ಉದ್ಭವವಾದ ಕೋಲಾಹಲ ಸುತ್ತಲಿನ ಬೆಟ್ಟಗುಡ್ಡಗಳಲ್ಲಿ ಮಾರ್ದನಿಗೊಂಡ ಪರಿಣಾಮ ಈ ಪ್ರದೇಶಕ್ಕೆ ಕೋಲಾಹಲವೆಂದು ಹೆಸರು ಬಂತು ಅಲ್ಲದೆ ಸತಿಯಾದ ರೇಣುಕೆಯ ನೆನಪಿಗಾಗಿ ಕೋಲಾರಮ್ಮನ ದೇಗುಲ ನಿಮರ್ಾಣವಾಯಿತು ಎಂದು ಸ್ಥಳೀಯ ಐತಿಹ್ಯವೊಂದು ಮಾಹಿತಿ ನೀಡುತ್ತದೆ. ಮುಂದೆ ಸತ್ತ ಕಾರ್ತವೀರ್ಯನ ವಂಶಜರೇ ಹೈಹಯ ವಂಶ ಚೋಳರೆನಸಿ, ಶ್ರೀಶೈಲ ಪೀಠಾಧೀಶರಿಂದ ಶಾಪ ವಿಮೋಚನೆಯನ್ನು ಪಡೆದರು.
                                               

           ಕೋಲಾರದ ದಕ್ಷಿಣ ದಿಶೆಗಿರುವ ಶತಶೃಂಗ ಪರ್ವತವು ರೇಣುಕಾದೇವಿ ಹಾಗೂ ಪರಶುರಾಮನ ಸಂಬಂಧಿ ಐತಿಹ್ಯಕ್ಕೆ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಮಹಾಭಾರತ ಕಾಲದ ಪಾಂಡವರು ಇಲ್ಲಿ ತಮ್ಮ ವನವಾಸದ ಕೆಳ ಸಮಯವನ್ನು ಈ ಪ್ರದೇಶಗಳಲ್ಲಿ ಕಳೆದರೆಂದು ಹಾಗೂ ರಾಮಾಯಣದ ನಂಟು ಈ ಪ್ರಾಂತ್ಯಕ್ಕಿದೆ ಎಂದು ಹೇಳುತ್ತಾರೆ. ಅಲ್ಲದೆ ಅದೇ ಬೆಟ್ಟದ ಮಡಿಲಲ್ಲಿರುವ ತೇರಹಳ್ಳಿ ಬಳಿ 'ಪಾಂಡವರ ಹಜಾರ'ಎಂಬ ಗುಹೆ ಹಾಗೂ ಕೋಲಾರದಲ್ಲಿದ್ದು ಈ ಬಸ್ ನಿಲ್ದಾಣವಾಗಿರುವ 'ದಶರಥಕುಂಟೆ'ಯನ್ನು ಇದಕ್ಕೆ ನಿದರ್ಶನವಾಗಿ ತೋರುತ್ತಾರೆ. ಸಾಲಿನಲ್ಲಿ ಪಶ್ಚಿಮಕ್ಕಿರುವ ಸೀತಿಬೆಟ್ಟದಲ್ಲಿನ ಶಿವಲಿಂಗವನ್ನು ಸ್ವತಃ ಶ್ರೀಪತಿಯೇ ಪ್ರತಿಷ್ಠಾಪಿಸಿದನೆಂದೂ ಆ ಶ್ರೀಪತಿಯೇ ಮುಂದೆ ಸೀತಿಯಾಯಿತೆಂದು ಹೇಳುತ್ತಾರೆ.
          'ಮೂಡಲಬಾಗಿಲು' ಎಂದು ಕರೆಯುವ ಮುಳಬಾಗಿಲು ತಾಲೂಕಿನ ಆವನಿ ಪ್ರದೇಶ, ಪುರಾಣ ಪ್ರಸಿದ್ಧ ಆವಂತಿಕಾ ಕ್ಷೇತ್ರವಾಗಿತ್ತು. ಇಲ್ಲಿ ರಾಮಾಯಣದ ಕತರ್ೃ ವಾಲ್ಮೀಕಿ ಋಷಿಯು ವಾಸಿಸುತ್ತಿದ್ದನೆಂದು ಪ್ರತೀತಿಯಿದೆ. ಅಲ್ಲದೆ ರಾಮನಿಂದ ಬಹಿಷ್ಕೃತಗೊಂಡ ಸೀತಾದೇವಿಯು ಲವಕುಶರಿಗೆ ಜನ್ಮ ನೀಡಿದ್ದೂ ಬಾಲಕ ಲವಕುಶರು ರಾಮಾಲಕ್ಷ್ಮಣರೊಡನೆ ಕದನ ಮಾಡಿದ್ದೂ ಈ ಆವನಿ ಪ್ರದೇಶವೆಂದೂ ಇಲ್ಲಿ ಅವರು ಯಜ್ಞಕುದುರೆಯನ್ನು ಕಟ್ಟಿದ ಸ್ಥಳವನ್ನು ಈಗಲೂ ಕಾಣಬಹುದು. ತಂದೆ ಮಕ್ಕಳ ಮಾಡಿದ 'ಆಹವ(ಯುಧ್ಧ)ನೀಯ'ಎಂಬ ಹೆಸರೇ ಮುಂದೆ ಆವನಿಯಾಯಿತು ಎಂದು ಸ್ಥಳಿಯ ಐತಿಹ್ಯಗಳು ತಿಳಿಸುತ್ತವೆ. ಅಲ್ಲದೆ ರಾಮ-ಲಕ್ಷ್ಮಣ, ಭರತ-ಶತೃಘ್ನ, ವಾಲಿ-ಸುಗ್ರೀವ, ಲವ-ಕುಶ ಇವರುಗಳ ಹೆಸರುಗಳಲ್ಲಿ ಈ ಕ್ಷೇತ್ರದಲ್ಲಿ ಅನೇಕ ಶಿವಲಿಂಗಗಳನ್ನು ಸ್ಥಾಪಿಸಲಾಗಿದೆ. ಇಲ್ಲಿನ ಬೆಟ್ಟದ ಮೇಲಿನ ಶಿವಾಲಯವು ದ್ರಾವಿಡ ವರ್ಗಕ್ಕೆ ಸೇರಿದ್ದು ವಿಶಿಷ್ಟ ಕಲಾವೈಭವದಿಂದ ಕೂಡಿದೆ. ಇದೇ ತಾಲೂಕಿನ ಕುರುಡುಮಲೆಯು ತ್ರಿಪುರಾಂತನನ ಸಂಹಾರಕ್ಕೆ ಯೋಜನೆಯನ್ನು ರೂಪಿಸಲು ದೇವಾನುದೇವತೆಗಳು ಇಲ್ಲಿ ಕೂಡಿದರು. ಇದನ್ನು ಕೌಂಡಿನ್ಯಗಿರಿ ಎಂದು ಕರೆಯುತ್ತಿದ್ದರು. ಆ ರೀತಿ 'ಕೂಡುಮಲೆಯು' ಇಂದು ಕುರುಡುಮಲೆಯಾಗಿ ಪ್ರಸಿದ್ಧಿ ಪಡೆದಿದೆ. ಇಲ್ಲಿ ವೃತಾಸುರನನ್ನು ಸಂಹರಿಸಲು ಎಲ್ಲಾ ದೇವತೆಗಳು ವಿನಾಯಕನನ್ನು ಪೂಜಿಸಿದ್ದರು ಎಂಬ ಪ್ರತೀತಿಯೂ ಇದೆ. ಮಾಲೂರು ತಾಲೂಕಿನ ಚಿಕ್ಕತಿರಿಪತಿಯು ಜನಮೇಜಯರಾಯ ಯಾಗ ಮಾಡಿದ ಸ್ಥಳವೆಂದು ಸ್ಥಳೀಯ ಪುರಾಣವೊಂದು ಮಾಹಿತಿ ನೀಡುತ್ತದೆ.
   

ನೂತನ ಶಿಲಾಯುಗ ಸಂಸ್ಕೃತಿ

          ಮಾನವನ ಸಾಂಸ್ಕೃತಿಕ ಪಥದ ಅನುಪಮ ಹಂತ-ನೂತನ ಶಿಲಾಯುಗ. ಈ ಹಂತದಲ್ಲಿ ಮಾನವ ಅಲೆಮಾರಿ ಬದುಕಿನಿಂದ ಸ್ಥಿರವಾಸ್ತವ್ಯದ ಬದುಕಿಗೆ ಬಡ್ತಿ ಪಡೆದ. ಮಡಿಕೆ-ಕುಡಿಕೆಗಳ ತಯಾರಿಕೆ, ಶಿಲಾ ಉಪಕರಣಗಳು. ನಾಜೂಕಿನ ವಿವಿಧ ಕಲ್ಲಿನ ಪರಕರಗಳು ಮರ ,ಮೂಳೆ ಮತ್ತು ಕಟ್ಟಿಗೆಗೆ ಕಟ್ಟಿ ಬಳಸಲಾಗುತ್ತಿತ್ತು. ಇಂತಹ ಆದಿಮಾನವನ ಪರಿಕರಗಳು ಹಾಗೂ ನೆಲೆಯು ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಗೊರವನಹಳ್ಳಿಯಲ್ಲಿ ಪತ್ತೆಯಾಗಿವೆ. ಈ ಸಾಂಸ್ಕೃತಿಕ ಘಟ್ಟಕ್ಕೆ ಸೇರಿದ ಸುಮಾರು 200 ನೆಲೆಗಳು ರಾಜ್ಯಾಂದ್ಯಂತ ಕಂಡು ಬಂದಿವೆ. ಅವುಗಳಲ್ಲಿ ಜಿಲ್ಲೆಯ ಶ್ರೀನಿವಾಸಪುರದಲ್ಲಿ 1916ಕ್ಕೂ ಹಿಂದೆಯೇ ಪತ್ತೆಹಚ್ಚಿ ವರದಿ ಮಾಡಿದ ಕೀತರ್ಿ ರಾಬಟರ್್ ಬ್ರೂಸ್ ಪೂಟ್ ಅವರಿಗೆ ಸಲ್ಲಬೇಕು. ದಕ್ಷಿಣ ಭಾರತದಲ್ಲೇ ವಿಶಾಲನೆಲೆಯೆಂದು ಪಾತ್ರವಾಗಿರುವ ಮಾಲೂರು ತಾಲೂಕಿನ ಬನಹಳ್ಳಿ ಭಾರತದ ಪುರಾತತ್ವ ಇಲಾಖೆಯ ನಕಾಶೆಯಲ್ಲಿ ಒಂದು ವಿಶಿಷ್ಟ ಸ್ಥಾನ ಪಡೆದಿದೆ. ಅಲ್ಲದೆ ಕೋಲಾರ ತಾಲೂಕಿನ ಅಂತರಗಂಗೆ, ತೇರಹಳ್ಳಿ, ಪಾಪರಾಜನಹಳ್ಳಿ, ಅರಾಭಿಕೊತ್ತನೂರು, ಕಡಗತ್ತೂರು, ಕೆಂದಟ್ಟಿ, ಗುಟ್ಟಹಳ್ಳಿ ಹಾಗೂ ವೆಂಕಟಾಪುರ. ಬಂಗಾರಪೇಟೆ ತಾಲೂಕಿನ ಬೂದಿಕೋಟೆ, ತೂಕಲ್ಲು, ಸೂಲಿಕುಂಟೆ ಹಾಗೂ ಹುನಗುಂದ.ಮಾಲೂರು ತಾಲೂಕಿನ ಕುಪ್ಪಳ್ಳಿ, ತರ್ನಹಳ್ಳಿ, ದೊಡ್ಡಕಡತೂರು, ನಾಗನಾಳ ಹಾಗೂ ಧನಮಟ್ನಹಳ್ಳಿಗಳಲ್ಲಿ ಈ ಘಟ್ಟದ ಅವಶೇಷಗಳು ಪತ್ತೆಯಾಗಿವೆ. ಟೇಕಲ್ ಬೆಟ್ಟದ ಬುಡದಲ್ಲಿ ಶಿಲಾಯುಗದ ಶಿಲಾ ಉಪಕರಣಗಳು ಲಭ್ಯವಾಗಿವೆ.ಅಲ್ಲದೆ ಬರಿಗೈಯಿಂದ ಮಾಡಿದ ಕೈಮಡಕೆಗಳೂ ಅವುಗಳ ಮೇಲೆ ಮಾಡಿದ ಕಾವಿ ಮಣ್ಣಿನ ತೆಳು ಲೇಪನ ಪರಿಕರಗಳು ಹಾಗೂ ಪ್ರಾಣಿಗಳ ಅಸ್ತಿಪಂಜರಗಳು ದೊರೆತಿವೆ. ವಿಸ್ತೃತವಾದ ಕ್ಷೇತ್ರಕಾರ್ಯ ಹಾಗೂ ಉತ್ಖನನಗಳು ಕೈಗೊಂಡರೆ  ಮತ್ತಷ್ಟು ಮಾಹಿತಿಗಳು ದೊರೆಯಬಹುದು.

ಶಿಲಾ-ತಾಮ್ರಯುಗ ಸಂಸ್ಕೃತಿ

           ನೂತನ ಶಿಲಾಯುಗದ ಜೊತೆಜೊತೆಗೆ ವಿಸೃತಗೊಂಡ ಸಾಂಸ್ಕೃತಿಕ ಹಂತವಿದು. ಶಿಲಾಯುಧಗಳ ಬದಲಿಗೆ ಲೋಹದ ಆಯುಧಗಳು ಚಾಲ್ತಿಗೆ ಬಂದ ಘಟ್ಟವಿದು. ನೀಳಚೆಕ್ಕೆ, ಸಣ್ಣ ಮಣ್ಣಿನ ಕುಡಿಕೆಗಳ ಬಳಕೆ ಹಾಗೂ ಸುಧಾರಿತ ಬೇಸಾಯಕ್ರಮಗಳು ಸಂಸ್ಕೃತಿಗೆ ಪ್ರವೇಶ ಪಡೆದವು. ಆದರೆ ಸಂಸ್ಕೃತಿಗೆ ಸಂಬಂಧಿಸಿದ ನೆಲೆಗಳಾವುವು ಈ ಜಿಲ್ಲೆಯಲ್ಲಿ ಪತ್ತೆಯಾಗಿಲ್ಲ. ಆದರೂ ಸಿಂಧೂ ನಾಗರಿಕತೆಗೆ ಸಂಬಂಧಿಸಿದ ಹರಪ್ಪಾ ಮತ್ತು ಮೊಹೆಂಜೋದಾರೋ ಪಟ್ಟಣಗಳಲ್ಲಿ ಲಭ್ಯವಾದ ಚಿನ್ನದ ಪುರಾವಸ್ತುಗಳಲ್ಲಿ ಅಡಕವಾಗಿರುವ ಬೆಳ್ಳಿಯ ಪ್ರಮಾಣವನ್ನು ಆಧರಿಸಿ ಅದನ್ನು ಕೋಲಾರದ ಗಣಿ ಪ್ರದೇಶದಿಂದ ಅಮದು ಮಾಡಿಕೊಂಡಿರಬಹುದು ಎಂದು 1928ರಷ್ಟು ಹಿಂದೆಯೆ ವಿದೇಶಿ ವಿದ್ವಾಂಸ ಸರ್ ಜಾನ್ ಮಾರ್ಷಲ್ ತಕರ್ಿಸಿದ್ದರು. ಆದರೆ ಇದನ್ನು ಪುನರ್ ವಿವೇಚಿಸುವ ಅನಿವಾರ್ಯತೆಯಿದೆ ಎಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ.

ಬೃಹತ್ ಶಿಲಾಯುಗ ಸಂಸ್ಕೃತಿ

         ಮಾನವರು ವಿಭಿನ್ನ ಬಗೆಯ ಸಮಾಧಿಗಳ ನಿಮರ್ಿತಿಗೆ ಬೃಹತ್ ಗಾತ್ರದ ಕಲ್ಲುಗಳನ್ನು ಬಳಸಿದ ಹಂತವಾಗಿದೆ. ಅಲ್ಲದೆ ಕಪ್ಪು, ಕೆಂಪು ಬಣ್ಣದ ಮಡಕೆಗಳನ್ನು ಬಳಸುವುದು ಈ ಸಂಸ್ಕೃತಿಯ ವಿಶೇಷವಾಗಿದೆ  ವಿಸ್ತೃತವಾದ  ಕಬ್ಬಿಣದ ಬಳಕೆ ಚಾಲ್ತಿಯಲ್ಲಿದುದರ ಕಾರಣದಿಂದ 'ಕಬ್ಬಿಣಯುಗ'ವೆಂದು ಕರೆಯುವವರು. ಈಸಂಸ್ಕೃತಿಯು ಕ್ರಿ.ಪೂ. 1500 ರಿಂದ ಕ್ರಿ.ಪೂ. 250ರವರಿಗೆ ಚಾಲ್ತಿಯಲ್ಲಿತ್ತು. ಈ ಕಾಲದ ಜನವಾಸ್ತವ್ಯದ ಸ್ಥಳಗಳನ್ನು 'ನೆಲೆ'ಗಳೆಂದು ಶವಸಂಸ್ಕಾರದ ತಾಣಗಳನ್ನು 'ಗೋರಿ'(ಸಮಾಧಿ)ಗಳೆಂದು ಕರೆಯಲಾಗಿದೆ. ಇಂತಹ ನೆಲೆಗಳು ಕೋಲಾರ ತಾಲೂಕಿನ ಕಜ್ಜಿಕಲ್ಲಹಳ್ಳಿ, ಕಡಗತ್ತೂರು, ಕೆಂದಟ್ಟಿ, ಕೊರಟಿ ಮಲ್ಲಾಂಡ್ಲಹಳ್ಳಿ, ಕೊಂಡರಾಜನಹಳ್ಳಿ, ತಿರುಮಲಕೊಪ್ಪ, ಪಟ್ಣ, ವೆಂಕಟಾಪುರ ಹಾಗೂ ಹಾರೋಹಳ್ಳಿ. ಬಂಗಾರಪೇಟೆ ತಾಲೂಕಿನ ಕದಿರೇನಹಳ್ಳಿ, ಕಿರುಮಂದೆ, ತೊಂಲಕೊಪ್ಪ, ಭಟ್ರಕೊಪ್ಪ, ಮರಗಲ್ಲು, ಬೂದಿಕೋಟೆ, ರಾಮಸಾಗರ, ಸಂತೆಪಲ್ಲಿ ಹಾಗೂ ಹುನಕುಂದ. ಮಾಲೂರು ತಾಲೂಕಿನ ಬನಹಳ್ಳಿ, ದೊಡ್ಡಕಡತೂರು, ನಾಗನಾಳ, ಹೊಗೇರಿ ಹೊಂಗೇನಹಳ್ಳಿ ಹಾಗೂ ಹರಹೊಲ್ಲಿ. ಮುಳಬಾಗಿಲು ತಾಲೂಕಿನ ಆವನಿ, ಶ್ರೀನಿವಾಸಪುರ ತಾಲೂಕಿನ ಹರಳಕುಂಟೆಗಳಲ್ಲಿ ಈ ಘಟ್ಟದ ನೆಲೆಗಳು ಪತ್ತೆಯಾಗಿವೆ.
            ಈ ಸಂಸ್ಕೃತಿಯ ಶಿಲಾಗೋರಿ(ಸಮಾಧಿ)ಮಾದರಿಗಳು ಕೋಲಾರ ತಾಲೂಕಿನ ಉಡಪನಹಳ್ಳಿ, ಗಂಗಾಪುರ, ಚೊಕ್ಕಾಪುರ, ನಂದಂಬಳ್ಳಿ, ಕರುಡುಬಂಡೆಹೊಸಹಳ್ಳಿ, ದೊಡ್ಡವಲ್ಲಬಿ, ಕುರುಗಲ್ಲು, ಕೀಲುಕೋಟೆ, ಕಲ್ಲಹಳ್ಳಿ, ದಿನ್ನೆಹೊಸಹಳ್ಳಿ, ದಿಣ್ಣೇಹಳ್ಳಿ, ದೊಡ್ಡಯ್ಯಾರು, ಚಂಜಮಲೆ, ಜೂಹಳ್ಳಿ, ತೇರಹಳ್ಳಿ, ತ್ಯಾವನಹಳ್ಳಿ, ಪಜರ್ೇನಹಳ್ಳಿ, ಬೆಟ್ಟಕಲ್ಲಹಳ್ಳಿ, ಬಂಡೂರಕೃಷ್ಣಾಪುರ, ಮದ್ದೇರಿ, ಮಲಿಯಪ್ಪನಹಳ್ಳಿ, ವೆಲಗಲಬುರ್ರೆ, ಶೆಟ್ಟಿವಾರಹಳ್ಳಿ, ಸುಂಗೊಂಡಹಳ್ಳಿ, ಹಾಲೇರಿ, ಹುಲಿಕಲ್ಲು, ಹೊಗರಿ, ಹೊಗರಿಗೊಲ್ಲಹಳ್ಳಿ, ಬಳಗೆರೆ ಹಾಗೂ ಚೋಳಘಟ್ಟ. ಬಂಗಾರಪೇಟೆ ತಾಲೂಕಿನ ಅಕಿಂಟ್ಲಗೊಲ್ಲಹಳ್ಳಿ, ಸೂಲಿಕುಂಟೆ, ಮುಗಳಬೆಲೆ, ಮರಗಲ್ಲು, ಕೆಲಮಂಗಲ, ಕರೆಬೆಲೆ, ಅಡಂಪಲ್ಲಿ, ಅಲ್ಲಿಕುಂಟ, ಉಕ್ಕುಂದಿ, ಉಪಾಸಪುರ, ಕನುಮನಹಳ್ಳಿ, ಕನ್ನುಂಬೆಲೆ, ಕುಂದರಸನಹಳ್ಳಿ, ಕೀಲುಕಂಬಳಿ, ಕೊತ್ತೂರು, ಕೋಡಿಹಳ್ಳಿ, ಗೊರವನಹಳ್ಳಿ, ಗುಟ್ಲೂರು, ಚಿಕ್ಕೇನಹಳ್ಳಿ, ಜಂಗಮನಹಳ್ಳಿ, ತಮಟಮಾಕನಹಳ್ಳಿ, ತೋಪನಹಳ್ಳಿ, ದೇಶಿಹಳ್ಳಿ, ಮುಂತಾದವು. ಮಾಲೂರು ತಾಲೂಕಿನ ಹೊಸಹಳ್ಳಿ, ಮಲಿಯಪ್ಪನಹಳ್ಳಿ, ಸೋಮಸಂದ್ರ, ಹನುಮಂತಪುರ ಮುಂತಾದವು.ಮುಳಬಾಗಿಲು ತಾಲೂಕಿನ ಅರಹಳ್ಳಿ, ಜನ್ನನಾಗಾವರ, ಎನ್.ವೆಂಕಟಾಪುರ, ಕಿಳುಹೊಳಲಿ, ಕುರುಬರಹಳ್ಳಿ, ಕೊತ್ತೂರು ಮುಂದಾದವು. ಶ್ರೀನಿವಾಸಪುರ ತಾಲೂಕಿನ ಶ್ರೀನಿವಾಸಪುರ ಹಾಗೂ ಹೊಸಹಳ್ಳಿಗಳಲ್ಲಿ ಪತ್ತೆಯಾಗಿವೆ. ಅಲ್ಲದೆ ಕೋಲಾರ ತಾಲೂಕಿನ ಗರುಡನಹಳ್ಳಿಯ ಬೆಟ್ಟದ ತಪ್ಪಲಿನಲ್ಲಿ ನೂರಕ್ಕೂ ಹೆಚ್ಚು ಕಲ್ಗೋರಿಗಳಿವೆ.
          ಕೆಲವು ಪ್ರದೇಶಗಳಲ್ಲಿ ಸಮಾಧಿಗಳಿಗೆ ಶಿಲಾವೃತ್ತಗಳ ಜೊತೆಗೆ ಕಲ್ಗುಪ್ಪೆ ಸಮಾಧಿಗಳು, ಶವಗುಣಿಗಳು ಕಂಡಿಕೋಣೆ ಕಲ್ಗೋರಿಗಳು ಹಾಗೂ ನಿಲುಸುಗಲ್ಲು ಸಮಾಧಿಗಳು ಪತ್ತೆಯಾಗಿವೆ. ಕೋಲಾರ ತಾಲೂಕಿನ ಅರಾಭಿಕೊತ್ತನೂರು, ಸುಲೂರು, ಕೆಂದಂಟ್ಟಿ ಹಾಗೂ ಕೋಲಾರ. ಬಂಗಾರಪೇಟೆ ತಾಲೂಕಿನ ತೂಕಲ್ಲು ,ತ್ಯಾಪನಹಳ್ಳಿ ,ಮುಂತಾದ ಕಡೆ. ಮಾಲೂರು ತಾಲೂಕಿನ ಅಯ್ಯಪ್ಪನಹಳ್ಳಿ, ಉಪ್ಪಾರಹಳ್ಳಿ ಮುಂತಾದ ಕಡೆಗಳಲ್ಲಿ ಈ ಮಾದರಿಯ ಸಮಾಧಿಗಳನ್ನು ಪುರಾತತ್ವಜ್ಞರು ಪತ್ತೆ ಮಾಡಿದ್ದಾರೆ. ಕೋಲಾರ ತಾಲೂಕಿನ ಕೊತ್ತಪಾಳ್ಯ ಗತ್ತೂರು, ಬಂಗಾರಪೇಟೆ ತಾಲೂಕಿನ ಅಕ್ಷಿತಲಗೊಲ್ಲಹಳ್ಳಿ, ಗಟ್ಟಿಕಾಮದೇನಹಳ್ಳಿ, ಗಾಜಗ, ಗೊದಮಂಡೆ, ಗೊಡುಗುಮಂಡೆ, ನಾಗಕುಪ್ಪ ಮುಂತಾದ ಕಡೆ. ಮಾಲೂರು ತಾಲೂಕಿನ ಮಂಡಕಲ್ಲು, ಓಬಳಾಪುರಗಳಲ್ಲಿ ಹಾಗೂ ಶ್ರೀನಿವಾಸಪುರ ತಾಲೂಕಿನ ರಾಘವಪಲ್ಲಿಗಳಲ್ಲಿ ಈ ಶವಗುಣಿಗಳು ಕಂಡುಬಂದಿವೆ. ಕೋಲಾರ ತಾಲೂಕಿನ ಕೆಂದಟ್ಟಿ, ಗರುಡನಹಳ್ಳಿ ಗುಟ್ಟಿಹಳ್ಳಿ. ಬಂಗಾರಪೇಟೆ ತಾಲೂಕಿನ ಕನ್ನಂಬೆಲೆ, ಗೊಡಗುಮಂಡೆ, ತ್ಯಾಪನಹಳ್ಳಿ. ಮಾಲೂರು ತಾಲೂಕಿನ ಕೃಷ್ಣಾಪುರ ಶ್ರೀಕಂಠಪುರ, ಹಾಲಹಳ್ಳಿ ಮಲಕನಹಳ್ಳಿ ವೀರಕಪುರ, ವೆಂಕಟಾಪುರ ಹಾಗೂ ಮುಳಬಾಗಿಲು ತಾಲೂಕಿನ ಆನೆಗುತ್ತಹಳ್ಳಿಗಳಲ್ಲಿ ಕಂಡಿಕೋಣೆ ಸಮಾಧಿಗಳು ಪತ್ತೆಯಾಗಿವೆ. ಕೋಲಾರ ತಾಲೂಕಿನ ಕೆಂದಟ್ಟಿ, ಗರುಡನಹಳ್ಳಿ, ಬಂಡೂರುಕೃಷ್ಣಾಪುರ ಹಾಗೂ ಸುಲೂರುಗಳಲ್ಲಿ ನಿಲುಸುಗಲ್ಲು ಸಮಾಧಿಗಳು ಕಂಡುಬಂದಿವೆ.
            ಇವು ಅಂದಿನ ಮಾನವನ ಅಂತ್ಯಸಂಸ್ಕಾರದ ರೀತಿನೀತಿಗಳು, ಆಥರ್ಿಕ, ಸಾಮಾಜಿಕ ಹಾಗೂ ಧಾಮರ್ಿಕ ನಂಬಿಕೆ ಆಚರಣೆಗಳನ್ನು ತಿಳಿಯಪಡಿಸುವ ಮುಖ್ಯ ಆಧಾರಗಳಾಗಿವೆ.

ಪ್ರಾಗಿತಿಹಾಸಕಾಲದ ರೇಖಾ ವರ್ಣಚಿತ್ರಗಳು

           ಕೋಲಾರ ಜಿಲ್ಲೆ ,ಶ್ರೀನಿವಾಸಪುರ ತಾಲೂಕಿನ ಜಿಂಕಲವಾರಪಲ್ಲಿ ಬಳಿಯ, ಸುಣ್ಣಕಲ್ಲು ಬೆಟ್ಟಗಳಲ್ಲಿನ 'ದ್ಯಾವರಕೊಂಡ' (ಚಿತ್ತಾರಾಲಗುಟ್ಟು)ಎಂದು ಕರೆಯಲ್ಪಡುವ ಬೆಟ್ಟದಲ್ಲಿ ಕೆಲವು ನೈಸಗರ್ಿಕ ಗುಹೆಗಳಿವೆ. ಆ ಗುಹೆಗಳಲ್ಲಿ ಕೆಂಪು ಹಾಗೂ ಬಿಳಿಯ ವರ್ಣದಲ್ಲಿ ಗುಹೆಯ ಮೇಲ್ಚಾವಣಿಗೆ ಕೆಲವು ರೇಖಾಚಿತ್ರಗಳನ್ನು ಬಿಡಿಸಲಾಗಿದೆ.  ಸುಮಾರು ನಲವತ್ತು ವರ್ಷಗಳ ಹಿಂದೆ ಕೃಷ್ಣಾನಂದ ಕಾಮತ್, ಬಿ.ಜಿ.ಎಲ್.ಸ್ವಾಮಿ ಹಾಗೂ ಡಾ.ಆರ್.ಶೇಷಶಾಸ್ತ್ರಿ ಅವರಗಳು ಭೇಟಿ ನೀಡಿ ಪರಿಶೀಲಿಸಿದ್ದವೆಂದು, ಅವು ಇತಿಹಾಸ ಪೂರ್ವಕಾಲದವವೆಂದು ಶಾಸನತಜ್ಞರಾದ ಡಾ.ಆರ್.ಶೇಷಶಾಸ್ತ್ರಿಗಳು ಅಭಿಪ್ರಾಯಪಡುತ್ತಾರೆ. ಇವು ಕಾಲಗರ್ಭದಲ್ಲಿ ಕಳೆದು ಹೋಗುವ ಮುನ್ನ ಇತಿಹಾಸತಜ್ಞರು ಹಾಗೂ ಪುರಾತತ್ವ ಇಲಾಖೆ ಇದರ ಕಡೆ ಗಮನ ಹರಿಸಿ ಪರಿಶೀಲಿಸಿದರೆ ಮತ್ತಷ್ಟು ವಿಶೇಷ ಮಾಹಿತಿಗಳು ಹೊರಬರಬಹುದು.
                                       

ಇತಿಹಾಸ ಆರಂಭಕಾಲ

         ಇತಿಹಾಸಪೂರ್ವಕಾಲ ಹಾಗೂ ಇತಿಹಾಸ ಕಾಲಗಳ ನಡುವಿನ ಸಂಕ್ರಮಣ ಕಾಲದ ಈ ಘಟ್ಟವನ್ನು 1954ರ ತನಕ 'ಆಂಧ್ರಸಂಸ್ಕೃತಿ',ಶಾತವಾಹನ ಕಾಲ' ಎಂದು ಕರೆಯಲಾಗುತ್ತಿತ್ತು. ಆದಿ ಮಾನವ ಅಲೆಮಾರಿ ಬದುಕನ್ನು ಬಿಟ್ಟು ಗ್ರಾಮೀಣ ಬದುಕಿಗೆ ಬದ್ಧನಾಗಿ ಅಕ್ಷರಕಲೆಯಲ್ಲಿ ದಾಪುಗಾಲು ಹಾಕುತ್ತಿದ್ದ. ಸುಟ್ಟ ಮಡಕೆಗಳು, ಅವುಗಳ ಮೇಲೆ ಕಲಾತ್ಮಕ ಚಿತ್ತಾರಗಳನ್ನು ಬಿಡಿಸುವ ಕಲೆಯಲ್ಲಿ ಪಳಗಿದ್ದ. ಇಟ್ಟಿಗೆಯಿಂದ ಕಟ್ಟಿದ ಕಟ್ಟಡಗಳು ಈ ಘಟ್ಟದ ಮುಖ್ಯ ವಿಶೇಷಗಳಾಗಿವೆ. ಅಂತಹ ಅವಶೇಷಗಳು ಕನರ್ಾಟಕದಾಂದ್ಯಂತ ಕಂಡುಬರುತ್ತವೆ.
        ಈ ಘಟ್ಟದ ಹಲವಾರು ನೆಲೆಗಳು ಕೋಲಾರ ಜಿಲ್ಲೆಯಲ್ಲೂ ಕಂಡು ಬಂದಿವೆ. ಕೋಲಾರ ತಾಲೂಕಿನ ಉರಟ ಅಗ್ರಹಾರ ಹಾಗೂ ಗುಟ್ಟಹಳ್ಳಿ. ಮಾಲೂರು ತಾಲೂಕಿನ ದಿಂಬ, ಬನಹಳ್ಳಿ, ಧನಮತ್ತನಹಳ್ಳಿ, ರೆಪ್ಪರಹಳ್ಳಿ, ಬೂದಿಹಳ್ಳಿ ಹಾಗೂ ಶಿವಾರಪಟ್ಟಣ, ಮುಳಬಾಗಿಲು ತಾಲೂಕಿನ ಅಂಟ್ಲಕಲ್ಲು, ಉಪ್ಪಾರಹಳ್ಳಿ, ಚೀಕೂರು, ತಾವರೆಕೆರೆ, ನಂಗಲಿ, ಬುಡಿದೇರು ಹಾಗೂ ಮುದಿಗೆರೆ. ಶ್ರೀನಿವಾಸಪುರ ತಾಲೂಕಿನ ಹರಳಕುಂಟೆ ಮುಂತಾದ ಕಡೆಗಳಲ್ಲಿ ಪತ್ತೆಯಾಗಿವೆ. ಇವುಗಳಲ್ಲಿ ಹೆಚ್ಚಿನವು ವಸತಿನೆಲೆಗಳೆಂದು ಗುತರ್ಿಸಲಾಗಿದೆ. ಈ ನೆಲೆಗಳಲ್ಲಿ ಕೆಂಪು ಹಾಗೂ ಕಂದು ಬಣ್ಣದ ಚೂರುಗಳು ಮಾತ್ರ ಪತ್ತೆಯಾಗಿವೆ. ಆದರೆ ಜಿಲ್ಲೆಯಲ್ಲಿ ಇದುವರೆಗೂ ಪತ್ತೆಯಾಗಿರುವಂತವು ಬರಿ ಸ್ವತಂತ್ರ ನೆಲೆಗಳಾಗಿರುವುದು ಗಮನಾರ್ಹ.
                                     

ಚಾರಿತ್ರಿಕ ಹಿನ್ನೆಲೆ

     ಕೋಲಾರ ಜಿಲ್ಲೆಯ ಮುಳಬಾಗಿಲು  ತಾಲ್ಲೂಕು ಮೊದಲು ಬಾಣರ ಆಡಳಿತಕ್ಕೆ ಸೇರಿತ್ತು. 10ನೆಯ ಶತಮಾನದ ಕೊನೆಯಲ್ಲಿ ಪಲ್ಲವರ ಕೈಸೇರಿತು. ಉತ್ತರದಲ್ಲಿ ವೈಡುಂಬರರು ಆಳುತ್ತಿದ್ದರು. ಮುಂದೆ ಕೋಲಾರದ ಒಂದು ಭಾಗವಾಗಿ ವಿಜಯನಗರದ ಆಡಳಿತಕ್ಕೆ ಸೇರಿತು. ಲಕ್ಕಣ್ಣಡಣ್ಣಾಯಕ ಮತ್ತು ಮಾದನ್ನದಣ್ಣಾಯಕ ಎಂಬವರು ಇಲ್ಲಿ ಆಳುತ್ತಿದ್ದು ಮುಂದೆ ಹೊಸಕೋಟೆಯ ತಿಮ್ಮೇಗೌಡನ ಆಡಳಿತಕ್ಕೆ ಒಳಪಟ್ಟಿತು. 1768ರಲ್ಲಿ ಕರ್ನಲ್ ಕ್ಯಾಂಪ್ಬೆಲ್ ಇದನ್ನು ಇಂಗ್ಲೀಷರ ಆಡಳಿತಕ್ಕೆ ಸೇರಿಸಿದ.
              ಕೋಲಾರ ಜಿಲ್ಲೆಯು ವಿಜಯನಗರದ ಪತನಾನಂತರ ಸಥಳೀಯ ಸಾಮಂತರು. ಪಾಳೇಗಾರರೂ ಆಗಿದ್ದ ತಾಡಿಗೋಳ್ಳು, ಆವತಿ, ಸಾದಲಿ, ಹೊಸಕೋಟೆ, ಚಿಕ್ಕಬಳ್ಳಾಪುರ, ದೇವನಹಳ್ಳಿ, ಸುಗುಟೂರು, ಗುಮ್ಮನಾಯಕನಪಾಳ್ಯ.ಮುಳಬಾಗಿಲು ತಾಲೂಕಿನ ಹರಪನಾಯಕನಹಳ್ಳಿ ಮುಂತಾದ ಪಾಳೆಪಟ್ಟುಗಳು ಜಿಲ್ಲೆಯ ಬಹುಭಾಗವನ್ನು ಆಳಿದವು. ಇವರ ಆಡಳಿತದ ಸಮಯದಲ್ಲಿ ಹಲವಾರು ಕೆರಕಟ್ಟೆಗಳು ನಿಮರ್ಾಣಗೊಂಡ ಬಗ್ಗೆ ಶಾಸನಗಳು ಮಾಹಿತಿಯನ್ನು ಒದಗಿಸುತ್ತವೆ.ಬಿಜಾಪುರ ಆದಿಲ್ ಷಾಹಿಗಳ ಆಡಳಿತಕ್ಕೆ ಒಳಪಡುವ ಮೂಲಕ ಮರಾಠರ ಪ್ರಭಾವಕ್ಕೂ ನಂತರ ಮುಘಲ್ರ ಅದಿಪಥಯಕ್ಕೂ ಒಳಗಾಯಿತು. ಮೈಸೂರು ಅರಸರು ಹಾಗೂ ಹೈದರಾಲಿ-ಟಿಪ್ಪು ಸುಲ್ತಾನರ ಹಿಡಿತಕ್ಕೂ ಸಿಕ್ಕಿತ್ತು. ಅಲ್ಪಕಾಲ ಮೂಳಬಾಗಿಲು ತಾಲೂಕಿನ ಹರಪನಟಯಕನಹಳ್ಳಿ ಬೀಸ್ಸೇಗೌಡ ಹಾಗೂ ಅವರ ಸಂತತಿಯವರು ಈ ಜಿಲ್ಲೆಯ ಅಧಿಪತ್ಯವನ್ನು ವಹಿಸಿದ್ದರು. ಓಪ್ಪಿವಿನ ಪತನಾನಂತರ ಮದ್ರಾಸ್ ಪ್ರೆಸ್ಸಿಡೆನ್ಸಿ ನಿದರ್ೇಶನದ ಪ್ರಕಾರ ಮದ್ರಾಸ್, ಮೈಸೂರು ಹಾಗೂ ಮಲಬಾರ್ ಪ್ರವಾಸವನ್ನು ಕೈಗೊಂಡ ಬುಕನಾನ್ ತನ್ನ ಪ್ರವಾಸಿ ಕಥನದಲ್ಲಿ  ಕೋಲಾರ ಪರಿಸರದ ಬಗ್ಗೆ  ಮಹತ್ವದ ಮಾಹಿಯನ್ನು ನೀಡಿದ್ದಾನೆ. ಟಿಪ್ಪಿವಿನ ಮರಣಾನಂತರ ಮೈಸೂರು ಅರಸರು ಹಾಗೂ ಕಮೀಷನರುಗಳ ಅವಧಿಯಲ್ಲಿ ಇನಾಂದಾರ್, ಜೋಡಿದಾರ್ ಹಾಗೂ ಜಹಗೀರ್ದಾರ್ಗಳ ಸ್ಥಳೀಯ ಆಡಳಿತವನ್ನು ನಡೆಸಿದರು.
                                        
                                                                                     ಸ್ವಾತಂತ್ರ್ಯ ಹೋರಾಟಕ್ಕೆ ಕೋಲಾರ ಜಿಲ್ಲೆ ತನ್ನದೆ ಕೊಡುಗೆಯನ್ನು ನೀಡಿದೆ. ರಾಷ್ಟ್ರಪಿತ ಮಾಹಾತ್ಮಗಾಂದೀಜೀಯವರು ಕೋಲಾರಕ್ಕೆ ಬಂದು ಸ್ವಾತಂತ್ರ್ಯದ ಆಂದೋಲನದ ಕಾವನ್ನು ಹೆಚ್ಚಿಸಿದ್ದರು ಅಲ್ಲದೆ ಹರಿಜನನಿಧಿಯನ್ನು ಸಂಗ್ರಹಿಸಿದ್ದರು. 'ಜವಾಬ್ದಾರಿ ಸಕರ್ಾರ ರಚನೆ'ಗಾಗಿ ಜರಿಗಿದ 'ಮೈಸೂರು ಚಲೋ'ದ ಮುಂದಾಳತ್ವವನ್ನು ವಹಿಸಿದವರೂ ಕೆ.ಚಿ.ರೆಡ್ಡಿ, ಕೆ.ಪಟ್ಟಾಬಿರಾಮನ್, ಟಿ.ರಾಮಾಚಾರ್, ಕೆ.ಸಂಪಂಗಿರಾಮಯ್ಯ, ಎನ್.ಚಿ.ನಾಗಯ್ಯರೆಡ್ಡಿ, ಎನ್.ಚಿ.ತಿಪ್ಪಾರೆಡ್ಡಿ, ಎಂವಿ.ಕೃಷ್ಣಪ್ಪ, ಟಿ.ಚೆನ್ನಯ್ಯ ಮುಂತಾದವರು ಸ್ವಾತಂತ್ರ್ಯ ಆಂದೋಲನದಲ್ಲಿ ಭಾಗವಹಿಸುವಹಿಸಿದರು. ಭಾರತದ ಗಣರಾಜ್ಯದಲ್ಲಿ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿಗಳೂ ಆಗಿ ಅಧಿಕಾರ ವಹಿಸಿಕೊಂಡ ಕೆ.ಚೆಂಗಲರಾಯರೆಡ್ಡಿಯವರು ಕೋಲಾರ ಜಿಲ್ಲೆಯ ಕ್ಯಾಸಂಬಳ್ಳಿಯವರು.-ಹೀಗೆ ನಾಡಿನ ಸಂಸ್ಕೃತಿಗೆ ಕೋಲಾರ ಜಿಲ್ಲೆ ಇತಿಹಾಸ ಪೂರ್ವ ಕಾಲದಿಂದ ಏಕೀಕೃತ ಕನರ್ಾಟಕ ರೂಪ ಪಡೆಯವ ತನಕ ತನ್ನದೆ ಅನುಪಮ ಕೊಡುಗೆಯನ್ನು ನೀಡಿದೆ.

ಸಾರಿಗೆ ಸಂಪರ್ಕ ಮತ್ತು ವ್ಯಾಪಾರ ಮತ್ತು ವಾಣಿಜ್ಯ

   ಕೋಲಾರ ಜಿಲ್ಲೆಯಲ್ಲಿ ರಸ್ತೆ ಸಂಪರ್ಕ ಚೆನ್ನಾಗಿ ಬೆಳೆದಿದೆ. ರಾಷ್ಟೀಯ ಹೆದ್ದಾರಿ ನಂ. 4 ಮತ್ತು 7 ಮತ್ತು ರಾಜ್ಯ ಹೆದ್ದಾರಿಗಳು ಇಲ್ಲಿ ಹಾದು ನೆರೆರಾಜ್ಯಗಳಿಗೆ ಸಂಪರ್ಕ ಕಲ್ಪಿಸಿವೆ. ಪ್ರತಿ ಹಳ್ಳಿಗೂ ತಾಲ್ಲೂಕಿಗೂ ಜಾಲದಂತೆ ರಸ್ತೆ ಮಾರ್ಗಗಳು ಹೆಣೆದುಕೊಂಡಿವೆ. ಸಕರ್ಾರಿ ಮತ್ತು ಖಾಸಗಿ ಬಸ್ಸುಗಳೂ ಕಾರುಗಳೂ ಬಂಡಿಗಳೂ ಜನರನ್ನೂ ಸರಕುಗಳನ್ನೂ ಒಂದೆಡೆಯಿಂದ ಇನ್ನೊಂದೆಡೆಗೆ ಸುಲಭವಾಗಿ ಸಾಗಿಸುತ್ತವೆ. ಹಿಂದೂಪುರ - ಬೆಂಗಳೂರು ರೈಲುಮಾರ್ಗ ಗೌರಿಬಿದನೂರು ಮೂಲಕವೂ ಚೆನ್ನೈ - ಬೆಂಗಳೂರು ರೈಲುಮಾರ್ಗ ಬಂಗಾರಪೇಟೆಯ ಮೂಲಕವೂ ಸಾಗುತ್ತವೆ. ಇನ್ನೊಂದು ರೈಲುಮಾರ್ಗ ಬೆಂಗಳೂರಿನಿಂದ ನಂದಿ, ಚಿಕ್ಕಬಳ್ಳಾಪುರ, ಚಿಂತಾಮಣಿ, ಶಿಡ್ಲಘಟ್ಟ, ಕೋಲಾರಗಳ ಮೂಲಕ ಬಂಗಾರ ಪೇಟೆಗೆ ಸಾಗುತ್ತದೆ. ಬಂಗಾರಪೇಟೆಯಿಂದ ಚಿನ್ನದ ಗಣಿ ಪ್ರದೇಶಕ್ಕೆ ರೈಲ್ವೆ ಸಂಪರ್ಕವುಂಟು
    ಇಲ್ಲಿ ಉಕ್ಕಿನ ಪೀಠೋಪಕರಣ ಮತ್ತು ಕೈಮಗ್ಗದ ಬಟ್ಟೆ ತಯಾರಿಸುತ್ತಾರೆ. ಕೈಗಾರಿಕಾ ಸಹಕಾರ ಸಂಘಗಳು ನಿಯಂತ್ರಿತ ಮಾರುಕಟ್ಟೆ ಮತ್ತು ವಾಣಿಜ್ಯ ಬ್ಯಾಂಕುಗಳಿವೆ. ಅಂಚೆ, ತಂತಿ, ವಿದ್ಯುತ್ ಸೌಲಭ್ಯಗಳು, ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಗ್ರಾಮಮಟ್ಟದ ಔಷಧಾಲಯಗಳು ಹಾಗೂ ಕೆಲವು ಆಯುವರ್ೇದ ಮತ್ತು ಯುನಾನಿ ಔಷಧಾಲಯಗಳು ಇವೆ.


ಧಾಮರ್ಿಕ ಹಿನ್ನೆಲೆ:
ಪ್ರೇಕ್ಷಣೀಯ ಸ್ಥಳಗಳು      ಪ್ರಾಚೀನ ಕಾಲದಲ್ಲಿ ನಡೆದ ಮಹತ್ತಾದ ಪೂಣರ್ಾಹುತಿಯ ಪರಿಣಾಮವಾಗಿ ಈ ಸ್ಥಳಕ್ಕೆ ಬೂದಿ ಕೋಟೆ (ಸಂಸ್ಕೃತದಲ್ಲಿ ವಿಭೂತಿಪುರ) ಎಂದು ಹೆಸರು ಬಂದಿರಬಹುದೆಂದು ಊಹಿಸಲಾಗಿದೆ. ಇಲ್ಲಿ 8ನೆಯ ಶತಮಾನದ ಬಾಣರ ಶಾಸನವಿದೆ. 17ನೆಯ ಶತಮಾನದಲ್ಲಿ ಇದು ಶಿರಾದ ಸುಭೇದಾರನ ಕೆಳಗೆ ಪೌಜುದಾರನಾಗಿ ನೇಮಕಗೊಂಡಿದ್ದ ಫತೆ ಮಹಮ್ಮದನ ಜಹಗೀರಿಯಾಗಿತ್ತು. ಅವನ ಮಗ ಹೈದರ್ ಆಲಿ ಜನಿಸಿದ್ದು ಇಲ್ಲಿಯೇ. ಗ್ರಾಮದಲ್ಲಿ ಶಿಥಿಲವಾದ ಕೋಟೆಯ ಅವಶೇಷಗಳಿವೆ. ಕೋಟೆಯ ಒಳಭಾಗದಲ್ಲಿ ವೇಣುಗೋಪಾಲಸ್ವಾಮಿಯ ದೇವಾಲಯವೂ ಹೊರಭಾಗದಲ್ಲಿ ವೆಂಕಟೇಶ್ವರ ದೇವಾಲಯವೂ ಇವೆ. ಊರಿನ ವಾಯುವ್ಯಕ್ಕೆ ಸುಮಾರು 1.5 ಕಿ.ಮೀ. ದೂರದಲ್ಲಿ ಸೋಮೇಶ್ವರ ದೇವಾಲಯವಿದೆ.
 ಬೆಂಗಳೂರು-ಕಡಪ ಪ್ರಾಂತೀಯ ಹೆದ್ದಾರಿ ಈ ತಾಲ್ಲೂಕಿನ ಮೂಲಕ ಹಾದುಹೋಗುತ್ತದೆ. ಕೋಲಾರ-ಚಿಕ್ಕಬಳ್ಳಾಪುರ ರೈಲು ಮಾರ್ಗ ಶ್ರೀನಿವಾಸಪುರ ಮುಖಾಂತರ ಹಾದುಹೋಗುವುದು. ಈ ತಾಲ್ಲೂಕಿನ ಪ್ರೇಕ್ಷಣೀಯ ಸ್ಥಳಗಳಲ್ಲಿ ಶ್ರೀನಿವಾಸಪುರದ ದಕ್ಷಿಣಕ್ಕೆ 5 ಕಿ.ಮೀ. ದೂರದಲ್ಲಿರುವ ಹೆಬ್ಬೆಟ್ಟ ಒಂದು. ಇಲ್ಲಿ ಗಂಗರ ದೊರೆ ಮಾರಸಿಂಹನ ಕಾಲದ (10ನೆಯ ಶತಮಾನ) ಯಂತ್ರದ ಕಲ್ಲು (ಗೋಕಲ್ಲು) ಇದ್ದು ಇದನ್ನು ತೊಳೆದ ನೀರು ಪಶುಗಳಿಗೆ ಔಷಧವಾಗಿ ರೋಗಗಳನ್ನು ಗುಣಪಡಿಸುತ್ತದೆಂಬ ನಂಬಿಕೆಯಿದೆ.
       ಶ್ರೀನಿವಾಸಪುರ ಈ ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಪಟ್ಟಣ. ಕೋಲಾರದ ಈಶಾನ್ಯಕ್ಕೆ 24 ಕಿ.ಮೀ. ದೂರದಲ್ಲಿದೆ. ಜನಸಂಖ್ಯೆ 22,926. ಪಾಪನಪಲ್ಲಿ ಈ ಊರಿಗಿದ್ದ ಹಿಂದಿನ ಹೆಸರು. ದಿವಾನ್ ಪೂರ್ಣಯ್ಯನವರು ತಿರುಪತಿಯಿಂದ ಹಿಂದಿರುಗುತ್ತ ಈ ಊರಿಗೆ ಬಂದು, ತಮ್ಮ ಮಗ ಶ್ರೀನಿವಾಸಮೂತರ್ಿಗಳ ಹೆಸರಿನಲ್ಲಿ ಇದಕ್ಕೆ ಶ್ರೀನಿವಾಸಪುರವೆಂದು ನಾಮಕರಣ ಮಾಡಿದರು. ಈ ಊರಿನ ಪೂರ್ವಕ್ಕೆ ಸು. 3 ಕಿ.ಮೀ. ದೂರದಲ್ಲಿ ಹರಳುಕೋಟೆ ಎಂಬ ಪುರಾತನ ಪಟ್ಟಣವಿತ್ತೆಂದು ಪ್ರತೀತಿ. ಬಾಣರಸ, ವಿಕ್ರಮಾದಿತ್ಯ ಮತ್ತು ಪಲ್ಲವ-ಇವರಿಗೆ ಸಂಬಂಧಿಸಿದ ಶಾಸನಗಳು ಈ ಊರಿನಲ್ಲಿ ದೊರೆತಿವೆ.
            ಮಾಲೂರು ತಾಲ್ಲೂಕಿನ ಮುಖ್ಯ ಸ್ಥಳಗಳಲ್ಲಿ ಚಿಕ್ಕತಿರುಪತಿ ಒಂದು ಪುಣ್ಯಕ್ಷೇತ್ರ. ಮಡಿವಾಳ ಗ್ರಾಮದಲ್ಲಿ ಚೋಳರ ಕಾಲದ ಗಂಗಾಧರೇಶ್ವರ ದೇವಾಲಯವಿದೆ. ಮಾಲೂರಿನ ಉತ್ತರಕ್ಕಿರುವ ತೋರಣಹಳ್ಳಿಯಲ್ಲಿ ದನಗಳಿಗೆ ಬರುವ ಚಪ್ಪೆಜಾಡ್ಯವನ್ನು ವಾಸಿಮಾಡುವ ದೇವರೆಂಬ ನಂಬಿಕೆಯುಳ್ಳ ಸಪ್ಪಲಮ್ಮನ ದೇವಾಲಯವಿದೆ. ಇಲ್ಲಿ ಪ್ರತಿವರ್ಷ ಪುಷ್ಯಮಾಸದಲ್ಲಿ ದನಗಳ ಜಾತ್ರೆ ನಡೆಯುತ್ತದೆ. ಶಿವಾರಪಟ್ಟಣದಲ್ಲಿ ಗಂಗದೊರೆ ಶ್ರೀಪುರುಷನ ಕಾಲದ ಶಿಲಾಶಾಸನಗಳಿವೆ. ಚಿಕ್ಕಕಡತೂರಿನಲ್ಲಿ ಪ್ರಾಚೀನ ಕಾಲದ ವೀರರ ಗುಡಿಗಳಿವೆ. ಟೇಕಲ್ ಪವಿತ್ರ ಸ್ಥಳ. ಮಾಸ್ತಿ ಹೋಬಳಿ ಕೇಂದ್ರ ಮತ್ತು ದೊಡ್ಡ ಗ್ರಾಮ. ಈ ತಾಲ್ಲೂಕಿನ ವಿರೂಪಾಕ್ಷಪುರದಲ್ಲಿ ವಿಜಯನಗರದ ದೊರೆ ಎರಡನೆಯ ದೇವರಾಯನ ಕಾಲದ ವಿರೂಪಾಕ್ಷ ದೇವಾಲಯವಿದೆ.
           ವಕ್ಕಲೇರಿ ಬೆಟ್ಟದಲ್ಲಿರುವ ಮಾರ್ಕಂಡೇಶ್ವರ ದೇವಾಲಯಕ್ಕೆ ಮಲ್ಲಿಗೆ ಹೂವನ್ನು ಮಾಲೂರಿನ ತೋಟಗಳಿಂದ ಕಳುಹಿಸುತ್ತಿದ್ದುದರಿಂದ ಈ ಊರಿಗೆ ಹಿಂದೆ ಮಲ್ಲಿಕಾಪುರ ಅಥವಾ ಮಲ್ಲಿಗೆಪಟ್ಟಣವೆಂಬ ಹೆಸರಿತ್ತು ಎನ್ನಲಾಗಿದೆ. ಈ ಊರು 16ನೆಯ ಶತಮಾನದಲ್ಲಿ ಹೊಸಕೋಟೆಯ ನಾಯಕ ತಿಮ್ಮೇಗೌಡನ ಅಧೀನದಲ್ಲಿದ್ದು ಅನಂತರ ಬಿಜಾಪುರದ ಆಡಳಿತಕ್ಕೆ ಸೇರಿದ್ದು ಹಲವು ಮನ್ಸಬ್ದಾರರಿಗೆ ಜಹಗೀರಿಯಾಗಿ ನೀಡಲಾಗಿತ್ತು. ಮರಾಠರ ಕೈವಶವಾದ ಈ ಊರನ್ನು ರಜಪೂತ ಜಮೀನ್ದಾರ ಹ್ರಿದರಾಮ್ಸಿಂಗ್ ತನ್ನ ವಶಪಡಿಸಿಕೊಂಡು ವಿಸ್ತರಿಸಿ ಊರಿಗೆ ಮಾಲೂರು ಎಂದು ಹೆಸರಿಸಿದ. ಹೈದರ್ ಆಕ್ರಮಿಸಿಕೊಳ್ಳುವ ತನಕ ಈ ಊರನ್ನು ಹ್ರಿದರಾಮ್ ಸಿಂಗನ ವಂಶಜರೇ ಆಳುತ್ತಿದ್ದರು. ಶಂಕರನಾರಾಯಣಸ್ವಾಮಿ, ಧರ್ಮರಾಯಸ್ವಾಮಿ, ಬೀರೇಶ್ವರಸ್ವಾಮಿ ಮತ್ತು ಕೋದಂಡರಾಮಸ್ವಾಮಿ ದೇವಾಲಯಗಳು ಇಲ್ಲಿಯ ಪ್ರಮುಖ ಗುಡಿಗಳು. ಕೋದಂಡರಾಮಸ್ವಾಮಿ ದೇವಾಲಯದ ಮುಂಭಾಗದಲ್ಲಿ ಒಂದು ದೊಡ್ಡ ಪುಷ್ಕರಿಣಿ ಇದೆ. ಫಾಲ್ಗುಣಮಾಸದಲ್ಲಿ ಶಂಕರನಾರಾಯಣಸ್ವಾಮಿಗೆ ಏಳು ದಿನಗಳು ವಿಶೇಷ ಪೂಜೆ ಮತ್ತು ರಥೋತ್ಸವ ನಡೆಯುತ್ತದೆ. ಚೈತ್ರಮಾಸದಲ್ಲಿ ಈ ಊರಿನಲ್ಲಿ ನಡೆಯುವ ಧರ್ಮರಾಯಸ್ವಾಮಿ ಕರಗ ಪ್ರಸಿದ್ಧ.
           ಬಂಗಾರಪೇಟೆ ತಾಲೂಕಿನ ಪ್ರಾಚೀನ ಕಾಲದಲ್ಲಿ ನಡೆದ ಮಹತ್ತಾದ ಪೂಣರ್ಾಹುತಿಯ ಪರಿಣಾಮವಾಗಿ ಈ ಸ್ಥಳಕ್ಕೆ ಬೂದಿ ಕೋಟೆ (ಸಂಸ್ಕೃತದಲ್ಲಿ ವಿಭೂತಿಪುರ) ಎಂದು ಹೆಸರು ಬಂದಿರಬಹುದೆಂದು ಊಹಿಸಲಾಗಿದೆ. ಇಲ್ಲಿ 8ನೆಯ ಶತಮಾನದ ಬಾಣರ ಶಾಸನವಿದೆ. 17ನೆಯ ಶತಮಾನದಲ್ಲಿ ಇದು ಶಿರಾದ ಸುಭೇದಾರನ ಕೆಳಗೆ ಪೌಜುದಾರನಾಗಿ ನೇಮಕಗೊಂಡಿದ್ದ ಫತೆ ಮಹಮ್ಮದನ ಜಹಗೀರಿಯಾಗಿತ್ತು. ಅವನ ಮಗ ಹೈದರ್ ಆಲಿ ಜನಿಸಿದ್ದು ಇಲ್ಲಿಯೇ. ಗ್ರಾಮದಲ್ಲಿ ಶಿಥಿಲವಾದ ಕೋಟೆಯ ಅವಶೇಷಗಳಿವೆ. ಕೋಟೆಯ ಒಳಭಾಗದಲ್ಲಿ ವೇಣುಗೋಪಾಲಸ್ವಾಮಿಯ ದೇವಾಲಯವೂ ಹೊರಭಾಗದಲ್ಲಿ ವೆಂಕಟೇಶ್ವರ ದೇವಾಲಯವೂ ಇವೆ. ಊರಿನ ವಾಯುವ್ಯಕ್ಕೆ ಸುಮಾರು 1.5 ಕಿ.ಮೀ. ದೂರದಲ್ಲಿ ಸೋಮೇಶ್ವರ ದೇವಾಲಯವಿದೆ.
                                           
            ಬೇತಮಂಗಲ, ಬೂದಿಕೋಟೆ, ಹುನಕುಂದ ಇವು ತಾಲ್ಲೂಕಿನ ಐತಿಹಾಸಿಕ ಮತ್ತು ಪುರಾತನ ಸ್ಥಳಗಳು. ಬೇತಮಂಗಲ ಕೋಲಾರಕ್ಕೆ 29 ಕಿಮೀ. ದಕ್ಷಿಣದಲ್ಲಿ ಪಾಲಾರ್ ನದಿಯ ಬಲದಂಡೆಯ ಮೇಲಿದೆ. ಇದೊಂದು ಪ್ರವಾಸಿ ಕೇಂದ್ರ. ಇಲ್ಲಿರುವ ದೊಡ್ಡ ಕೆರೆಯ ಮೇಲೆ ದೋಣಿ ವಿಹಾರ ಸೌಕರ್ಯವಿದೆ. 1864ರವರೆಗೆ ಈ ಊರೇ ತಾಲ್ಲೂಕಿನ ಮುಖ್ಯಸ್ಥಳವಾಗಿತ್ತು. ಬಂಗಾರಪೇಟೆ-ಮುಳಬಾಗಿಲು ರಸ್ತೆ ಈ ಊರಿನ ಮೂಲಕ ಸಾಗುತ್ತದೆ. ಬಾಣ ದೊರೆ ಬಹುಶಃ ಸ್ಥಾಪಿಸಿದ ವಿಜಯಾದಿತ್ಯಮಂಗಲವೇ ಬೇತಮಂಗಲವಾಗಿದೆಯೆನ್ನಲಾಗಿದೆ. ನೊಳಂಬರ ಕಾಲದ ಎರಡು ಶಿಲಾಶಾಸನಗಳು ಇಲ್ಲಿಯ ಗಂಗಮ್ಮ ದೇವಾಲಯದಲ್ಲಿವೆ. ಇಲ್ಲಿರುವ ಕೆರೆ ಯಾವಾಗ ನಿಮರ್ಾಣವಾಯಿತೆಂಬುದು ಗೊತ್ತಿಲ್ಲ. ಇರಿವ ನೊಳಂಬ 950ರಲ್ಲಿ ಇದನ್ನು ದುರಸ್ತು ಮಾಡಿಸಿದ. ಕೋಲಾರ ಚಿನ್ನದ ಗಣಿಗೆ ಇಲ್ಲಿಂದ ನೀರು ಪೂರೈಕೆಯಾಗುತ್ತದೆ. ವಿಜಯೇಂದ್ರ ದೇವಾಲಯ ಇಲ್ಲಿಯ ಪ್ರಮುಖ ದೇವಸ್ಥಾನ. ಬೂದಿಕೋಟೆ ಬಂಗಾರಪೇಟೆಗೆ 13 ಕಿಮೀ. ದಕ್ಷಿಣದಲ್ಲಿದೆ. ಇದು ಮಾರ್ಕಂಡೇಯ ನದಿಯ ಎರಡು ಕವಲುಗಳ ನಡುವೆ ಇದೆ. ಇದೊಂದು ಹೋಬಳಿ ಕೇಂದ್ರ. ಸಂಸ್ಕೃತದ ವಿಭೂತಿಪುರ ಎಂಬುದು ಬೂದಿಕೋಟೆ ಎಂದಾಗಿದೆಯೆನ್ನಲಾಗಿದೆ. ಇಲ್ಲಿ 8ನೆಯ ಶತಮಾನದ ಬಾಣನ ಶಾಸನವಿದೆ. ಇದು ಹೈದರ್ ಅಲಿಯ ಜನ್ಮಸ್ಥಳ. ಹೈದರನ ತಂದೆ ಫತೆ ಮಹಮ್ಮದನಿಗೆ ಇದು ಜಹಗೀರಾಗಿತ್ತು. ಶಿರಾದ ಸುಬೇದಾರನಿಂದ ಘೌಜುದಾರನಾಗಿ ನೇಮಕಗೊಂಡಾಗ ಅವನಿಗೆ ಈ ಜಹಗೀರನ್ನು ನೀಡಲಾಗಿತ್ತು. ಕೋಟೆಯೊಳಗೆ ಒಂದು ತಿಳಿನೀರಿನ ತೊರೆಯಿದೆ. ಇಲ್ಲಿ ವೆಂಕಟರಮಣ ಮತ್ತು ಸೋಮೇಶ್ವರ ದೇವಾಲಯಗಳಿವೆ. ಬಂಗಾರಪೇಟೆಗೆ 13 ಕಿಮೀ ಈಶಾನ್ಯದಲ್ಲಿರುವ ಹುನಕುಂದದಲ್ಲಿ ಅನೇಕ ಶಾಸನಗಳಿವೆ. ಊರಿನ ಬಳಿಯ ಗುಡ್ಡದ ಮೇಲೆ ಶಿವನ ದೇಗುಲವಿದೆ. ಬಂಗಾರಪೇಟೆಯ ಉತ್ತರದಲ್ಲಿರುವ ಯಲಬುಗರ್ಿಯಲ್ಲಿ ವೆಂಕಟರಮಣ ದೇವಾಲಯವಿದೆ.
           ಕೋಲಾರ ತಾಲೂಕಿನ ಪ್ರೇಕ್ಷಣೀಯ ಸ್ಥಳಗಳಲ್ಲಿ ಅಂತರಗಂಗೆ ಒಂದು. ಹಿಂದೂ ಜನರಿಗೆ ಅತ್ಯಂತ ಪವಿತ್ರವಾದ ತೀರ್ಥಗಳಲ್ಲಿ ಗಂಗೆ ಬಹಳ ಪ್ರಸಿದ್ಧವಾದುದು. ಸಮಗ್ರ ಭಾರತದಲ್ಲಿ ಆ ಹೆಸರಿನ ಹಲವು ತೀರ್ಥಗಳನ್ನು ನಾವು ಕಾಣಬಹುದು: ಪಾತಾಳಗಂಗೆ, ಶಿವಗಂಗೆ, ಸಿದ್ಧಗಂಗೆ, ದೇವಗಂಗೆ ಮೊದಲಾದುವುಗಳು ಇದಕ್ಕೆ ಉದಾಹರಣೆಗಳು. ಅಂತರಗಂಗೆ ಎಂಬುದು ಇದೇ ವರ್ಗದ ಒಂದು ತೀರ್ಥ. ಈ ಹೆಸರಿನ ಒಂದು ತೀರ್ಥ ಕೋಲಾರಕ್ಕೆ ಸಮೀಪದಲ್ಲಿರುವ ಶತಶೃಂಗಪರ್ವತದಲ್ಲಿದೆ. ಇಲ್ಲಿ ಸ್ನಾನಪೂಜಾದಿಗಳು ಬಹಳ ಪವಿತ್ರವೆಂದು ಭಕ್ತರು ಭಾವಿಸುತ್ತಾರೆ. ಬೆಂಗಳೂರು ಜಿಲ್ಲಾ ಕುದೂರಿನಲ್ಲಿಯೂ ಈ ಹೆಸರಿನ ಒಂದು ತೀರ್ಥವಿದೆ.
                                         
             ಅತ್ಯಂತ ಪ್ರಾಚೀನ ದೇವಾಲಯಗಳು ಬೆಟ್ಟದ ನೈಋತ್ಯದಲ್ಲಿ ಒಂದು ದೊಡ್ಡ ಪ್ರಾಂಗಣದ ಮಧ್ಯೆ ಇವೆ.  ಇವೆಲ್ಲವೂ ಶೈವ ದೇವಾಲಯಗಳು.  ಮಧ್ಯದಲ್ಲಿ ಪಾರ್ವತೀ ದೇವಾಲಯವೂ ಅದರ ಸುತ್ತಲೂ ರಾಮೇಶ್ವರ, ಲಕ್ಷ್ಮಣೇಶ್ವರ, ಭರತೇಶ್ವರ, ಶತ್ರುಘ್ನೇಶ್ವರ, ಸುಗ್ರೀವೇಶ್ವರ, ಅಂಜನೇಶ್ವರ ಮುಂತಾದ ಗುಡಿಗಳಿವೆ. ಇವುಗಳಲ್ಲಿ ಲಕ್ಷ್ಮಣೇಶ್ವರ ಗುಡಿ ಅತ್ಯಂತ ಸುಂದರ ಕಟ್ಟಡ.  ಗರ್ಭಗೃಹ, ಅಂತರಾಳ ಮತ್ತು ನವರಂಗವಿರುವ ಈ ಗುಡಿಯ ಹೊರಮೈಯ ಸುತ್ತಲೂ ಬುಡದಲ್ಲಿ ಆನೆ, ಸಿಂಹ, ಯಾಳಿ, ಮಕರ, ಕುದುರೆಲಾಳದಾಕೃತಿಯ ಕಮಾನುಗಳು-ಇವುಗಳಿಂದ ಅಲಂಕೃತವಾದ ಆರು ಪಟ್ಟಿಕೆಗಳಿವೆ.  ಮೇಲೆ ಅಲ್ಲಲ್ಲಿ ಯಕ್ಷ, ಶಿವ, ದುಗರ್ಿ, ಗಣೇಶ, ಭೈರವ, ಭೈರವಿ, ವಿಷ್ಣು ಮುಂತಾದ ಶಿಲ್ಪಗಳಿರುವ, ಸಮಾನಾಂತರಗಳಲ್ಲಿ ಅರ್ಧಕಂಭಗಳಿಂದ (ಪಿಲ್ಯಾಸ್ಟರ್) ಛೇದಿಸಲ್ಪಟ್ಟ ಎತ್ತರವಾದ ಭಿತ್ತಿಯಿದೆ. ಇದರಲ್ಲಿ ಮಧ್ಯೆ ಮಧ್ಯೆ ಮಹಿಷಾಸುರಮದರ್ಿನಿ, ಸೂರ್ಯ, ನಟರಾಜ ಮುಂತಾದ ವಿಗ್ರಹಗಳನ್ನೊಳಗೊಂಡ ಜಾಲಂಧ್ರಗಳೂ ಇದ್ದು ದೇವಾಲಯದ ಸೊಬಗನ್ನು ಹೆಚ್ಚಸಿವೆ.  ಒಳಭಾಗದ ನವರಂಗದಲ್ಲಿ, ಮಧ್ಯೆ ಉಮಾಮಹೇಶ್ವರ ಮತ್ತು ಸುತ್ತಲೂ ಅಷ್ಟ ದಿಕ್ಪಾಲಕರ ಕೆತ್ತನೆಯಿರುವ ಒಂದು ಮೋಹಕ ಭುವನೇಶ್ವರಿಯಿದೆ.  ರಚನಾರೀತಿಯಲ್ಲಿ, ಲಕ್ಷ್ಮಣೇಶ್ವರ ದೇವಾಲಯ ಕಂಚಿಯ ದೇವಾಲಯಗಳ ಸಂಪ್ರದಾಯದಿಂದ ಬೆಳೆದು ಬಂದ ನೊಳಂಬವಾಸ್ತುಶಿಲ್ಪ ಶೈಲಿಯ ಒಂದು ಉತ್ತಮ ಪ್ರತೀಕವಾಗಿದೆ.  ವಾಸ್ತುಶೈಲಿಯಿಂದ, ಮತ್ತು ಸ್ಥಳೀಯ ಶಾಸನಗಳ ಸಾಂದಭರ್ಿಕ ಮಾಹಿತಿಗಳಿಂದ ಈ ದೇವಾಲಯ ಕ್ರಿ.ಶ. ಹತ್ತನೆಯ ಶತಮಾನದಲ್ಲಿ ಕಟ್ಟಲಾಗಿರಬೇಕೆಂದು ಹೇಳಬಹುದು.  ಆದರೆ ದೇವಾಲಯದ ಮೇಲುಭಾಗದಲ್ಲಿರುವ ಗೋಪುರ ಮುಂತಾದ ಇಟ್ಟಿಗೆಯ ಸೇರ್ಪಡೆಗಳು ಸುಮಾರು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಆದವುಗಳು.  ಶತ್ರುಘ್ನೇಶ್ವರ, ಅಂಜನೇಶ್ವರ ಮತ್ತು ಭರತೇಶ್ವರ ದೇವಾಲಯಗಳೂ ಸುಮಾರು ಲಕ್ಷ್ಮಣೇಶ್ವರದ ಮಾದರಿಯವೇ. ಕಾಲದಲೂ ಇವುಗಳಲ್ಲಿ ಬಹಳಷ್ಟು ಅಂತರವಿರಲಾರದೆಂಬುದು ಈ ಕೆಲವು ದೇವಾಲಯಗಳಲ್ಲಿ ಕಂಡುಬಂದಿರುವ ನೊಳಂಬ ಮತ್ತು ಗಂಗರ ಶಾಸನಗಳಿಂದ ಸಿದ್ಧವಾಗುತ್ತದೆ.  ಇದೇ ಕಾಲದ ರಾಮೇಶ್ವರ ದೇವಾಲಯ ದ್ರಾವಿಡಶೈಲಿಯ ಮೂಲ ಶಿಖರವನ್ನು ಇನ್ನೂ ಉಳಿಸಿಕೊಂಡಿದೆ.  ಈ ದೇವಾಲಯದಲ್ಲಿ ಮೂಲಗರ್ಭಗುಡಿ ಮತ್ತು ನವರಂಗದ ಕೆಲವು ಭಾಗಗಳು ರಚನಾರೀತಿಯಲ್ಲಿ ಇತರ ಸಮಕಾಲೀನ ದೇವಾಲಯಗಳಂತೆಯೇ ಇದ್ದರೂ ಮುಂದೆ 12-13ನೆಯ ಶತಮಾನದ ಕೆಲವು ಸೇರ್ಪಡೆಗಳಿಂದಾಗಿ ಕಟ್ಟಡದ ಅಂದಕ್ಕೆ ಸ್ವಲ್ಪ ಕುಂದು ಬಂದಿದೆ.  ಮಧ್ಯದಲ್ಲಿರುವ ಪಾರ್ವತೀ ದೇವಾಲಯ ಗರ್ಭಗೃಹ, ನವರಂಗ ಮತ್ತು ಮುಖಮಂಟಪಗಳನ್ನೊಳಗೊಂಡಿರುವ ಸಾಮಾನ್ಯ ಕಟ್ಟಡ.  ಇಲ್ಲಿಯ ವಾಸ್ತುರಚನೆಯಲ್ಲಾಗಲೀ ಶಿಲ್ಪಗಳಲ್ಲಾಗಲೀ ಈ ಹಿಂದಿನ ದೇವಾಲಯಗಳಲ್ಲಿರುವ ಪ್ರಬುದ್ದತೆ ಕಂಡುಬರುವುದಿಲ್ಲ.  13ನೆಯ ಶತಮಾನದಲ್ಲಿ ಕೋಲಾರ ಪ್ರದೇಶದಲ್ಲಿ ಆಳುತ್ತಿದ್ದ ತಮಿಳು ಗಂಗ ಅರಸು ಇಳವಂಜಿ ವಾಸುದೇವರಾಯ ಇದನ್ನು ಕಟ್ಟಿಸಿರಬಹುದೆಂದು ಊಹಿಸಲು ಆಧಾರಗಳಿವೆ.  ದೇವಾಲಯದ ಒಳಗೆ ಇಳವಂಜಿ ವಾಸುದೇವರಾಯ ಮತ್ತು ಅವನ ತಮ್ಮನದೆಂದು ಹೇಳಲಾಗುವ ಎರಡು ಭಕ್ತ ವಿಗ್ರಹಗಳಿವೆ. ಈ ದೇವಾಲಯಗಳ ಗುಂಪಿನಲ್ಲೇ ಇರುವ ಕಾಮಾಕ್ಷಿ ಮತ್ತು ಇತರ ಗುಡಿಗಳು ಅನಂತರದ ಕಟ್ಟಡಗಳು.  ಬೆಟ್ಟ ಹತ್ತುವಲ್ಲಿ ಸಿಗುವ ಒಂದು ಗುಹೆಯನ್ನು ವಾಲ್ಮೀಕಿಯ ಗುಹೆಯೆಂದು ಕರೆಯುತ್ತಾರೆ.  ಇದರ ಸಮೀಪದಲ್ಲಿ ಚೋಳ ಸಂಪ್ರದಾಯದ ಒಂದು ಸಣ್ಣ ದೇವಾಲಯವಿದೆ.  ಇಲ್ಲಿಂದ ಅನತಿ ದೂರದಲ್ಲಿರುವ ಏಕಾಂತರಾಮಯ್ಯನ ದೇವಾಲಯ ಸಹ ಚೋಳ ಸಂಪ್ರದಾಯದ ಕಟ್ಟಡ.  ಆದರೆ ಇದರ ನವರಂಗಭಾಗ ಹೊಯ್ಸಳ ಮುಮ್ಮಡಿ ಬಲ್ಲಾಳನ ಕಾಲಕ್ಕೆ ಸೇರಿದುದು. ಬೆಟ್ಟದ ಮೇಲುಗಡೆ ಇರುವ ಸೀತಾಪಾರ್ವತೀ ಗುಡಿ ಹೊರನೋಟಕ್ಕೆ ಈಚಿನ ಬಹುಸಾಮಾನ್ಯ ಕಟ್ಟಡದಂತೆ ಕಂಡರೂ ಒಳಭಾಗ ಪುರಾತನವಾದುದು.  ಇದು ನೊಳಂಬ ಅರಸರ ಕಾಲದ (9-10ನೆಯ ಶತಮಾನ) ಗುಹಾದೇವಾಲಯವೆಂದು ಕಾಣುತ್ತದೆ.  ಆವನಿ ಗ್ರಾಮದಲೂ ಬೆಟ್ಟದ ಮೇಲೂ 9-10ನೆಯ ಶತಮಾನದಿಂದ ಹಿಡಿದು ಇತ್ತೀಚಿನವರೆಗಿನ ಗಂಗ, ನೊಳಂಬ, ಚೋಳ, ಹೊಯ್ಸಳ, ತಮಿಳುಗಂಗ, ವಿಜಯನಗರ ಮತ್ತು ಪಾಳೆಯಗಾರರ ಆಳ್ವಿಕೆಗಳಿಗೆ ಸಂಬಂಧಿಸಿದ ಐವತ್ತಕ್ಕೂ ಹೆಚ್ಚು ಶಾಸನಗಳು ಬೆಳಕಿಗೆ ಬಂದಿವೆ.       
              ಕೋಲಾರ ಹೋಬಳಿ ಗ್ರಾಮಗಳಲ್ಲದೆ ಬೆಳ್ಳೂರು, ಗರುಡನಪಾಳ್ಯ, ಪಾಪರಾಜನ ಹಳ್ಳಿ, ಸೀತಿ, ಸುಗಟೂರು ತೇರುಹಳ್ಳಿ, ವಾಣರಾಸಿ, ವಕ್ಕಲೇರಿ, ವೇಮಗಲ್ಲು ಮೊದಲಾದವು ಈ ತಾಲ್ಲೂಕಿನಲ್ಲಿನ ಮುಖ್ಯ ಸ್ಥಳಗಳು. ಗರುಡನಪಾಳ್ಯದ ಬಳಿಯ ಚಿಕ್ಕಗುಡ್ಡದಲ್ಲಿ ಸ್ಥಳೀಯವಾಗಿ ಪಾಂಡವರ ಗುಡಿಗಳೆಂದು ಕರೆಯುವ ಬೃಹತ್ ಶಿಲಾಸಮಾದಿಗಳಿವೆ. ಕೋಲಾರದ ಬಳಿಯ ಬೆಟ್ಟವೊಂದರ ಮೇಲಿರುವ ಪಾಪರಾಜನ ಹಳ್ಳಿಯಲ್ಲಿ ಒಂದು ಶಿವ ದೇವಾಲಯ ಮತ್ತು ಉಸ್ಮಾನ್ ಅಲಿಯ ದರ್ಗ ಅಲ್ಲದೆ ಭೂತಗೌಡನ ಗವಿ, ಮುಗಲ್ ಸುಬೇದಾರನ ಕೋಟೆ ಮೊದಲಾದವು ಇವೆ. ಮತ್ತೊಂದು ಬೆಟ್ಟದ ಮೇಲೆ ತೇರುಹಳ್ಳಿ ಗ್ರಾಮದಲ್ಲಿ ಸು.12-13ನೆಯ ಶತಮಾನದ ಗಂಗಾಧರೇಶ್ವರನ ಬೃಹತ್ ದೇವಾಲಯ ಮತ್ತು ಕೆಲವು ಪ್ರಾಗೈತಿಹಾಸಿಕ ಅವಶೇಷಗಳು ಇವೆ. ಬೆಳ್ಳೂರು ಗಂಗರ ಕಾಲದಿಂದಲೂ ಅಸ್ತಿತ್ವದಲ್ಲಿದ್ದು ಹೊಯ್ಸಳರ ಕಾಲದಲ್ಲಿ ವಿಷ್ಣುವರ್ಧನ ಚತುವರ್ೆದಿ ಮಂಗಲಂ ಎಂದು ಪ್ರಸಿದ್ಧವಾಗಿದ್ದ ಶ್ರೀವೈಷ್ಣವ ಅಗ್ರಹಾರವಾಗಿತ್ತು. ಮಣವಾಲ ಮಹಾಮುನಿಯ ಶಿಷ್ಯರಾದ ಪ್ರತಿವಾದಿ ಭಯಂಕರರ ಅಣ್ಣ ಇಲ್ಲಿಯವರೆಂದು ಪ್ರತೀತಿ. ಇಲ್ಲಿ ರಾಮದೇವಾಲಯವಿದೆ. ವೆಂಕಟಾಪುರದಲ್ಲಿ ವೆಂಕಟರಮಣ ದೇವಾಲಯವಿದೆ. ವಕ್ಕಲೇರಿಯ ಬೆಟ್ಟದ ಮೇಲೆ ಪ್ರಾಚೀನ ಮಾರ್ಕಂಡೇಶ್ವರ ದೇವಾಲಯವಿದೆ. ಪ್ರತಿ ಮಾಘ ಮಾಸದಲ್ಲಿ ಸು.20 ದಿನಗಳ ಕಾಲ ಇಲ್ಲಿ ದೊಡ್ಡ ಜಾತ್ರೆ ನಡೆಯುತ್ತದೆ. ವಾಣರಾಸಿಯಲ್ಲಿ ಸ್ಥಳೀಯ ವೀರ ಇರಳಪ್ಪನ ದೇವಾಲಯವಿದೆ. ಪ್ರತಿ ಚೈತ್ರಮಾಸದಲ್ಲಿ ಇಲ್ಲೂ ದೊಡ್ಡ ಜಾತ್ರೆ ನಡೆಯುತ್ತವೆ. ಹೋಳೂರಿನಲ್ಲಿ ಲಕ್ಷ್ಮೀನಾರಾಯಣ ದೇವಾಲಯವಿದೆ. ಮಾಘ ಶುದ್ಧ ಪಾಡ್ಯಮಿಯಂದು ಜಾತ್ರೆ ನಡೆಯುತ್ತದೆ. ವೇಮಗಲ್ಲಿನಲ್ಲಿರುವ ದಗರ್ಾ ಪ್ರಸಿದ್ಧವಾದುದು.
                                    
                                                                  ಕುರುಡಮಲೆ ಇತಿಹಾಸಪ್ರಸಿದ್ಧ ಗ್ರಾಮ. ಇಲ್ಲಿ ಅನೇಕ ಪ್ರಾಚೀನ ಅವಶೇಶಗಳು ದೊರಕಿವೆ. ಈ ಪ್ರದೇಶ ಚೋಳರ ಆಳ್ವಿಕೆಗೆ ಬಳಪಟ್ಟಿದ್ದಾಗ ಇದೊಂದು ಪ್ರಮುಖಸ್ಥಳವಾಗಿದ್ದುದರಿಂದ ಇಲ್ಲಿ ಕೆಲವು ಉತ್ತಮ ದೇವಾಲಯಗಳನ್ನು ನಿಮರ್ಿಸಲಾಗಿತ್ತು. ಸ್ಥಳ ಪುರಾಣದ ರೀತ್ಯಾ ಇದು ಕೌಂಡಿನ್ಯಕ್ಷೇತ್ರ. ಕೃತ, ತ್ರೇತಾ ಮತ್ತು ದ್ವಾಪರಯುಗಗಳಲ್ಲಿ ಇದಕ್ಕೆ ಗಣೇಶಗಿರಿ, ಕೂಟಾಚಲ ಮತ್ತು ಯಾದವಾಚಲಗಳೆಂಬ ಹೆಸರುಗಳಿದ್ದುವೆಂದೂ ಕಲಿಯುಗದಲ್ಲಿ ಕೌಂಡಿನ್ಯಕ್ಷೇತ್ರವಾಗಿದೆಯೆಂದೂ ಪ್ರತೀತಿಯಿದೆ. ಮತ್ತೊಂದು ಐತಿಹ್ಯದ ರೀತ್ಯಾ ಕುರುಡುಮಲೆ ಎಂಬುದು ಕೂಡುಮಲೆಯ ರೂಪಾಂತರ. ಸಕಲದೇವತೆಗಳೂ ಮಹಾಗಣಪತಿಯ ಅರ್ಚನೆಗಾಗಿ ಇಲ್ಲಿ ಸೇರುತ್ತಿದ್ದುದರಿಂದ ಇವಕ್ಕೆ ಕೂಡುಮಲೆಯೆಂದು ಹೆಸರಾಯಿತಂತೆ. ಕುರುಡುಮಲೆ ಮಹಾಗಣಪತಿ ಮಂದಿರ ಇಲ್ಲಿಯ ಪ್ರಾಚೀನತಮ ದೇವಾಲಯ. ಬಹುಶಃ ಚೋಳರ ಕಾಲದಲ್ಲಿ ನಿಮರ್ಿತವಾದ ಈ ಮಂದಿರ ಬಹಳ ಸುಂದರಕಲಾಕೃತಿ. ಹೊಯ್ಸಳ ಮತ್ತು ವಿಜಯನಗರ ಅರಸರ ಕಾಲದಲ್ಲಿ ಇದರ ಜೀಣರ್ೋದ್ಧಾರವಾಯಿತು. ಈ ದೇವಾಲಯದ ಮುಂದಿರುವ, ಗಣಪತಿಯ ವಾಹನವಾದ ಮೂಷಿಕದ ಶಿಲ್ಪ ಹಸಿರುಕಲ್ಲಿನಲ್ಲಿ ಮಾಡಲಾದ ಬೃಹದ್ಗಾತ್ರದ ಉತ್ತಮ ಕಲಾಕೃತಿ. ದೇವಾಲಯದ ಗರ್ಭಗೃಹದ (20' ಉದ್ದ, 1 1/2'  ಅಗಲ ಮತ್ತು  16'  ಎತ್ತರ) ಮುಂದಿನ ಹದಿನಾರು ಮೂಲೆಗಳ ಕಂಬಗಳ ಮೇಲಿನ ಶಿಲ್ಪಗಳು ಸಾಧಾರಣವಾಗಿವೆ. ಮಹಾಗಣಪತಿಯ ವಿಗ್ರಹ 2' ಎತ್ತರದ ಪೀಠದಮೇಲೆ 1 1/2 ' ಎತ್ತರದ ಆಸನದಲ್ಲಿ ಕುಳಿತಿದ್ದು 8 1/2' ಎತ್ತರವಿದೆ. ಪಾಶಾಂಕುಶ  ಹಸ್ತನಾದ ಗಣಪತಿ ತನ್ನ ಕೈಯಲ್ಲಿಯ ಮೋದಕವನ್ನು ಸವಿಯುತ್ತಿರುವಂತೆ ರೂಪಿಸಲಾಗಿದೆ. ವಿಗ್ರಹ ಹಾವಿನ ಉದರ ಬಂಧ ಮತ್ತು ಯಜ್ಞೋಪವೀತಗಳನ್ನು ಧರಿಸಿದೆ. ಅದರ ಹೊಟ್ಟೆಯ ಸುತ್ತಳತೆ 13'. ಸುಕನಾಸಿ (10'ಘಿ8') ಮತ್ತು  ನವರಂಗ (25'ಘಿ 25') ಇವು ಈ ಮಂದಿರದ ಇತರ ಭಾಗಗಳು. ನವರಂಗದ ದಕ್ಷಿಣಭಾಗದಲ್ಲಿ 5' ಎತ್ತರದ, ಹನ್ನೆರಡು ಕೈಗಳುಳ್ಳ, ಮಯೂರವಾಹನನಾದ ಕುಮಾರನ ಪ್ರತಿಮೆಯಿದೆ. ಇದೊಂದು ಸುಂದರಶಿಲ್ಪ.
 ಇಲ್ಲಿಯ ಅತ್ಯಂತ ಸುಂದರ ಕಟ್ಟಡ ಸೋಮೇಶ್ವರ ದೇವಾಲಯ. ಇದರಲ್ಲಿ ಗರ್ಭಗುಡಿ (20'ಘಿ10'), ಸುಕನಾಸಿ  (10'ಘಿ8') ಮತ್ತು ನವರಂಗ (25'ಘಿ25') ಇವೆ. ನವರಂಗದ ಅಷ್ಟಮುಖದ ನಾಲ್ಕು ಕಂಬಗಳ ಮೇಲೂ ಸುಂದರವಾದ ಶೈವ - ವೈಷ್ಣವ ವಿಗ್ರಹಗಳನ್ನು ಕೆತ್ತಲಾಗಿದೆ. ಒಂದು ಕಂಬದ ಮೇಲಿರುವ ಆನೆಯನ್ನು ಕೊಲ್ಲುತ್ತಿರುವ ಸಿಂಹದ ಶಿಲ್ಪ ಗಂಗರನ್ನು ಹೊಯ್ಸಳರು ಸೋಲಿಸಿದ ಸಂಕೇತವಿರಬಹುದೆಂದು ಊಹಿಸಲಾಗಿದೆ. ಹೊರಗೋಡೆಗಳ ಮೇಲೆ ಸ್ತಂಭಿಕ ಮತ್ತು ಗೂಡುಗಳ ಸುಂದರ ಅಲಂಕರಣವಿದೆ. ಗರ್ಭಗುಡಿಯಲ್ಲಿರುವ ಲಿಂಗದ ಮುಂಭಾಗದ ಕಿಟಕಿಯ ಬಳಿ ಮೂರು ವ್ಯಕ್ತಿಗಳ ಶಿಲ್ಪಗಳಿವೆ. ಇವು 13 ನೆಯ ಶತಮಾನದಲ್ಲಿ ಚೋಳರ ಸಾಮಂತನಾಗಿದ್ದ ಇಳವಂಜಿ ವಾಸುದೇವರಾಯ ಮತ್ತು ಆತನ ರಾಣಿಯರ ಮೂತರ್ಿಗಳೆಂದು ಗುರುತಿಸಲಾಗಿದೆ. ಈ ದೇವಾಲಯದ ಪ್ರಾಕಾರದಲ್ಲಿ ಪಾರ್ವತಿ ಮತ್ತು ಕಾಮಾಕ್ಷಿ ಅಮ್ಮನವರ ಮಂದಿರಗಳೂ ಇವೆ.
ಪಾಳುಬಿದ್ದಿರುವ ಚೆನ್ನರಾಯಸ್ವಾಮಿ ದೇವಾಲಯ ಸಹ ಆ ಸುಮಾರಿಗೆ ಸೇರಿದ್ದಿರಬಹುದು. ಗ್ರಾಮದ ಉತ್ತರಕ್ಕೆ ಮುರಿದ ತೋರಣದ ಕಂಬಗಳೂ ಮಾಸ್ತಿಕಲ್ಲೊಂದೂ ಇವೆ. ಹೊಯ್ಸಳ ಮುಮ್ಮಡಿ ಬಲ್ಲಾಳ ಆ ಪ್ರದೇಶವನ್ನು  ಆಳುತ್ತಿದ್ದನೆಂದೂ ಆಗ ಹೊರಡಿಸಿದ ವೀರರಾಯಿ ಹಣ ದೊರಕಿವೆಯೆಂದೂ ಹೇಳಲಾಗಿದೆ. ಈ ಪ್ರದೇಶದಲ್ಲಿ ಹಳೆಯ ಊರಿನ ಅವಶೇಷಗಳು ಕಾಣಬರುತ್ತವೆ.
                ಈ ಕಂದೆಲುಗು ನೆಲ ನಾಡಿನ ಸಂಸ್ಕೃತಿಗೆ ಪೂರ್ವಕಾಲದಿಂದ ಏಕೀಕೃತ ಕನರ್ಾಟಕ ರೂಪಗೊಳ್ಳುವವರೆಗೆ ಪೌರಾಣಿಕ, ಧಾಮರ್ಿಕ, ಸಾಮಾಜಿಕ .ಆಥರ್ಿಕ ಹಾಗೂ ಚಾರಿತ್ರಿಕ ಕ್ಷೇತ್ರಗಳಿಗೆ ನೀಡಿರುವ ಕೊಡುಗೆ ಅನುಪಮವಾದುದು ಎಂದರೆ ಅತಿಶಯೋಕ್ತಯಾಗಲಾರದು.
         ಭಾರತ ಹಾಗೂ ಕನರ್ಾಟಕ ಇತಿಹಾಸವು ಮೌರ್ಯರೊಂದಿಗೆ  ಆರಂಭವಾಗುತ್ತದೆ. ಮೌರ್ಯರ ಅಶೋಕನ ಶಾಸನಗಳೇ ಲಿಖಿತ ಆರಂಭದ ದಾಖಲೆಗಳಾಗಿವೆ. ಆದರೆ ಕೋಲಾರ ಜಿಲ್ಲೆಯೂ ಅಶೋಕನ ಆಡಳಿದ ಪ್ರಭಾವಕ್ಕೆ ಪರೋಕ್ಷವಾಗಿ ಒಳಪಟ್ಟಿರಬಹುದಾದ ಸಾಧ್ಯತೆಗಳಿದ್ದರೂ ಪೂರಕ ಸಾಮಗ್ರಿಗಳ ಕೊರತೆಯಿದೆ. 
       ಕೋಲಾರ ಜಿಲ್ಲೆಯ ಪೌರಾಣಿಕ ಹಿನ್ನೆಲೆಗಿಂತಲೂ ಚಾರಿತ್ರಿಕ ಮಹತ್ವವೇ ಹೆಚ್ಚು ಉತ್ಕೃಷ್ಟವೆನಿಸಿಕೊಂಡಿದೆ. ಕೋಲಾರ ಪ್ರಾಂತ್ಯವನ್ನು ಆಳಿದ ಅರಸರಲ್ಲಿ ಬಾಣರು ಮೊದಲಿಗರು. ಇವರನ್ನು ಇತಿಹಾಸದಲ್ಲಿ ಪೆಬರ್ಾಣರು, ಬೃಹತ್ ಬಾಣರು ಎಂದು ಕರೆದಿದ್ದಾರೆ. ಇವರು ಪಾಲಾರ್ ಪೂರ್ವಭಾಗದಲ್ಲಿರುವ ಚಿಂತಾಮಣಿ, ಬಂಗಾರಪೇಟೆ ಹಾಗೂ ಮುಳಬಾಗಿಲು ಪ್ರಾಂತ್ಯವನ್ನು ಆಳಿದರು. ಕ್ರಿ.ಶ. ಆರಂಭದಿಂದ ಒಂಭತ್ತನೆಯ ಶತಮಾನದವರಿಗೂ ಆಳಿದೆರೆನ್ನುವುದಕ್ಕೆ ಅನೇಕ ಶಾಸನಗಳು  ಆಧಾರವಾಗಿವೆ. ಶಾಸನತಜ್ಞರಾದ ಲೂಯಿರೈಸ್ ಅವರು ಕ್ರಿ.ಶ.339 ರ ಕಾಲಮಾನದ ಮುಳಬಾಗಿಲು ತಾಲೂಕಿನ ಮುಡಿಯನೂರು ಶಾಸನವನ್ನು ಆಧರಿಸಿ, ಬಾಣರು ಕೋಲಾರ ಪ್ರಾಂತ್ಯವನ್ನು ಆಳಿದ ಮೊದಲ ದೊರೆಗಳೆಂದು ತಕರ್ಿಸಿದ್ದಾರೆ.
          ಕನರ್ಾಟಕ ಇತಿಹಾಸದಲ್ಲಿ ತಲಕಾಡಿನ ಗಂಗರಿಗೆ ಒಂದು ವಿಶಿಷ್ಟ ಸ್ಥಾನವಿದೆ. ಅಂತಹ ಗಂಗರ ಮೊದಲ ರಾಜಧಾನಿ ಕುವಲಾಲಪುರ(ಕೋಲಾರ)ಆಗಿತ್ತು. ಚರಿತ್ರಕಾರರರ ಪ್ರಕಾರ ಗಂಗಗರ ಮೂಲಪುರುಷರಾದ ದಡಿಗ ಮತ್ತು ಮಾಧವ ಎಂಬ ಸೋದರರು ಮೂಲತಃ ಕಡಪ ಜಿಲ್ಲೆಯ ಗಂಗಪೆರೂರಿನವರು. ಇಲ್ಲಿನ ಜೈನಮುನಿ ಸಿಂಹನಂದ್ಯಾಚಾರ್ಯರ ಆಶರ್ೀವಾದದಿಂದ ಸೈನ್ಯವನ್ನು ಕಟ್ಟಿದರು. ಕುವಲಾಲ ಪ್ರದೇಶವನ್ನು ಆಳುತ್ತಿದ್ದ ಬಾಣರನ್ನು ಸೋಲಿಸಿ ನಂದಿದುರ್ಗದಲ್ಲಿ ಕೋಟೆಯನ್ನು ಕಟ್ಟಿದರು.  ಇದಕ್ಕೆ ಅನೇಕ ಶಾಸನಗಳು ಆಧಾರವನ್ನು ಒದಗಿಸುತ್ತವೆ. ಅಲ್ಲದೆ ಅವರ ಕಾಲದ ತಾಮ್ರ ಹಾಗೂ ಶಿಲಾಶಾಸನಗಳು ಕೋಲಾರ. ಚಿಕ್ಕಬಳ್ಳಾಪು, ನಂದಿದುರ್ಗ, ಮುಡಿಯನೂರು, ಉತ್ತನೂರು, ಸುಗುಟೂರು, ನರಸಾಪುರ, ಗುಮ್ಮರೆಡ್ಡಿಪುರ, ಹೆಬ್ಬಟ, ಹಾಗೂ ಗಂಗರಸನಹಳ್ಳಿಗಳಲ್ಲಿ ದೊರೆತಿವೆ. ಆದರೆ ಇವುಗಳಲ್ಲಿ ಬಹುತೇಕ ಶಾಸನಗಳು ದಾನಶಾಸನಗಾಗಿವೆ. ಕ್ರಿ.ಶ.ನಾಲ್ಕನೆಯ ಶತಮಾನದಿಂದ ಹತ್ತನೆಯ ಶತಮಾನವದರಿಗೂ ತಮ್ಮ ಪ್ರಾಬಲ್ಯವನ್ನು ಮರೆದ ಗಂಗರು ತಮ್ಮ ಶಾಸನಗಳಲ್ಲಿ 'ಕುವಲಾಲಪುರವರಾಧೀಶ್ವರ' ಹಾಗೂ 'ನಂದಗಿರಿನಾಥ'ರೆಂದು ಕರೆದುಕೊಂಡಿದ್ದಾರೆ.
         ದ್ವಿಭಾಷಾ ಪ್ರಾಂತ್ಯವಾದ ಕೋಲಾರವನ್ನು ನೊಳಂಬರು ಆಳಿದರು. ಅವರ ಕಾಲದಲ್ಲಿ 'ನೊಳಂಬವಾಡಿ'ಗೆ ಕೋಲಾರದ ಬಹುತೇಕ ಪ್ರಾಂತ್ಯ ಒಳಪಟ್ಟಿತ್ತು. ಹತ್ತನೆಯ ಶತಮಾನದ ಅಂತ್ಯದ ವೇಳೆಗೆ ಗಂಗರ ಪ್ರಾಬಲ್ಯ ಇಳಿಮುಖವಾಯಿತು. ತಮಿಳುನಾಡಿನ ಚೋಳರ ದೊರೆ ರಾಜರಾಜಚೋಳನು ಕೋಲಾರದ ಆಗ್ನೇಯ ಭಾಗವನ್ನು ಜಯಿಸಿದ. ಇವನ ಆಳ್ವಿಕೆಯ ಸಮಯದಲ್ಲಿ ಕೋಲಾರ ಜಿಲ್ಲೆ ತೊಂಡೈಮಂಡಲ, ನಿಗಿರಿಲಿ ಚೋಳಮಂಡಲ,ಮಾರಾಯಪಡಿ ಹಾಗೂ ವಿಜಯ ರಾಜಮಂಡಲಗಳ ಭಾಗವಾಗಿತ್ತು. ಕ್ರಿ.ಶ.997ರಲ್ಲಿ ಹೊಸಕೋಟೆಯ ತನಕ ಅವನ ರಾಜ್ಯ ವಿಸ್ತಾರವಾಗಿತ್ತು. ಇವರು ಹಾಕಿಸಿದ ಸುಮಾರು 160 ಕ್ಕೂ ಹೆಚ್ಚು ತಮಿಳು ಶಾಸನಗಳು ಕೋಲಾರ ಪ್ರಾಂತ್ಯದಲ್ಲಿವೆ.  ಈ ವಂಶದ ದೊರೆಗಳು, ಮಂತ್ರಿಗಳು ಹಾಗೂ ಅಧಿಕಾರಿಗಳು ಕೋಲಾರ ಪ್ರದೇಶದಲ್ಲಿ ಅನೇಕ ದೇಗುಲಗಳನ್ನು ಕಟ್ಟಿಸಿರುವ, ಜೀಣರ್ೋದ್ಧಾರ ಮಾಡಿರುವ, ದಾನದತ್ತಿಗಳನ್ನು ನೀಡಿರುವ ಶಾಸನ ಉಲ್ಲೇಖಗಳು ಇವೆ. ದ್ರಾವಿಡ ಸಂಸ್ಕೃತಿಯ ಹಿನ್ನೆಲೆಯಲ್ಲಿ ಹಲವಾರು ಶೈವ-ವೈಷ್ಣವ ದೇವಾಲಯಗಳನ್ನು ನಿಮರ್ಿಸಿದ್ದಾರೆ. ಸಂಗೀತ, ನೃತ್ಯ, ಕಲೆಗಳನ್ನು ಅಭಿವೃದ್ಧಿಗೊಳಿಸಿದರು.  ಕೆರೆಕಟ್ಟೆ ಕಟ್ಟಿಸಿದರು. ಅದರಲ್ಲಿ ಕೋಲಾರದ ಕೋಲಾರಮ್ಮನ ದೇಗುಲವು ಒಂದು. ಕೋಲನೆಂಬ ಗೊಲ್ಲನ ಕಥೆಯು ಇದಕ್ಕೆ ಒಂದು ಆಧಾರವಾಗಿದೆ.
          ಬಾಣರು, ಗಂಗರು, ಚೋಳರ ತರುವಾಯ ಹೊಯ್ಸಳರು, ನೊಳಂಬರು, ಪಲ್ಲವರು, ವಿಜಯನಗರದ ಅರಸರು ಈ ಪ್ರಾಂತ್ಯವನ್ನು ಆಳಿದ್ದಾರೆ. ಇವರೆಲ್ಲರ ಆಳ್ವಿಕೆಯ ಗತವೈಭವವನ್ನು ಸಾರುವ ಆನೇಕ ಶಾಸನಗಳು ಈ ನೆಲದಲ್ಲಿ ಲಭ್ಯವಾಗಿವೆ. ಈ ಶಾಸನಗಳ ವೈಶಿಷ್ಟ್ಯವೆಂದರೆ ತೆಲುಗು.ಕನ್ನಡ ಹಾಗೂ ತಮಿಳು ಭಾಷೆಯಲ್ಲಿ ರಚನೆಗೊಂಡಿರುವುದು. ದಿ ಎಪಿಗ್ರಾಫಿಯಾ ಕನರ್ಾಟಕಾದ ಸಂಪಾದಕರಾದ ಬೆಂಜಿಮಿನ್ ಲೂಯಿ ರೈಸ್ ಅವರು ಕೋಲಾರ ಪ್ರಾಂತ್ಯದ ಶಾಸನಗಳನ್ನು the present volume contains the vaey varied inseiption of the east the mysore state ,a part of the country where the Kannada. Tamil and Telugu Languages meet and which was also once subject to Tamil sway under the chola kings. Accordingly out of the total of 1347 incriptions in the District 422 are in Tamil, while 211 are in telugu, But the oldest are in kannada. This was the orginal language. Tamil came in with the cholas in the 11th century, and Telugu with Vijayanagar kings after the 15th  The perod covered by the incriptino is from the 4th to the 18th  century.  F jÃw ºÉýzÁÝgÉ.
   ಕೋಲಾರ ಜಿಲ್ಲೆಯ ಮುಳಬಾಗಿಲು  ತಾಲ್ಲೂಕು ಮೊದಲು ಬಾಣರ ಆಡಳಿತಕ್ಕೆ ಸೇರಿತ್ತು. 10ನೆಯ ಶತಮಾನದ ಕೊನೆಯಲ್ಲಿ ಪಲ್ಲವರ ಕೈಸೇರಿತು. ಉತ್ತರದಲ್ಲಿ ವೈಡುಂಬರರು ಆಳುತ್ತಿದ್ದರು. ಮುಂದೆ ಕೋಲಾರದ ಒಂದು ಭಾಗವಾಗಿ ವಿಜಯನಗರದ ಆಡಳಿತಕ್ಕೆ ಸೇರಿತು. ಲಕ್ಕಣ್ಣಡಣ್ಣಾಯಕ ಮತ್ತು ಮಾದನ್ನದಣ್ಣಾಯಕ ಎಂಬವರು ಇಲ್ಲಿ ಆಳುತ್ತಿದ್ದು ಮುಂದೆ ಹೊಸಕೋಟೆಯ ತಿಮ್ಮೇಗೌಡನ ಆಡಳಿತಕ್ಕೆ ಒಳಪಟ್ಟಿತು. 1768ರಲ್ಲಿ ಕರ್ನಲ್ ಕ್ಯಾಂಪ್ಬೆಲ್ ಇದನ್ನು ಇಂಗ್ಲೀಷರ ಆಡಳಿತಕ್ಕೆ ಸೇರಿಸಿದ.
     ಕೋಲಾರ ಜಿಲ್ಲೆಯು ವಿಜಯನಗರದ ಪತನಾನಂತರ ಸಥಳೀಯ ಸಾಮಂತರು. ಪಾಳೇಗಾರರೂ ಆಗಿದ್ದ ತಾಡಿಗೋಳ್ಳು, ಆವತಿ, ಸಾದಲಿ, ಹೊಸಕೋಟೆ, ಚಿಕ್ಕಬಳ್ಳಾಪುರ, ದೇವನಹಳ್ಳಿ, ಸುಗುಟೂರು, ಗುಮ್ಮನಾಯಕನಪಾಳ್ಯ.ಮುಳಬಾಗಿಲು ತಾಲೂಕಿನ ಹರಪನಾಯಕನಹಳ್ಳಿ ಮುಂತಾದ ಪಾಳೆಪಟ್ಟುಗಳು ಜಿಲ್ಲೆಯ ಬಹುಭಾಗವನ್ನು ಆಳಿದವು. ಇವರ ಆಡಳಿತದ ಸಮಯದಲ್ಲಿ ಹಲವಾರು ಕೆರಕಟ್ಟೆಗಳು ನಿಮರ್ಾಣಗೊಂಡ ಬಗ್ಗೆ ಶಾಸನಗಳು ಮಾಹಿತಿಯನ್ನು ಒದಗಿಸುತ್ತವೆ.ಬಿಜಾಪುರ ಆದಿಲ್ ಷಾಹಿಗಳ ಆಡಳಿತಕ್ಕೆ ಒಳಪಡುವ ಮೂಲಕ ಮರಾಠರ ಪ್ರಭಾವಕ್ಕೂ ನಂತರ ಮುಘಲ್ರ ಅದಿಪಥಯಕ್ಕೂ ಒಳಗಾಯಿತು. ಮೈಸೂರು ಅರಸರು ಹಾಗೂ ಹೈದರಾಲಿ-ಟಿಪ್ಪು ಸುಲ್ತಾನರ ಹಿಡಿತಕ್ಕೂ ಸಿಕ್ಕಿತ್ತು. ಅಲ್ಪಕಾಲ ಮೂಳಬಾಗಿಲು ತಾಲೂಕಿನ ಹರಪನಟಯಕನಹಳ್ಳಿ ಬೀಸ್ಸೇಗೌಡ ಹಾಗೂ ಅವರ ಸಂತತಿಯವರು ಈ ಜಿಲ್ಲೆಯ ಅಧಿಪತ್ಯವನ್ನು ವಹಿಸಿದ್ದರು. ಓಪ್ಪಿವಿನ ಪತನಾನಂತರ ಮದ್ರಾಸ್ ಪ್ರೆಸ್ಸಿಡೆನ್ಸಿ ನಿದರ್ೇಶನದ ಪ್ರಕಾರ ಮದ್ರಾಸ್, ಮೈಸೂರು ಹಾಗೂ ಮಲಬಾರ್ ಪ್ರವಾಸವನ್ನು ಕೈಗೊಂಡ ಬುಕನಾನ್ ತನ್ನ ಪ್ರವಾಸಿ ಕಥನದಲ್ಲಿ  ಕೋಲಾರ ಪರಿಸರದ ಬಗ್ಗೆ  ಮಹತ್ವದ ಮಾಹಿಯನ್ನು ನೀಡಿದ್ದಾನೆ. ಟಿಪ್ಪಿವಿನ ಮರಣಾನಂತರ ಮೈಸೂರು ಅರಸರು ಹಾಗೂ ಕಮೀಷನರುಗಳ ಅವಧಿಯಲ್ಲಿ ಇನಾಂದಾರ್, ಜೋಡಿದಾರ್ ಹಾಗೂ ಜಹಗೀರ್ದಾರ್ಗಳ ಸ್ಥಳೀಯ ಆಡಳಿತವನ್ನು ನಡೆಸಿದರು.
    ಸ್ವಾತಂತ್ರ್ಯ ಹೋರಾಟಕ್ಕೆ ಕೋಲಾರ ಜಿಲ್ಲೆ ತನ್ನದೆ ಕೊಡುಗೆಯನ್ನು ನೀಡಿದೆ. ರಾಷ್ಟ್ರಪಿತ ಮಾಹಾತ್ಮಗಾಂದೀಜೀಯವರು ಕೋಲಾರಕ್ಕೆ ಬಂದು ಸ್ವಾತಂತ್ರ್ಯದ ಆಂದೋಲನದ ಕಾವನ್ನು ಹೆಚ್ಚಿಸಿದ್ದರು ಅಲ್ಲದೆ ಹರಿಜನನಿಧಿಯನ್ನು ಸಂಗ್ರಹಿಸಿದ್ದರು. 'ಜವಾಬ್ದಾರಿ ಸಕರ್ಾರ ರಚನೆ'ಗಾಗಿ ಜರಿಗಿದ 'ಮೈಸೂರು ಚಲೋ'ದ ಮುಂದಾಳತ್ವವನ್ನು ವಹಿಸಿದವರೂ ಕೆ.ಚಿ.ರೆಡ್ಡಿ, ಕೆ.ಪಟ್ಟಾಬಿರಾಮನ್, ಟಿ.ರಾಮಾಚಾರ್, ಕೆ.ಸಂಪಂಗಿರಾಮಯ್ಯ, ಎನ್.ಚಿ.ನಾಗಯ್ಯರೆಡ್ಡಿ, ಎನ್.ಚಿ.ತಿಪ್ಪಾರೆಡ್ಡಿ, ಎಂವಿ.ಕೃಷ್ಣಪ್ಪ, ಟಿ.ಚೆನ್ನಯ್ಯ ಮುಂತಾದವರು ಸ್ವಾತಂತ್ರ್ಯ ಆಂದೋಲನದಲ್ಲಿ ಭಾಗವಹಿಸುವಹಿಸಿದರು. ಭಾರತದ ಗಣರಾಜ್ಯದಲ್ಲಿ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿಗಳೂ ಆಗಿ ಅಧಿಕಾರ ವಹಿಸಿಕೊಂಡ ಕೆ.ಚೆಂಗಲರಾಯರೆಡ್ಡಿಯವರು ಕೋಲಾರ ಜಿಲ್ಲೆಯ ಕ್ಯಾಸಂಬಳ್ಳಿಯವರು.-ಹೀಗೆ ನಾಡಿನ ಸಂಸ್ಕೃತಿಗೆ ಕೋಲಾರ ಜಿಲ್ಲೆ ಇತಿಹಾಸ ಪೂರ್ವ ಕಾಲದಿಂದ ಏಕೀಕೃತ ಕನರ್ಾಟಕ ರೂಪ ಪಡೆಯವ ತನಕ ತನ್ನದೆ ಅನುಪಮ ಕೊಡುಗೆಯನ್ನು ನೀಡಿದೆ.

ಸಾರಿಗೆ ಸಂಪರ್ಕ ಮತ್ತು ವ್ಯಾಪಾರ ಮತ್ತು ವಾಣಿಜ್ಯ
   ಕೋಲಾರ ಜಿಲ್ಲೆಯಲ್ಲಿ ರಸ್ತೆ ಸಂಪರ್ಕ ಚೆನ್ನಾಗಿ ಬೆಳೆದಿದೆ. ರಾಷ್ಟೀಯ ಹೆದ್ದಾರಿ ನಂ. 4 ಮತ್ತು 7 ಮತ್ತು ರಾಜ್ಯ ಹೆದ್ದಾರಿಗಳು ಇಲ್ಲಿ ಹಾದು ನೆರೆರಾಜ್ಯಗಳಿಗೆ ಸಂಪರ್ಕ ಕಲ್ಪಿಸಿವೆ. ಪ್ರತಿ ಹಳ್ಳಿಗೂ ತಾಲ್ಲೂಕಿಗೂ ಜಾಲದಂತೆ ರಸ್ತೆ ಮಾರ್ಗಗಳು ಹೆಣೆದುಕೊಂಡಿವೆ. ಸಕರ್ಾರಿ ಮತ್ತು ಖಾಸಗಿ ಬಸ್ಸುಗಳೂ ಕಾರುಗಳೂ ಬಂಡಿಗಳೂ ಜನರನ್ನೂ ಸರಕುಗಳನ್ನೂ ಒಂದೆಡೆಯಿಂದ ಇನ್ನೊಂದೆಡೆಗೆ ಸುಲಭವಾಗಿ ಸಾಗಿಸುತ್ತವೆ. ಹಿಂದೂಪುರ - ಬೆಂಗಳೂರು ರೈಲುಮಾರ್ಗ ಗೌರಿಬಿದನೂರು ಮೂಲಕವೂ ಚೆನ್ನೈ - ಬೆಂಗಳೂರು ರೈಲುಮಾರ್ಗ ಬಂಗಾರಪೇಟೆಯ ಮೂಲಕವೂ ಸಾಗುತ್ತವೆ. ಇನ್ನೊಂದು ರೈಲುಮಾರ್ಗ ಬೆಂಗಳೂರಿನಿಂದ ನಂದಿ, ಚಿಕ್ಕಬಳ್ಳಾಪುರ, ಚಿಂತಾಮಣಿ, ಶಿಡ್ಲಘಟ್ಟ, ಕೋಲಾರಗಳ ಮೂಲಕ ಬಂಗಾರ ಪೇಟೆಗೆ ಸಾಗುತ್ತದೆ. ಬಂಗಾರಪೇಟೆಯಿಂದ ಚಿನ್ನದ ಗಣಿ ಪ್ರದೇಶಕ್ಕೆ ರೈಲ್ವೆ ಸಂಪರ್ಕವುಂಟು
    ಇಲ್ಲಿ ಉಕ್ಕಿನ ಪೀಠೋಪಕರಣ ಮತ್ತು ಕೈಮಗ್ಗದ ಬಟ್ಟೆ ತಯಾರಿಸುತ್ತಾರೆ. ಕೈಗಾರಿಕಾ ಸಹಕಾರ ಸಂಘಗಳು ನಿಯಂತ್ರಿತ ಮಾರುಕಟ್ಟೆ ಮತ್ತು ವಾಣಿಜ್ಯ ಬ್ಯಾಂಕುಗಳಿವೆ. ಅಂಚೆ, ತಂತಿ, ವಿದ್ಯುತ್ ಸೌಲಭ್ಯಗಳು, ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಗ್ರಾಮಮಟ್ಟದ ಔಷಧಾಲಯಗಳು ಹಾಗೂ ಕೆಲವು ಆಯುವರ್ೇದ ಮತ್ತು ಯುನಾನಿ ಔಷಧಾಲಯಗಳು ಇವೆ.

ಧಾಮರ್ಿಕ ಹಿನ್ನೆಲೆ:
ಪ್ರೇಕ್ಷಣೀಯ ಸ್ಥಳಗಳು
      ಪ್ರಾಚೀನ ಕಾಲದಲ್ಲಿ ನಡೆದ ಮಹತ್ತಾದ ಪೂಣರ್ಾಹುತಿಯ ಪರಿಣಾಮವಾಗಿ ಈ ಸ್ಥಳಕ್ಕೆ ಬೂದಿ ಕೋಟೆ (ಸಂಸ್ಕೃತದಲ್ಲಿ ವಿಭೂತಿಪುರ) ಎಂದು ಹೆಸರು ಬಂದಿರಬಹುದೆಂದು ಊಹಿಸಲಾಗಿದೆ. ಇಲ್ಲಿ 8ನೆಯ ಶತಮಾನದ ಬಾಣರ ಶಾಸನವಿದೆ. 17ನೆಯ ಶತಮಾನದಲ್ಲಿ ಇದು ಶಿರಾದ ಸುಭೇದಾರನ ಕೆಳಗೆ ಪೌಜುದಾರನಾಗಿ ನೇಮಕಗೊಂಡಿದ್ದ ಫತೆ ಮಹಮ್ಮದನ ಜಹಗೀರಿಯಾಗಿತ್ತು. ಅವನ ಮಗ ಹೈದರ್ ಆಲಿ ಜನಿಸಿದ್ದು ಇಲ್ಲಿಯೇ. ಗ್ರಾಮದಲ್ಲಿ ಶಿಥಿಲವಾದ ಕೋಟೆಯ ಅವಶೇಷಗಳಿವೆ. ಕೋಟೆಯ ಒಳಭಾಗದಲ್ಲಿ ವೇಣುಗೋಪಾಲಸ್ವಾಮಿಯ ದೇವಾಲಯವೂ ಹೊರಭಾಗದಲ್ಲಿ ವೆಂಕಟೇಶ್ವರ ದೇವಾಲಯವೂ ಇವೆ. ಊರಿನ ವಾಯುವ್ಯಕ್ಕೆ ಸುಮಾರು 1.5 ಕಿ.ಮೀ. ದೂರದಲ್ಲಿ ಸೋಮೇಶ್ವರ ದೇವಾಲಯವಿದೆ.
 ಬೆಂಗಳೂರು-ಕಡಪ ಪ್ರಾಂತೀಯ ಹೆದ್ದಾರಿ ಈ ತಾಲ್ಲೂಕಿನ ಮೂಲಕ ಹಾದುಹೋಗುತ್ತದೆ. ಕೋಲಾರ-ಚಿಕ್ಕಬಳ್ಳಾಪುರ ರೈಲು ಮಾರ್ಗ ಶ್ರೀನಿವಾಸಪುರ ಮುಖಾಂತರ ಹಾದುಹೋಗುವುದು. ಈ ತಾಲ್ಲೂಕಿನ ಪ್ರೇಕ್ಷಣೀಯ ಸ್ಥಳಗಳಲ್ಲಿ ಶ್ರೀನಿವಾಸಪುರದ ದಕ್ಷಿಣಕ್ಕೆ 5 ಕಿ.ಮೀ. ದೂರದಲ್ಲಿರುವ ಹೆಬ್ಬೆಟ್ಟ ಒಂದು. ಇಲ್ಲಿ ಗಂಗರ ದೊರೆ ಮಾರಸಿಂಹನ ಕಾಲದ (10ನೆಯ ಶತಮಾನ) ಯಂತ್ರದ ಕಲ್ಲು (ಗೋಕಲ್ಲು) ಇದ್ದು ಇದನ್ನು ತೊಳೆದ ನೀರು ಪಶುಗಳಿಗೆ ಔಷಧವಾಗಿ ರೋಗಗಳನ್ನು ಗುಣಪಡಿಸುತ್ತದೆಂಬ ನಂಬಿಕೆಯಿದೆ.
 ಶ್ರೀನಿವಾಸಪುರ ಈ ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಪಟ್ಟಣ. ಕೋಲಾರದ ಈಶಾನ್ಯಕ್ಕೆ 24 ಕಿ.ಮೀ. ದೂರದಲ್ಲಿದೆ. ಜನಸಂಖ್ಯೆ 22,926. ಪಾಪನಪಲ್ಲಿ ಈ ಊರಿಗಿದ್ದ ಹಿಂದಿನ ಹೆಸರು. ದಿವಾನ್ ಪೂರ್ಣಯ್ಯನವರು ತಿರುಪತಿಯಿಂದ ಹಿಂದಿರುಗುತ್ತ ಈ ಊರಿಗೆ ಬಂದು, ತಮ್ಮ ಮಗ ಶ್ರೀನಿವಾಸಮೂತರ್ಿಗಳ ಹೆಸರಿನಲ್ಲಿ ಇದಕ್ಕೆ ಶ್ರೀನಿವಾಸಪುರವೆಂದು ನಾಮಕರಣ ಮಾಡಿದರು. ಈ ಊರಿನ ಪೂರ್ವಕ್ಕೆ ಸು. 3 ಕಿ.ಮೀ. ದೂರದಲ್ಲಿ ಹರಳುಕೋಟೆ ಎಂಬ ಪುರಾತನ ಪಟ್ಟಣವಿತ್ತೆಂದು ಪ್ರತೀತಿ. ಬಾಣರಸ, ವಿಕ್ರಮಾದಿತ್ಯ ಮತ್ತು ಪಲ್ಲವ-ಇವರಿಗೆ ಸಂಬಂಧಿಸಿದ ಶಾಸನಗಳು ಈ ಊರಿನಲ್ಲಿ ದೊರೆತಿವೆ.
    ಮಾಲೂರು ತಾಲ್ಲೂಕಿನ ಮುಖ್ಯ ಸ್ಥಳಗಳಲ್ಲಿ ಚಿಕ್ಕತಿರುಪತಿ ಒಂದು ಪುಣ್ಯಕ್ಷೇತ್ರ. ಮಡಿವಾಳ ಗ್ರಾಮದಲ್ಲಿ ಚೋಳರ ಕಾಲದ ಗಂಗಾಧರೇಶ್ವರ ದೇವಾಲಯವಿದೆ. ಮಾಲೂರಿನ ಉತ್ತರಕ್ಕಿರುವ ತೋರಣಹಳ್ಳಿಯಲ್ಲಿ ದನಗಳಿಗೆ ಬರುವ ಚಪ್ಪೆಜಾಡ್ಯವನ್ನು ವಾಸಿಮಾಡುವ ದೇವರೆಂಬ ನಂಬಿಕೆಯುಳ್ಳ ಸಪ್ಪಲಮ್ಮನ ದೇವಾಲಯವಿದೆ. ಇಲ್ಲಿ ಪ್ರತಿವರ್ಷ ಪುಷ್ಯಮಾಸದಲ್ಲಿ ದನಗಳ ಜಾತ್ರೆ ನಡೆಯುತ್ತದೆ. ಶಿವಾರಪಟ್ಟಣದಲ್ಲಿ ಗಂಗದೊರೆ ಶ್ರೀಪುರುಷನ ಕಾಲದ ಶಿಲಾಶಾಸನಗಳಿವೆ. ಚಿಕ್ಕಕಡತೂರಿನಲ್ಲಿ ಪ್ರಾಚೀನ ಕಾಲದ ವೀರರ ಗುಡಿಗಳಿವೆ. ಟೇಕಲ್ ಪವಿತ್ರ ಸ್ಥಳ. ಮಾಸ್ತಿ ಹೋಬಳಿ ಕೇಂದ್ರ ಮತ್ತು ದೊಡ್ಡ ಗ್ರಾಮ. ಈ ತಾಲ್ಲೂಕಿನ ವಿರೂಪಾಕ್ಷಪುರದಲ್ಲಿ ವಿಜಯನಗರದ ದೊರೆ ಎರಡನೆಯ ದೇವರಾಯನ ಕಾಲದ ವಿರೂಪಾಕ್ಷ ದೇವಾಲಯವಿದೆ.
ವಕ್ಕಲೇರಿ ಬೆಟ್ಟದಲ್ಲಿರುವ ಮಾರ್ಕಂಡೇಶ್ವರ ದೇವಾಲಯಕ್ಕೆ ಮಲ್ಲಿಗೆ ಹೂವನ್ನು ಮಾಲೂರಿನ ತೋಟಗಳಿಂದ ಕಳುಹಿಸುತ್ತಿದ್ದುದರಿಂದ ಈ ಊರಿಗೆ ಹಿಂದೆ ಮಲ್ಲಿಕಾಪುರ ಅಥವಾ ಮಲ್ಲಿಗೆಪಟ್ಟಣವೆಂಬ ಹೆಸರಿತ್ತು ಎನ್ನಲಾಗಿದೆ. ಈ ಊರು 16ನೆಯ ಶತಮಾನದಲ್ಲಿ ಹೊಸಕೋಟೆಯ ನಾಯಕ ತಿಮ್ಮೇಗೌಡನ ಅಧೀನದಲ್ಲಿದ್ದು ಅನಂತರ ಬಿಜಾಪುರದ ಆಡಳಿತಕ್ಕೆ ಸೇರಿದ್ದು ಹಲವು ಮನ್ಸಬ್ದಾರರಿಗೆ ಜಹಗೀರಿಯಾಗಿ ನೀಡಲಾಗಿತ್ತು. ಮರಾಠರ ಕೈವಶವಾದ ಈ ಊರನ್ನು ರಜಪೂತ ಜಮೀನ್ದಾರ ಹ್ರಿದರಾಮ್ಸಿಂಗ್ ತನ್ನ ವಶಪಡಿಸಿಕೊಂಡು ವಿಸ್ತರಿಸಿ ಊರಿಗೆ ಮಾಲೂರು ಎಂದು ಹೆಸರಿಸಿದ. ಹೈದರ್ ಆಕ್ರಮಿಸಿಕೊಳ್ಳುವ ತನಕ ಈ ಊರನ್ನು ಹ್ರಿದರಾಮ್ ಸಿಂಗನ ವಂಶಜರೇ ಆಳುತ್ತಿದ್ದರು.
 ಶಂಕರನಾರಾಯಣಸ್ವಾಮಿ, ಧರ್ಮರಾಯಸ್ವಾಮಿ, ಬೀರೇಶ್ವರಸ್ವಾಮಿ ಮತ್ತು ಕೋದಂಡರಾಮಸ್ವಾಮಿ ದೇವಾಲಯಗಳು ಇಲ್ಲಿಯ ಪ್ರಮುಖ ಗುಡಿಗಳು. ಕೋದಂಡರಾಮಸ್ವಾಮಿ ದೇವಾಲಯದ ಮುಂಭಾಗದಲ್ಲಿ ಒಂದು ದೊಡ್ಡ ಪುಷ್ಕರಿಣಿ ಇದೆ. ಫಾಲ್ಗುಣಮಾಸದಲ್ಲಿ ಶಂಕರನಾರಾಯಣಸ್ವಾಮಿಗೆ ಏಳು ದಿನಗಳು ವಿಶೇಷ ಪೂಜೆ ಮತ್ತು ರಥೋತ್ಸವ ನಡೆಯುತ್ತದೆ. ಚೈತ್ರಮಾಸದಲ್ಲಿ ಈ ಊರಿನಲ್ಲಿ ನಡೆಯುವ ಧರ್ಮರಾಯಸ್ವಾಮಿ ಕರಗ ಪ್ರಸಿದ್ಧ.
       ಬಂಗಾರಪೇಟೆ ತಾಲೂಕಿನ ಪ್ರಾಚೀನ ಕಾಲದಲ್ಲಿ ನಡೆದ ಮಹತ್ತಾದ ಪೂಣರ್ಾಹುತಿಯ ಪರಿಣಾಮವಾಗಿ ಈ ಸ್ಥಳಕ್ಕೆ ಬೂದಿ ಕೋಟೆ (ಸಂಸ್ಕೃತದಲ್ಲಿ ವಿಭೂತಿಪುರ) ಎಂದು ಹೆಸರು ಬಂದಿರಬಹುದೆಂದು ಊಹಿಸಲಾಗಿದೆ. ಇಲ್ಲಿ 8ನೆಯ ಶತಮಾನದ ಬಾಣರ ಶಾಸನವಿದೆ. 17ನೆಯ ಶತಮಾನದಲ್ಲಿ ಇದು ಶಿರಾದ ಸುಭೇದಾರನ ಕೆಳಗೆ ಪೌಜುದಾರನಾಗಿ ನೇಮಕಗೊಂಡಿದ್ದ ಫತೆ ಮಹಮ್ಮದನ ಜಹಗೀರಿಯಾಗಿತ್ತು. ಅವನ ಮಗ ಹೈದರ್ ಆಲಿ ಜನಿಸಿದ್ದು ಇಲ್ಲಿಯೇ. ಗ್ರಾಮದಲ್ಲಿ ಶಿಥಿಲವಾದ ಕೋಟೆಯ ಅವಶೇಷಗಳಿವೆ. ಕೋಟೆಯ ಒಳಭಾಗದಲ್ಲಿ ವೇಣುಗೋಪಾಲಸ್ವಾಮಿಯ ದೇವಾಲಯವೂ ಹೊರಭಾಗದಲ್ಲಿ ವೆಂಕಟೇಶ್ವರ ದೇವಾಲಯವೂ ಇವೆ. ಊರಿನ ವಾಯುವ್ಯಕ್ಕೆ ಸುಮಾರು 1.5 ಕಿ.ಮೀ. ದೂರದಲ್ಲಿ ಸೋಮೇಶ್ವರ ದೇವಾಲಯವಿದೆ.
       ಬೇತಮಂಗಲ, ಬೂದಿಕೋಟೆ, ಹುನಕುಂದ ಇವು ತಾಲ್ಲೂಕಿನ ಐತಿಹಾಸಿಕ ಮತ್ತು ಪುರಾತನ ಸ್ಥಳಗಳು. ಬೇತಮಂಗಲ ಕೋಲಾರಕ್ಕೆ 29 ಕಿಮೀ. ದಕ್ಷಿಣದಲ್ಲಿ ಪಾಲಾರ್ ನದಿಯ ಬಲದಂಡೆಯ ಮೇಲಿದೆ. ಇದೊಂದು ಪ್ರವಾಸಿ ಕೇಂದ್ರ. ಇಲ್ಲಿರುವ ದೊಡ್ಡ ಕೆರೆಯ ಮೇಲೆ ದೋಣಿ ವಿಹಾರ ಸೌಕರ್ಯವಿದೆ. 1864ರವರೆಗೆ ಈ ಊರೇ ತಾಲ್ಲೂಕಿನ ಮುಖ್ಯಸ್ಥಳವಾಗಿತ್ತು. ಬಂಗಾರಪೇಟೆ-ಮುಳಬಾಗಿಲು ರಸ್ತೆ ಈ ಊರಿನ ಮೂಲಕ ಸಾಗುತ್ತದೆ. ಬಾಣ ದೊರೆ ಬಹುಶಃ ಸ್ಥಾಪಿಸಿದ ವಿಜಯಾದಿತ್ಯಮಂಗಲವೇ ಬೇತಮಂಗಲವಾಗಿದೆಯೆನ್ನಲಾಗಿದೆ. ನೊಳಂಬರ ಕಾಲದ ಎರಡು ಶಿಲಾಶಾಸನಗಳು ಇಲ್ಲಿಯ ಗಂಗಮ್ಮ ದೇವಾಲಯದಲ್ಲಿವೆ. ಇಲ್ಲಿರುವ ಕೆರೆ ಯಾವಾಗ ನಿಮರ್ಾಣವಾಯಿತೆಂಬುದು ಗೊತ್ತಿಲ್ಲ. ಇರಿವ ನೊಳಂಬ 950ರಲ್ಲಿ ಇದನ್ನು ದುರಸ್ತು ಮಾಡಿಸಿದ. ಕೋಲಾರ ಚಿನ್ನದ ಗಣಿಗೆ ಇಲ್ಲಿಂದ ನೀರು ಪೂರೈಕೆಯಾಗುತ್ತದೆ. ವಿಜಯೇಂದ್ರ ದೇವಾಲಯ ಇಲ್ಲಿಯ ಪ್ರಮುಖ ದೇವಸ್ಥಾನ. ಬೂದಿಕೋಟೆ ಬಂಗಾರಪೇಟೆಗೆ 13 ಕಿಮೀ. ದಕ್ಷಿಣದಲ್ಲಿದೆ. ಇದು ಮಾರ್ಕಂಡೇಯ ನದಿಯ ಎರಡು ಕವಲುಗಳ ನಡುವೆ ಇದೆ. ಇದೊಂದು ಹೋಬಳಿ ಕೇಂದ್ರ. ಸಂಸ್ಕೃತದ ವಿಭೂತಿಪುರ ಎಂಬುದು ಬೂದಿಕೋಟೆ ಎಂದಾಗಿದೆಯೆನ್ನಲಾಗಿದೆ. ಇಲ್ಲಿ 8ನೆಯ ಶತಮಾನದ ಬಾಣನ ಶಾಸನವಿದೆ. ಇದು ಹೈದರ್ ಅಲಿಯ ಜನ್ಮಸ್ಥಳ. ಹೈದರನ ತಂದೆ ಫತೆ ಮಹಮ್ಮದನಿಗೆ ಇದು ಜಹಗೀರಾಗಿತ್ತು. ಶಿರಾದ ಸುಬೇದಾರನಿಂದ ಘೌಜುದಾರನಾಗಿ ನೇಮಕಗೊಂಡಾಗ ಅವನಿಗೆ ಈ ಜಹಗೀರನ್ನು ನೀಡಲಾಗಿತ್ತು. ಕೋಟೆಯೊಳಗೆ ಒಂದು ತಿಳಿನೀರಿನ ತೊರೆಯಿದೆ. ಇಲ್ಲಿ ವೆಂಕಟರಮಣ ಮತ್ತು ಸೋಮೇಶ್ವರ ದೇವಾಲಯಗಳಿವೆ. ಬಂಗಾರಪೇಟೆಗೆ 13 ಕಿಮೀ ಈಶಾನ್ಯದಲ್ಲಿರುವ ಹುನಕುಂದದಲ್ಲಿ ಅನೇಕ ಶಾಸನಗಳಿವೆ. ಊರಿನ ಬಳಿಯ ಗುಡ್ಡದ ಮೇಲೆ ಶಿವನ ದೇಗುಲವಿದೆ. ಬಂಗಾರಪೇಟೆಯ ಉತ್ತರದಲ್ಲಿರುವ ಯಲಬುಗರ್ಿಯಲ್ಲಿ ವೆಂಕಟರಮಣ ದೇವಾಲಯವಿದೆ.
ಕೋಲಾರ ತಾಲೂಕಿನ ಪ್ರೇಕ್ಷಣೀಯ ಸ್ಥಳಗಳಲ್ಲಿ ಅಂತರಗಂಗೆ ಒಂದು. ಹಿಂದೂ ಜನರಿಗೆ ಅತ್ಯಂತ ಪವಿತ್ರವಾದ ತೀರ್ಥಗಳಲ್ಲಿ ಗಂಗೆ ಬಹಳ ಪ್ರಸಿದ್ಧವಾದುದು. ಸಮಗ್ರ ಭಾರತದಲ್ಲಿ ಆ ಹೆಸರಿನ ಹಲವು ತೀರ್ಥಗಳನ್ನು ನಾವು ಕಾಣಬಹುದು: ಪಾತಾಳಗಂಗೆ, ಶಿವಗಂಗೆ, ಸಿದ್ಧಗಂಗೆ, ದೇವಗಂಗೆ ಮೊದಲಾದುವುಗಳು ಇದಕ್ಕೆ ಉದಾಹರಣೆಗಳು. ಅಂತರಗಂಗೆ ಎಂಬುದು ಇದೇ ವರ್ಗದ ಒಂದು ತೀರ್ಥ. ಈ ಹೆಸರಿನ ಒಂದು ತೀರ್ಥ ಕೋಲಾರಕ್ಕೆ ಸಮೀಪದಲ್ಲಿರುವ ಶತಶೃಂಗಪರ್ವತದಲ್ಲಿದೆ. ಇಲ್ಲಿ ಸ್ನಾನಪೂಜಾದಿಗಳು ಬಹಳ ಪವಿತ್ರವೆಂದು ಭಕ್ತರು ಭಾವಿಸುತ್ತಾರೆ. ಬೆಂಗಳೂರು ಜಿಲ್ಲಾ ಕುದೂರಿನಲ್ಲಿಯೂ ಈ ಹೆಸರಿನ ಒಂದು ತೀರ್ಥವಿದೆ.
     ಅತ್ಯಂತ ಪ್ರಾಚೀನ ದೇವಾಲಯಗಳು ಬೆಟ್ಟದ ನೈಋತ್ಯದಲ್ಲಿ ಒಂದು ದೊಡ್ಡ ಪ್ರಾಂಗಣದ ಮಧ್ಯೆ ಇವೆ.  ಇವೆಲ್ಲವೂ ಶೈವ ದೇವಾಲಯಗಳು.  ಮಧ್ಯದಲ್ಲಿ ಪಾರ್ವತೀ ದೇವಾಲಯವೂ ಅದರ ಸುತ್ತಲೂ ರಾಮೇಶ್ವರ, ಲಕ್ಷ್ಮಣೇಶ್ವರ, ಭರತೇಶ್ವರ, ಶತ್ರುಘ್ನೇಶ್ವರ, ಸುಗ್ರೀವೇಶ್ವರ, ಅಂಜನೇಶ್ವರ ಮುಂತಾದ ಗುಡಿಗಳಿವೆ. ಇವುಗಳಲ್ಲಿ ಲಕ್ಷ್ಮಣೇಶ್ವರ ಗುಡಿ ಅತ್ಯಂತ ಸುಂದರ ಕಟ್ಟಡ.  ಗರ್ಭಗೃಹ, ಅಂತರಾಳ ಮತ್ತು ನವರಂಗವಿರುವ ಈ ಗುಡಿಯ ಹೊರಮೈಯ ಸುತ್ತಲೂ ಬುಡದಲ್ಲಿ ಆನೆ, ಸಿಂಹ, ಯಾಳಿ, ಮಕರ, ಕುದುರೆಲಾಳದಾಕೃತಿಯ ಕಮಾನುಗಳು-ಇವುಗಳಿಂದ ಅಲಂಕೃತವಾದ ಆರು ಪಟ್ಟಿಕೆಗಳಿವೆ.  ಮೇಲೆ ಅಲ್ಲಲ್ಲಿ ಯಕ್ಷ, ಶಿವ, ದುಗರ್ಿ, ಗಣೇಶ, ಭೈರವ, ಭೈರವಿ, ವಿಷ್ಣು ಮುಂತಾದ ಶಿಲ್ಪಗಳಿರುವ, ಸಮಾನಾಂತರಗಳಲ್ಲಿ ಅರ್ಧಕಂಭಗಳಿಂದ (ಪಿಲ್ಯಾಸ್ಟರ್) ಛೇದಿಸಲ್ಪಟ್ಟ ಎತ್ತರವಾದ ಭಿತ್ತಿಯಿದೆ. ಇದರಲ್ಲಿ ಮಧ್ಯೆ ಮಧ್ಯೆ ಮಹಿಷಾಸುರಮದರ್ಿನಿ, ಸೂರ್ಯ, ನಟರಾಜ ಮುಂತಾದ ವಿಗ್ರಹಗಳನ್ನೊಳಗೊಂಡ ಜಾಲಂಧ್ರಗಳೂ ಇದ್ದು ದೇವಾಲಯದ ಸೊಬಗನ್ನು ಹೆಚ್ಚಸಿವೆ.  ಒಳಭಾಗದ ನವರಂಗದಲ್ಲಿ, ಮಧ್ಯೆ ಉಮಾಮಹೇಶ್ವರ ಮತ್ತು ಸುತ್ತಲೂ ಅಷ್ಟ ದಿಕ್ಪಾಲಕರ ಕೆತ್ತನೆಯಿರುವ ಒಂದು ಮೋಹಕ ಭುವನೇಶ್ವರಿಯಿದೆ.  ರಚನಾರೀತಿಯಲ್ಲಿ, ಲಕ್ಷ್ಮಣೇಶ್ವರ ದೇವಾಲಯ ಕಂಚಿಯ ದೇವಾಲಯಗಳ ಸಂಪ್ರದಾಯದಿಂದ ಬೆಳೆದು ಬಂದ ನೊಳಂಬವಾಸ್ತುಶಿಲ್ಪ ಶೈಲಿಯ ಒಂದು ಉತ್ತಮ ಪ್ರತೀಕವಾಗಿದೆ.  ವಾಸ್ತುಶೈಲಿಯಿಂದ, ಮತ್ತು ಸ್ಥಳೀಯ ಶಾಸನಗಳ ಸಾಂದಭರ್ಿಕ ಮಾಹಿತಿಗಳಿಂದ ಈ ದೇವಾಲಯ ಕ್ರಿ.ಶ. ಹತ್ತನೆಯ ಶತಮಾನದಲ್ಲಿ ಕಟ್ಟಲಾಗಿರಬೇಕೆಂದು ಹೇಳಬಹುದು.  ಆದರೆ ದೇವಾಲಯದ ಮೇಲುಭಾಗದಲ್ಲಿರುವ ಗೋಪುರ ಮುಂತಾದ ಇಟ್ಟಿಗೆಯ ಸೇರ್ಪಡೆಗಳು ಸುಮಾರು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಆದವುಗಳು.  ಶತ್ರುಘ್ನೇಶ್ವರ, ಅಂಜನೇಶ್ವರ ಮತ್ತು ಭರತೇಶ್ವರ ದೇವಾಲಯಗಳೂ ಸುಮಾರು ಲಕ್ಷ್ಮಣೇಶ್ವರದ ಮಾದರಿಯವೇ. ಕಾಲದಲೂ ಇವುಗಳಲ್ಲಿ ಬಹಳಷ್ಟು ಅಂತರವಿರಲಾರದೆಂಬುದು ಈ ಕೆಲವು ದೇವಾಲಯಗಳಲ್ಲಿ ಕಂಡುಬಂದಿರುವ ನೊಳಂಬ ಮತ್ತು ಗಂಗರ ಶಾಸನಗಳಿಂದ ಸಿದ್ಧವಾಗುತ್ತದೆ.  ಇದೇ ಕಾಲದ ರಾಮೇಶ್ವರ ದೇವಾಲಯ ದ್ರಾವಿಡಶೈಲಿಯ ಮೂಲ ಶಿಖರವನ್ನು ಇನ್ನೂ ಉಳಿಸಿಕೊಂಡಿದೆ.  ಈ ದೇವಾಲಯದಲ್ಲಿ ಮೂಲಗರ್ಭಗುಡಿ ಮತ್ತು ನವರಂಗದ ಕೆಲವು ಭಾಗಗಳು ರಚನಾರೀತಿಯಲ್ಲಿ ಇತರ ಸಮಕಾಲೀನ ದೇವಾಲಯಗಳಂತೆಯೇ ಇದ್ದರೂ ಮುಂದೆ 12-13ನೆಯ ಶತಮಾನದ ಕೆಲವು ಸೇರ್ಪಡೆಗಳಿಂದಾಗಿ ಕಟ್ಟಡದ ಅಂದಕ್ಕೆ ಸ್ವಲ್ಪ ಕುಂದು ಬಂದಿದೆ.  ಮಧ್ಯದಲ್ಲಿರುವ ಪಾರ್ವತೀ ದೇವಾಲಯ ಗರ್ಭಗೃಹ, ನವರಂಗ ಮತ್ತು ಮುಖಮಂಟಪಗಳನ್ನೊಳಗೊಂಡಿರುವ ಸಾಮಾನ್ಯ ಕಟ್ಟಡ.  ಇಲ್ಲಿಯ ವಾಸ್ತುರಚನೆಯಲ್ಲಾಗಲೀ ಶಿಲ್ಪಗಳಲ್ಲಾಗಲೀ ಈ ಹಿಂದಿನ ದೇವಾಲಯಗಳಲ್ಲಿರುವ ಪ್ರಬುದ್ದತೆ ಕಂಡುಬರುವುದಿಲ್ಲ.  13ನೆಯ ಶತಮಾನದಲ್ಲಿ ಕೋಲಾರ ಪ್ರದೇಶದಲ್ಲಿ ಆಳುತ್ತಿದ್ದ ತಮಿಳು ಗಂಗ ಅರಸು ಇಳವಂಜಿ ವಾಸುದೇವರಾಯ ಇದನ್ನು ಕಟ್ಟಿಸಿರಬಹುದೆಂದು ಊಹಿಸಲು ಆಧಾರಗಳಿವೆ.  ದೇವಾಲಯದ ಒಳಗೆ ಇಳವಂಜಿ ವಾಸುದೇವರಾಯ ಮತ್ತು ಅವನ ತಮ್ಮನದೆಂದು ಹೇಳಲಾಗುವ ಎರಡು ಭಕ್ತ ವಿಗ್ರಹಗಳಿವೆ. ಈ ದೇವಾಲಯಗಳ ಗುಂಪಿನಲ್ಲೇ ಇರುವ ಕಾಮಾಕ್ಷಿ ಮತ್ತು ಇತರ ಗುಡಿಗಳು ಅನಂತರದ ಕಟ್ಟಡಗಳು.
 ಬೆಟ್ಟ ಹತ್ತುವಲ್ಲಿ ಸಿಗುವ ಒಂದು ಗುಹೆಯನ್ನು ವಾಲ್ಮೀಕಿಯ ಗುಹೆಯೆಂದು ಕರೆಯುತ್ತಾರೆ.  ಇದರ ಸಮೀಪದಲ್ಲಿ ಚೋಳ ಸಂಪ್ರದಾಯದ ಒಂದು ಸಣ್ಣ ದೇವಾಲಯವಿದೆ.  ಇಲ್ಲಿಂದ ಅನತಿ ದೂರದಲ್ಲಿರುವ ಏಕಾಂತರಾಮಯ್ಯನ ದೇವಾಲಯ ಸಹ ಚೋಳ ಸಂಪ್ರದಾಯದ ಕಟ್ಟಡ.  ಆದರೆ ಇದರ ನವರಂಗಭಾಗ ಹೊಯ್ಸಳ ಮುಮ್ಮಡಿ ಬಲ್ಲಾಳನ ಕಾಲಕ್ಕೆ ಸೇರಿದುದು. ಬೆಟ್ಟದ ಮೇಲುಗಡೆ ಇರುವ ಸೀತಾಪಾರ್ವತೀ ಗುಡಿ ಹೊರನೋಟಕ್ಕೆ ಈಚಿನ ಬಹುಸಾಮಾನ್ಯ ಕಟ್ಟಡದಂತೆ ಕಂಡರೂ ಒಳಭಾಗ ಪುರಾತನವಾದುದು.  ಇದು ನೊಳಂಬ ಅರಸರ ಕಾಲದ (9-10ನೆಯ ಶತಮಾನ) ಗುಹಾದೇವಾಲಯವೆಂದು ಕಾಣುತ್ತದೆ.  ಆವನಿ ಗ್ರಾಮದಲೂ ಬೆಟ್ಟದ ಮೇಲೂ 9-10ನೆಯ ಶತಮಾನದಿಂದ ಹಿಡಿದು ಇತ್ತೀಚಿನವರೆಗಿನ ಗಂಗ, ನೊಳಂಬ, ಚೋಳ, ಹೊಯ್ಸಳ, ತಮಿಳುಗಂಗ, ವಿಜಯನಗರ ಮತ್ತು ಪಾಳೆಯಗಾರರ ಆಳ್ವಿಕೆಗಳಿಗೆ ಸಂಬಂಧಿಸಿದ ಐವತ್ತಕ್ಕೂ ಹೆಚ್ಚು ಶಾಸನಗಳು ಬೆಳಕಿಗೆ ಬಂದಿವೆ.       
ಕೋಲಾರ ಹೋಬಳಿ ಗ್ರಾಮಗಳಲ್ಲದೆ ಬೆಳ್ಳೂರು, ಗರುಡನಪಾಳ್ಯ, ಪಾಪರಾಜನ ಹಳ್ಳಿ, ಸೀತಿ, ಸುಗಟೂರು ತೇರುಹಳ್ಳಿ, ವಾಣರಾಸಿ, ವಕ್ಕಲೇರಿ, ವೇಮಗಲ್ಲು ಮೊದಲಾದವು ಈ ತಾಲ್ಲೂಕಿನಲ್ಲಿನ ಮುಖ್ಯ ಸ್ಥಳಗಳು. ಗರುಡನಪಾಳ್ಯದ ಬಳಿಯ ಚಿಕ್ಕಗುಡ್ಡದಲ್ಲಿ ಸ್ಥಳೀಯವಾಗಿ ಪಾಂಡವರ ಗುಡಿಗಳೆಂದು ಕರೆಯುವ ಬೃಹತ್ ಶಿಲಾಸಮಾದಿಗಳಿವೆ. ಕೋಲಾರದ ಬಳಿಯ ಬೆಟ್ಟವೊಂದರ ಮೇಲಿರುವ ಪಾಪರಾಜನ ಹಳ್ಳಿಯಲ್ಲಿ ಒಂದು ಶಿವ ದೇವಾಲಯ ಮತ್ತು ಉಸ್ಮಾನ್ ಅಲಿಯ ದರ್ಗ ಅಲ್ಲದೆ ಭೂತಗೌಡನ ಗವಿ, ಮುಗಲ್ ಸುಬೇದಾರನ ಕೋಟೆ ಮೊದಲಾದವು ಇವೆ. ಮತ್ತೊಂದು ಬೆಟ್ಟದ ಮೇಲೆ ತೇರುಹಳ್ಳಿ ಗ್ರಾಮದಲ್ಲಿ ಸು.12-13ನೆಯ ಶತಮಾನದ ಗಂಗಾಧರೇಶ್ವರನ ಬೃಹತ್ ದೇವಾಲಯ ಮತ್ತು ಕೆಲವು ಪ್ರಾಗೈತಿಹಾಸಿಕ ಅವಶೇಷಗಳು ಇವೆ. ಬೆಳ್ಳೂರು ಗಂಗರ ಕಾಲದಿಂದಲೂ ಅಸ್ತಿತ್ವದಲ್ಲಿದ್ದು ಹೊಯ್ಸಳರ ಕಾಲದಲ್ಲಿ ವಿಷ್ಣುವರ್ಧನ ಚತುವರ್ೆದಿ ಮಂಗಲಂ ಎಂದು ಪ್ರಸಿದ್ಧವಾಗಿದ್ದ ಶ್ರೀವೈಷ್ಣವ ಅಗ್ರಹಾರವಾಗಿತ್ತು. ಮಣವಾಲ ಮಹಾಮುನಿಯ ಶಿಷ್ಯರಾದ ಪ್ರತಿವಾದಿ ಭಯಂಕರರ ಅಣ್ಣ ಇಲ್ಲಿಯವರೆಂದು ಪ್ರತೀತಿ. ಇಲ್ಲಿ ರಾಮದೇವಾಲಯವಿದೆ. ವೆಂಕಟಾಪುರದಲ್ಲಿ ವೆಂಕಟರಮಣ ದೇವಾಲಯವಿದೆ. ವಕ್ಕಲೇರಿಯ ಬೆಟ್ಟದ ಮೇಲೆ ಪ್ರಾಚೀನ ಮಾರ್ಕಂಡೇಶ್ವರ ದೇವಾಲಯವಿದೆ. ಪ್ರತಿ ಮಾಘ ಮಾಸದಲ್ಲಿ ಸು.20 ದಿನಗಳ ಕಾಲ ಇಲ್ಲಿ ದೊಡ್ಡ ಜಾತ್ರೆ ನಡೆಯುತ್ತದೆ. ವಾಣರಾಸಿಯಲ್ಲಿ ಸ್ಥಳೀಯ ವೀರ ಇರಳಪ್ಪನ ದೇವಾಲಯವಿದೆ. ಪ್ರತಿ ಚೈತ್ರಮಾಸದಲ್ಲಿ ಇಲ್ಲೂ ದೊಡ್ಡ ಜಾತ್ರೆ ನಡೆಯುತ್ತವೆ. ಹೋಳೂರಿನಲ್ಲಿ ಲಕ್ಷ್ಮೀನಾರಾಯಣ ದೇವಾಲಯವಿದೆ. ಮಾಘ ಶುದ್ಧ ಪಾಡ್ಯಮಿಯಂದು ಜಾತ್ರೆ ನಡೆಯುತ್ತದೆ. ವೇಮಗಲ್ಲಿನಲ್ಲಿರುವ ದಗರ್ಾ ಪ್ರಸಿದ್ಧವಾದುದು.
   ಕುರುಡಮಲೆ ಇತಿಹಾಸಪ್ರಸಿದ್ಧ ಗ್ರಾಮ. ಇಲ್ಲಿ ಅನೇಕ ಪ್ರಾಚೀನ ಅವಶೇಶಗಳು ದೊರಕಿವೆ. ಈ ಪ್ರದೇಶ ಚೋಳರ ಆಳ್ವಿಕೆಗೆ ಬಳಪಟ್ಟಿದ್ದಾಗ ಇದೊಂದು ಪ್ರಮುಖಸ್ಥಳವಾಗಿದ್ದುದರಿಂದ ಇಲ್ಲಿ ಕೆಲವು ಉತ್ತಮ ದೇವಾಲಯಗಳನ್ನು ನಿಮರ್ಿಸಲಾಗಿತ್ತು. ಸ್ಥಳ ಪುರಾಣದ ರೀತ್ಯಾ ಇದು ಕೌಂಡಿನ್ಯಕ್ಷೇತ್ರ. ಕೃತ, ತ್ರೇತಾ ಮತ್ತು ದ್ವಾಪರಯುಗಗಳಲ್ಲಿ ಇದಕ್ಕೆ ಗಣೇಶಗಿರಿ, ಕೂಟಾಚಲ ಮತ್ತು ಯಾದವಾಚಲಗಳೆಂಬ ಹೆಸರುಗಳಿದ್ದುವೆಂದೂ ಕಲಿಯುಗದಲ್ಲಿ ಕೌಂಡಿನ್ಯಕ್ಷೇತ್ರವಾಗಿದೆಯೆಂದೂ ಪ್ರತೀತಿಯಿದೆ. ಮತ್ತೊಂದು ಐತಿಹ್ಯದ ರೀತ್ಯಾ ಕುರುಡುಮಲೆ ಎಂಬುದು ಕೂಡುಮಲೆಯ ರೂಪಾಂತರ. ಸಕಲದೇವತೆಗಳೂ ಮಹಾಗಣಪತಿಯ ಅರ್ಚನೆಗಾಗಿ ಇಲ್ಲಿ ಸೇರುತ್ತಿದ್ದುದರಿಂದ ಇವಕ್ಕೆ ಕೂಡುಮಲೆಯೆಂದು ಹೆಸರಾಯಿತಂತೆ.
 ಕುರುಡುಮಲೆ ಮಹಾಗಣಪತಿ ಮಂದಿರ ಇಲ್ಲಿಯ ಪ್ರಾಚೀನತಮ ದೇವಾಲಯ. ಬಹುಶಃ ಚೋಳರ ಕಾಲದಲ್ಲಿ ನಿಮರ್ಿತವಾದ ಈ ಮಂದಿರ ಬಹಳ ಸುಂದರಕಲಾಕೃತಿ. ಹೊಯ್ಸಳ ಮತ್ತು ವಿಜಯನಗರ ಅರಸರ ಕಾಲದಲ್ಲಿ ಇದರ ಜೀಣರ್ೋದ್ಧಾರವಾಯಿತು. ಈ ದೇವಾಲಯದ ಮುಂದಿರುವ, ಗಣಪತಿಯ ವಾಹನವಾದ ಮೂಷಿಕದ ಶಿಲ್ಪ ಹಸಿರುಕಲ್ಲಿನಲ್ಲಿ ಮಾಡಲಾದ ಬೃಹದ್ಗಾತ್ರದ ಉತ್ತಮ ಕಲಾಕೃತಿ. ದೇವಾಲಯದ ಗರ್ಭಗೃಹದ (20' ಉದ್ದ, 1 1/2'  ಅಗಲ ಮತ್ತು  16'  ಎತ್ತರ) ಮುಂದಿನ ಹದಿನಾರು ಮೂಲೆಗಳ ಕಂಬಗಳ ಮೇಲಿನ ಶಿಲ್ಪಗಳು ಸಾಧಾರಣವಾಗಿವೆ. ಮಹಾಗಣಪತಿಯ ವಿಗ್ರಹ 2' ಎತ್ತರದ ಪೀಠದಮೇಲೆ 1 1/2 ' ಎತ್ತರದ ಆಸನದಲ್ಲಿ ಕುಳಿತಿದ್ದು 8 1/2' ಎತ್ತರವಿದೆ. ಪಾಶಾಂಕುಶ  ಹಸ್ತನಾದ ಗಣಪತಿ ತನ್ನ ಕೈಯಲ್ಲಿಯ ಮೋದಕವನ್ನು ಸವಿಯುತ್ತಿರುವಂತೆ ರೂಪಿಸಲಾಗಿದೆ. ವಿಗ್ರಹ ಹಾವಿನ ಉದರ ಬಂಧ ಮತ್ತು ಯಜ್ಞೋಪವೀತಗಳನ್ನು ಧರಿಸಿದೆ. ಅದರ ಹೊಟ್ಟೆಯ ಸುತ್ತಳತೆ 13'. ಸುಕನಾಸಿ (10'ಘಿ8') ಮತ್ತು  ನವರಂಗ (25'ಘಿ 25') ಇವು ಈ ಮಂದಿರದ ಇತರ ಭಾಗಗಳು. ನವರಂಗದ ದಕ್ಷಿಣಭಾಗದಲ್ಲಿ 5' ಎತ್ತರದ, ಹನ್ನೆರಡು ಕೈಗಳುಳ್ಳ, ಮಯೂರವಾಹನನಾದ ಕುಮಾರನ ಪ್ರತಿಮೆಯಿದೆ. ಇದೊಂದು ಸುಂದರಶಿಲ್ಪ.
 ಇಲ್ಲಿಯ ಅತ್ಯಂತ ಸುಂದರ ಕಟ್ಟಡ ಸೋಮೇಶ್ವರ ದೇವಾಲಯ. ಇದರಲ್ಲಿ ಗರ್ಭಗುಡಿ (20'ಘಿ10'), ಸುಕನಾಸಿ  (10'ಘಿ8') ಮತ್ತು ನವರಂಗ (25'ಘಿ25') ಇವೆ. ನವರಂಗದ ಅಷ್ಟಮುಖದ ನಾಲ್ಕು ಕಂಬಗಳ ಮೇಲೂ ಸುಂದರವಾದ ಶೈವ - ವೈಷ್ಣವ ವಿಗ್ರಹಗಳನ್ನು ಕೆತ್ತಲಾಗಿದೆ. ಒಂದು ಕಂಬದ ಮೇಲಿರುವ ಆನೆಯನ್ನು ಕೊಲ್ಲುತ್ತಿರುವ ಸಿಂಹದ ಶಿಲ್ಪ ಗಂಗರನ್ನು ಹೊಯ್ಸಳರು ಸೋಲಿಸಿದ ಸಂಕೇತವಿರಬಹುದೆಂದು ಊಹಿಸಲಾಗಿದೆ. ಹೊರಗೋಡೆಗಳ ಮೇಲೆ ಸ್ತಂಭಿಕ ಮತ್ತು ಗೂಡುಗಳ ಸುಂದರ ಅಲಂಕರಣವಿದೆ. ಗರ್ಭಗುಡಿಯಲ್ಲಿರುವ ಲಿಂಗದ ಮುಂಭಾಗದ ಕಿಟಕಿಯ ಬಳಿ ಮೂರು ವ್ಯಕ್ತಿಗಳ ಶಿಲ್ಪಗಳಿವೆ. ಇವು 13 ನೆಯ ಶತಮಾನದಲ್ಲಿ ಚೋಳರ ಸಾಮಂತನಾಗಿದ್ದ ಇಳವಂಜಿ ವಾಸುದೇವರಾಯ ಮತ್ತು ಆತನ ರಾಣಿಯರ ಮೂತರ್ಿಗಳೆಂದು ಗುರುತಿಸಲಾಗಿದೆ. ಈ ದೇವಾಲಯದ ಪ್ರಾಕಾರದಲ್ಲಿ ಪಾರ್ವತಿ ಮತ್ತು ಕಾಮಾಕ್ಷಿ ಅಮ್ಮನವರ ಮಂದಿರಗಳೂ ಇವೆ.
ಪಾಳುಬಿದ್ದಿರುವ ಚೆನ್ನರಾಯಸ್ವಾಮಿ ದೇವಾಲಯ ಸಹ ಆ ಸುಮಾರಿಗೆ ಸೇರಿದ್ದಿರಬಹುದು. ಗ್ರಾಮದ ಉತ್ತರಕ್ಕೆ ಮುರಿದ ತೋರಣದ ಕಂಬಗಳೂ ಮಾಸ್ತಿಕಲ್ಲೊಂದೂ ಇವೆ. ಹೊಯ್ಸಳ ಮುಮ್ಮಡಿ ಬಲ್ಲಾಳ ಆ ಪ್ರದೇಶವನ್ನು  ಆಳುತ್ತಿದ್ದನೆಂದೂ ಆಗ ಹೊರಡಿಸಿದ ವೀರರಾಯಿ ಹಣ ದೊರಕಿವೆಯೆಂದೂ ಹೇಳಲಾಗಿದೆ. ಈ ಪ್ರದೇಶದಲ್ಲಿ ಹಳೆಯ ಊರಿನ ಅವಶೇಷಗಳು ಕಾಣಬರುತ್ತವೆ.
      ಈ ಕಂದೆಲುಗು ನೆಲ ನಾಡಿನ ಸಂಸ್ಕೃತಿಗೆ ಪೂರ್ವಕಾಲದಿಂದ ಏಕೀಕೃತ ಕನರ್ಾಟಕ ರೂಪಗೊಳ್ಳುವವರೆಗೆ ಪೌರಾಣಿಕ, ಧಾಮರ್ಿಕ, ಸಾಮಾಜಿಕ .ಆಥರ್ಿಕ ಹಾಗೂ ಚಾರಿತ್ರಿಕ ಕ್ಷೇತ್ರಗಳಿಗೆ ನೀಡಿರುವ ಕೊಡುಗೆ ಅನುಪಮವಾದುದು ಎಂದರೆ ಅತಿಶಯೋಕ್ತಯಾಗಲಾರದು.